ಪಾಕಿಸ್ತಾನ ಸರಕಾರದಿಂದ ಒಂದು ಕೋಟಿ ರೂಪಾಯಿ ಬಿಡುಗಡೆ

ಲಾಹೋರ್ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿರುವ ಬಾವೊಲಿ ಸಾಹಿಬ್ ಎಂಬ ಹಿಂದೂ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಪಾಕಿಸ್ತಾನ ಸರಕಾರವು 1 ಕೋಟಿ ಪಾಕಿಸ್ತಾನಿ ರೂಪಾಯಿಗಳ ನಿಧಿಯನ್ನು ಅನುಮೋದಿಸಿದೆ. ಈ ದೇವಾಲಯವು 1960 ರಿಂದ ಶಿಥಿಲಾವಸ್ಥೆಯಲ್ಲಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳಿಗೆ ಸಂಬಂಧಿಸಿದ ಸಂಸ್ಥೆಯಾದ ‘ಇವಾಕ್ಯುಯೇಶನ್ ಪ್ರಾಪರ್ಟಿ ಟ್ರಸ್ಟ್’ ದೇವಾಲಯವನ್ನು ನಿರ್ಮಿಸಲಿದೆ. ಈ ದೇವಾಲಯದ ತಳಹದಿ ಅಗೆಯುವ ಕಾರ್ಯವೂ ಆರಂಭವಾಗಿದೆ. ದೇವಾಲಯದ ನಿರ್ಮಾಣ ಪೂರ್ಣಗೊಂಡ ನಂತರ ಅದನ್ನು ಪಾಕ್ ಧರ್ಮಸ್ಥಾನ ಸಮಿತಿಗೆ ಹಸ್ತಾಂತರಿಸಲಾಗುವುದು. 64 ವರ್ಷಗಳ ನಂತರ ಈಗ ಈ ದೇವಸ್ಥಾನದ ನಿರ್ಮಾಣ ಆಗುತ್ತಿರುವುದರಿಂದ ಗ್ರಾಮದಲ್ಲಿನ ಹಿಂದೂಗಳು ಸಂತಸ ವ್ಯಕ್ತಪಡಿಸಿದ್ದಾರೆ.
Pakistani Government approves a fund of 1 Crore rupees to renovate Baoli Sahib Hindu temple in Pakistan after 64 years.
👉 The Pakistani Government’s attempts are to show the world how much the minority Hindus mean to them. Hindus are not so naive as to not understand this.… pic.twitter.com/zmZivtxiHu
— Sanatan Prabhat (@SanatanPrabhat) October 22, 2024
1. ಈ ಗ್ರಾಮದಲ್ಲಿ ಯಾವುದೇ ದೇವಾಲಯವಿಲ್ಲದ ಕಾರಣ ಹಿಂದೂಗಳು ಪೂಜೆಗಾಗಿ ಲಾಹೋರ್ ಅಥವಾ ಸಿಯಾಲ್ ಕೋಟ್ ನಲ್ಲಿರುವ ದೇವಾಲಯಗಳಿಗೆ ಹೋಗಬೇಕಾಗಿತ್ತು. ಆದ್ದರಿಂದ ಈ ದೇವಸ್ಥಾನದ ನಿರ್ಮಾಣ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದರು.
2. ಪಾಕಿಸ್ತಾನ ಧರ್ಮಸ್ಥಾನ ಸಮಿತಿಯ ಅಧ್ಯಕ್ಷ ಸಾವನ್ ಚಂದ್ ಮಾತನಾಡಿ, ನಾವು ಕಳೆದ 20 ವರ್ಷಗಳಿಂದ ಮಂದಿರದ ನಿರ್ಮಾಣಕ್ಕಾಗಿ ಬೆಂಬೆತ್ತುವಿಕೆ ಮಾಡುತ್ತಿದ್ದೇವೆ. ನಮ್ಮ ಪ್ರಯತ್ನಗಳಿಗೆ ಈಗ ಯಶಸ್ಸು ಕಾಣುತ್ತಿವೆ. ಅದಕ್ಕಾಗಿ ಪಾಕಿಸ್ತಾನ ಸರಕಾರಕ್ಕೆ ಆಭಾರಿಯಾಗಿದ್ದೇವೆ. ಈ ನಿರ್ಧಾರದಿಂದಾಗಿ ಈಗ ಗ್ರಾಮದಲ್ಲಿನ ಹಿಂದೂಗಳು ಪೂಜೆ ಸಲ್ಲಿಸಲು ಸಾಧ್ಯವಾಗುವುದು ಎಂದರು.
ಸಂಪಾದಕೀಯ ನಿಲುವುಅಂತಾರಾಷ್ಟ್ರೀಯ ಮಟ್ಟದಲ್ಲಿ ‘ನಾವು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗಾಗಿ ಏನನ್ನಾದರೂ ಮಾಡುತ್ತಿದ್ದೇವೆ’, ಎಂದು ಈ ಮೂಲಕ ತೋರಿಸಿ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಲು ಪಾಕಿಸ್ತಾನ ಸರಕಾರ ಹೀಗೆ ಕಾರ್ಯ ಮಾಡುತ್ತಿದೆ. ಹಿಂದೂಗಳು ಇದನ್ನು ಅರ್ಥ ಮಾಡಿಕೊಳ್ಳದಷ್ಟು ಮೂರ್ಖರಲ್ಲ ! |
ನೇಪಾಳದ ೧ ರೂಪಾಯಿಯ ಹೊಸ ನಾಣ್ಯದಿಂದ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ತೋರಿಸಲಾಗಿದ್ದ ನಕ್ಷೆಯನ್ನು ತೆಗೆದುಹಾಕಿದೆ
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !