ಗಣೇಶೋತ್ಸವದ ಅವಧಿಯಲ್ಲಿ ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮತ್ತು ಅಧ್ಯಾತ್ಮಪ್ರಸಾರದ ದೃಷ್ಟಿಯಿಂದ ಮುಂದಿನ ಪ್ರಯತ್ನಗಳನ್ನು ಮಾಡಿರಿ

ಸಾಧಕರಿಗೆ ಸೂಚನೆ

‘೭ ರಿಂದ ೧೭ ಸಪ್ಟೆಂಬರ ೨೦೨೪ ರ ಕಾಲಾವಧಿಯಲ್ಲಿ ಗಣೇಶೋತ್ಸವವಿದೆ. ಆ ಸಮಯದಲ್ಲಿ ಅನೇಕ ಗಣೇಶಮಂಡಳಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಗಣೇಶೋತ್ಸವ ಮಂಡಳಿಗಳ ಮುಖ್ಯಸ್ಥರನ್ನು ಭೇಟಿಯಾಗಿ ಭಕ್ತರಿಗಾಗಿ ಸಾಧನೆಯ ಬಗ್ಗೆ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ವಿಷಯದ ಕುರಿತು ಪ್ರವಚನಗಳನ್ನು ಆಯೋಜಿಸಬೇಕು. ಅಲ್ಲದೇ ಸನಾತನ ಪ್ರಕಾಶಿತ ಗ್ರಂಥಗಳು, ಕಿರುಗ್ರಂಥಗಳು ಹಾಗೂ ಸಾತ್ತ್ವಿಕ ಉತ್ಪಾದನೆಗಳ ಪ್ರದರ್ಶನವನ್ನು ಏರ್ಪಡಿಸಬೇಕು. ಧರ್ಮಶಿಕ್ಷಣವನ್ನು ನೀಡುವ, ಮತ್ತು ರಾಷ್ಟ್ರರಕ್ಷಣೆಯ ವಿಷಯದ ಬಗ್ಗೆ ತಿಳುವಳಿಕೆ ನೀಡುವ ಫಲಕಗಳ ಪ್ರದರ್ಶನವನ್ನು ಸಹ ಗಣೇಶೋತ್ಸವದ ಮಂಟಪದಲ್ಲಿ ಏರ್ಪಡಿಸಬಹುದು’.

(೧೧.೮.೨೦೨೪)