ಬ್ರಹ್ಮಚಾರಿಣಿ
ದಧಾನಾ ಕರಪದ್ಮಾಭ್ಯಾಮ ಕ್ಷಮಾಲಾಕಮಂಡಲೂ |
ದೇವಿ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||
ಅರ್ಥ : ಯಾವಳು ತನ್ನ ಎರಡೂ ಕರಕಮಲಗಳಲ್ಲಿ ರುದ್ರಾಕ್ಷಿಯ ಮಾಲೆ ಮತ್ತು ಕಮಂಡಲವನ್ನು ಹಿಡಿದು ಕೊಂಡಿದ್ದಾಳೆಯೋ, ಇಂತಹ ಶ್ರೇಷ್ಠ ದೇವಿ ಬ್ರಹ್ಮಚಾರಿಣಿ ನನ್ನ ಮೇಲೆ ಪ್ರಸನ್ನಳಾಗಲಿ.
ಆಶ್ವಯುಜ ಶುಕ್ಲ ದ್ವಿತೀಯಾವು ನವರಾತ್ರಿಯ ಎರಡನೇಯ ದಿನವಾಗಿದೆ. ಈ ದಿನ ದುರ್ಗೆಯ ಎರಡನೇಯ ರೂಪದ ಅಂದರೆ ಬ್ರಹ್ಮಚಾರಿಣಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ನಾರದಮುನಿಯ ಉಪದೇಶದಂತೆ ಅವಳು ಘೋರ ತಪಶ್ಚರ್ಯೆ ಮಾಡಿದಳು; ಆದ್ದರಿಂದ ಅವಳನ್ನು ತಪಶ್ಚಾರಿಣಿ, ಅಂದರೆ ‘ಬ್ರಹ್ಮಚಾರಿಣಿ ಎಂದು ಹೇಳುತ್ತಾರೆ. ಈ ದೇವಿಯು ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲನ್ನು ಹಿಡಿದುಕೊಂಡಿದ್ದಾಳೆ. ಇವಳ ಉಪಾಸನೆಯನ್ನು ಮಾಡುವುದರಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ ಮತ್ತು ಸಂಯಮ ಈ ದೈವಿ ಗುಣಗಳು ವೃದ್ಧಿಸುತ್ತವೆ.
ರಾಜ್ಯದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಸೀಮಿತವಾಗಿಡಿ !
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯ ಶುಭ ಮುಹೂರ್ತದ ಮಹತ್ವ !
ಅಕ್ಷಯ ತದಿಗೆಯಂದು ಬಿಡಿಸುವ ರಂಗೋಲಿಗಳು
ಸಹೋದರ ಬಿದಿಗೆ (ಯಮದ್ವಿತೀಯಾ) ಕಾರ್ತಿಕ ಶುಕ್ಲ ಬಿದಿಗೆ (ಅಕ್ಟೋಬರ್ ೨೩)
ಬಲಿಪಾಡ್ಯ (ಅಕ್ಟೋಬರ್ ೨೨)