ಕಾಂದಳಿಯಲ್ಲಿ (ಪುಣೆ) ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿಸ್ಥಳದಲ್ಲಿ ಗುರುಪೂರ್ಣಿಮೆ

 ಇಂದೂರ್ (ಮಧ್ಯಪ್ರದೇಶ)ದಲ್ಲಿಯೂ ಗುರುಪೂರ್ಣಿಮಾ ಮಹೋತ್ಸವ

ಪ.ಪೂ. ಭಕ್ತರಾಜ ಮಹಾರಾಜರ ಮೂರ್ತಿ

ಕಾಂದಳಿ (ಜಿಲ್ಲೆ ಪುಣೆ) – ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಕಾಂದಳಿಯಲ್ಲಿರುವ ಸಮಾಧಿಸ್ಥಳದಲ್ಲಿ ಜುಲೈ ೨೧ ರಂದು ಭಾವಪೂರ್ಣವಾಗಿ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಯಿತು. `ಶ್ರೀ ರಾಮಚಂದ್ರದೇವ ಟ್ರಸ್ಟ್’ ಮತ್ತು `ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿ ಟ್ರಸ್ಟ್’ ವತಿಯಿಂದ ಉತ್ಸವವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

ಕಾಂದಳಿಯಲ್ಲಿ ಸಮಾಧಿಸ್ಥಳವನ್ನು ಹೂವಿನಿಂದ ಅಲಂಕಾರ ಮಾಡುತ್ತಿರುವ ಭಕ್ತರು

ಇಂದೋರ್ (ಮಧ್ಯಪ್ರದೇಶ)ದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಗುರುಪೂರ್ಣಿಮೆಯನ್ನು `ಶ್ರೀ ಸದ್ಗುರು ಅನಂತಾನಂದ ಸಾಯಿಶ ಶೈಕ್ಷಣಿಕ ಮತ್ತು ಪಾರಮಾರ್ಥಿಕ ಸೇವಾ ಟ್ರಸ್ಟ್’ ವತಿಯಿಂದ ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾಯಿತು. ಬೆಳಗ್ಗೆ ಸತ್ಯನಾರಾಯಣ ಮತ್ತು ವ್ಯಾಸ ಪೂಜೆಯನ್ನು ಮಾಡಿದ ನಂತರ ಗುರುಪಾದುಕೆಗೆ ಪೂಜೆ ಸಲ್ಲಿಸಲಾಯಿತು. ನಂತರ ಭಜನೆ ನಡೆಯಿತು. ಮಧ್ಯಾಹ್ನ ಮಹಾಪ್ರಸಾದ ವಿತರಿಸಲಾಯಿತು.