ಪ್ರಧಾನಿ ಮೋದಿ ಮತ್ತು ಅಮೆರಿಕಾದ ರಾಷ್ಟ್ರಾಧ್ಯಕ್ಷ ಬಾಯಡೇನ್ ಇವರಲ್ಲಿ ಬಾಂಗ್ಲಾದೇಶದ ಹಿಂದೂಗಳ ಸುರಕ್ಷೆಯ ಕುರಿತು ದೂರವಾಣಿಯಲ್ಲಿ ಚರ್ಚೆ

ನವ ದೆಹಲಿ – ಪ್ರಧಾನಿ ನರೇಂದ್ರ ಮೋದಿ ಇವರು ಆಗಸ್ಟ್ ೨೬ ರಂದು ರಾತ್ರಿ ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೇನ್ ಇವರ ಜೊತೆಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದರು. ಇಬ್ಬರೂ ನಾಯಕರು ಉಕ್ರೇನ್ ಮತ್ತು ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯ ಕುರಿತು ಚರ್ಚಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಉಕ್ರೇನ್‌ನಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಭಾರತದ ಬೆಂಬಲವನ್ನು ಪುನರುಚ್ಚರಿಸಿದೆ. ಹಾಗೂ ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ಆದಷ್ಟು ಬೇಗನೆ ತಿಳಿಗೊಳಿಸಲು ಇಬ್ಬರು ಒತ್ತು ನೀಡಿದ್ದಾರೆ. ಬಾಂಗ್ಲಾದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಆದಷ್ಟು ಬೇಗನೆ ಹಿಂದಿನಂತೆ ಮಾಡಲು ಮತ್ತು ಅಲ್ಪಸಂಖ್ಯಾತರ ವಿಶೇಷವಾಗಿ ಹಿಂದುಗಳ ಸುರಕ್ಷೆಯನ್ನು ನಿರ್ಧರಿಸಲು ಒತ್ತು ನೀಡಿದ್ದಾರೆ.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶದಲ್ಲಿನ ಹಿಂದುಗಳ ನರಸಂಹಾರ ನಡೆಯುತ್ತಿದೆ. ಆದ್ದರಿಂದ ಕೇವಲ ಚರ್ಚೆ ಬೇಡ, ಪ್ರತ್ಯಕ್ಷ ಕೃತಿ ಮಾಡುವ ಆವಶ್ಯಕತೆ ಇದೆ !
  • ಭಾರತವು ಬಾಂಗ್ಲಾದೇಶದಲ್ಲಿನ ಹಿಂದೂಗಳ ಸುರಕ್ಷೆಗಾಗಿ ಅಮೆರಿಕದ ಜೊತೆಗೆ ಚರ್ಚಿಸುವ ಅಗತ್ಯ ಏನಿತ್ತು ? ನಾಳೆ ಭಾರತದಲ್ಲಿನ ಹಿಂದುಗಳ ಸುರಕ್ಷೆಗಾಗಿ ಕೂಡ ಭಾರತ ಅಮೆರಿಕಾದ ಜೊತೆಗೆ ಚರ್ಚಿಸುವುದೇ ? ಭಾರತವು ಬಾಂಗ್ಲಾದೇಶದಲ್ಲಿನ ಹಿಂದೂಗಳ ಸುರಕ್ಷೆಗಾಗಿ ಸ್ವತಃ ನೇತೃತ್ವ ವಹಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !