ಧಾರವಾಡದಲ್ಲಿ ಧಾರ್ಮಿಕ ಸ್ಥಳಕ್ಕಾಗಿ ಹಿಂದೂ ಮತ್ತು ಮುಸಲ್ಮಾನರ ನಡುವೆ ವಿವಾದ

ಧಾರವಾಡ – ಹಲವು ವರ್ಷಗಳಿಂದ ಧಾರವಾಡದ ಸೂಪರ್ ಮಾರ್ಕೆಟ್‌ನಲ್ಲಿ ಮರದ ಕೆಳಗೆ ಮಾರುತಿ, ಕರಿಯಮ್ಮ ಮತ್ತು ನಾಗದೇವತೆಯನ್ನು ಪೂಜಿಸಲಾಗುತ್ತಿತ್ತು; ಆದರೆ ಈಗ ಪಕ್ಕದಲ್ಲಿರುವ ಮರದ ಕೆಳಗೆ ಮಹಬೂಬ್ ಸುಭಾನಿ ದರ್ಗಾದ ಕಲ್ಲುಗಳನ್ನು ಇಡಲಾಗಿದೆ. ಆದ್ದರಿಂದ ವಿವಾದ ಸೃಷ್ಟಿಯಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಉಭಯ ಸಮುದಾಯದ ದೇವರ ಸ್ಥಳವನ್ನು ತೆಗೆದು ಹಾಕುವುದಾಗಿ ತಿಳಿಸಿದರು. ಮಹಾನಗರ ಪಾಲಿಕೆಯ ಈ ನಿರ್ಧಾರಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.