Yaduveer Odeyar on Mahish Dasara : ‘ಮಹಿಷಾ ದಸರಾಗೆ ನಮ್ಮ ವಿರೋಧ ಇಲ್ಲವಂತೆ !’ – ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು-ಕೊಡಗು ಭಾಜಪ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ

(ಮಹಿಷಾ ದಸರಾ ಎಂದರೆ ಮಹಿಷಾಸುರನ ವೈಭವಿಕರಣ)

ಮೈಸೂರು – ಮಹಿಷ ದಸರಾ ಆಚರಣೆಗೆ ಸಂವಿಧಾನದಲ್ಲಿ ಅವಕಾಶವಿದೆ. ಮಹಿಷ ದಸರಾ ಆಚರಣೆಗೆ ನಮ್ಮ ವಿರೋಧವಿಲ್ಲ ಎಂದು ಮೈಸೂರು-ಕೊಡಗು ಕ್ಷೇತ್ರದ ಭಾಜಪ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ‘ನಾನೊಬ್ಬ ಜನ ಪ್ರತಿನಿಧಿಯಾಗಿದ್ದೇನೆ. ಈ ಹಬ್ಬವನ್ನು ಆಚರಿಸುವುದು ಸಂಬಂಧಪಟ್ಟವರ ಹಕ್ಕಾಗಿದೆ. ಇದನ್ನು ವಿರೋಧಿಸುವವರನ್ನೇ ಕೇಳಬೇಕು ಎಂದೂ ಹೇಳಿದರು.

ಮಹೇಶ್ ದಸರಾವನ್ನು ಸಾರ್ವಜನಿಕವಾಗಿ ಅಥವಾ ಮನೆಯಲ್ಲಿಯೂ ಆಚರಿಸಬಹುದು ಎಂದು ಸಂಸದ ಒಡೆಯರ್ ಹೇಳಿದರು. ಚಾಮುಂಡಿ ಬೆಟ್ಟದಲ್ಲಿ ದಸರಾ ಆಚರಣೆಯಾಗುತ್ತಿರುವುದರಿಂದ ‘ಅಲ್ಲಿ ಆಚರಿಸಬೇಡಿ’, ಎನ್ನಲಾಗುತ್ತಿದೆ. ಅವರು ಅಲ್ಲಿಯೇ ಆಚರಿಸಲು ಒತ್ತಾಯಿಸಿದರೆ, ನಾನು ಈ ಬಗ್ಗೆ ಚರ್ಚಿಸುತ್ತೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮಹಿಷ ದಸರಾವನ್ನು ಆಚರಿಸುವವರು ಹಿಂದೂ ವಿರೋಧಿಗಳು ಮತ್ತು ಅವರಿಗೆ ಹಾಗೆ ಮಾಡಲು ಅವಕಾಶ ನೀಡುವುದು ಅನುಚಿತವಾಗಿದೆ. ಮಹಿಷ ದಸರಾವನ್ನು ಆಚರಿಸುವ ಮೂಲಕ ಅವರು ರಾಕ್ಷಸ ಮನೋಭಾವವನ್ನು ಬೆಂಬಲಿಸುತ್ತಿದ್ದಾರೆ ಮತ್ತು ದೇವತೆಗಳನ್ನು ವಿರೋಧಿಸುತ್ತಿದ್ದಾರೆ. ಹಿಂದೂಗಳು ಇದನ್ನು ನ್ಯಾಯಸಮ್ಮತ ರೀತಿಯಲ್ಲಿ ವಿರೋಧಿಸಬೇಕು !