ಆರೋಪಿ ಫೈಜಾನ್ ‘ಪಾಕಿಸ್ತಾನ ಜಿಂದಾಬಾದ, ಹಿಂದುಸ್ತಾನ ಮುರ್ದಾಬಾದ’ ಹೇಳಿದ ಪ್ರಕರಣ

ಜಬಲಪುರ (ಮಧ್ಯಪ್ರದೇಶ) – ‘ಪಾಕಿಸ್ತಾನ ಜಿಂದಾಬಾದ, ಹಿಂದೂಸ್ತಾನ ಮುರ್ದಾಬಾದ’ ಎಂದು ಘೋಷಣೆ ಕೂಗಿದ ಆರೋಪಿ ಫೈಜಾನ್ ಅಕ್ಟೋಬರ್ 22 ರಂದು ಜಬಲಪುರ ಪೊಲೀಸ್ ಠಾಣೆಗೆ ಹಾಜರಾದನು. ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಆದೇಶದಂತೆ ಅವನು ‘ಭಾರತಮಾತಾ ಕಿ ಜೈ’ ಎಂದು ಕೂಗುತ್ತಾ ತ್ರಿವರ್ಣ ಧ್ವಜಕ್ಕೆ 21 ಬಾರಿ ವಂದಿಸಿದನು. ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಆರೋಪಿ ಫೈಜಾನ ಇವನಿಗೆ ಜಾಮೀನು ಮಂಜೂರು ಮಾಡುವಾಗ 50 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡನಿಂದ ಜಾಮೀನು ನೀಡುವಾಗ ಮತ್ತು ಪ್ರಕರಣದ ಅಂತಿಮ ತೀರ್ಪು ಆಗುವವರೆಗೆ ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರದಂದು 21 ಬಾರಿ ತ್ರಿವರ್ಣ ಧ್ವಜವನ್ನು ವಂದಿಸಲು ಮತ್ತು `ಭಾರತಮಾತಾ ಕಿ ಜೈ’ ಎಂದು ಘೋಷಣೆ ನೀಡುವಂತೆ ಆದೇಶಿಸಿದ್ದರು. ಅದರಂತೆ ಆರೋಪಿ ಫೈಜಾನ್ ಅಕ್ಟೋಬರ್ 22ರ ಮಂಗಳವಾರದಂದು ಪೊಲೀಸ್ ಠಾಣೆಗೆ ತೆರಳಿ ಈ ಕೃತಿಯನ್ನು ಮಾಡಿದ್ದಾನೆ.
ಬದ್ಲಾಪುರ: ಬೇಕರಿ ಕೇಕ್ನಲ್ಲಿ ಇಲಿಯ ಹಿಕ್ಕಿ ! : Rat droppings found in bakery cake!
ಮಡಿಕೇರಿ: ದೇವಾಲಯದ ಆವರಣದಲ್ಲಿ ಸಮಾಧಿ: ಹಿಂದೂಗಳಿಂದ ಪ್ರತಿಭಟನೆ : Grave within Temple premises
ದೆಹಲಿ ಪ್ರತಿಭಟನೆ ಹಿನ್ನಲೆಯಲ್ಲಿ ಸಂಸತ್ತಿನ ಕಾರ್ಯಕಲಾಪ ಸ್ಥಗಿತ
ವಕೀಲ ವೀರೇಂದ್ರ ಇಚಲಕರಂಜಿಕರ್ ಅವರಿಗೆ ಆಗಸ್ಟ್ 2 ರಂದು ‘ಸಾರ್ವಜನಿಕ ಕಾಕಾ ಪ್ರಶಸ್ತಿ’ ಪ್ರದಾನ !
‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಶ್ರೀ ಗಣೇಶನಿಗೆ ಅವಮಾನ ಮಾಡಿದ ಜಾಹೀರಾತು ಹಿಂಪಡೆದಿದೆ
ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್