ಹಿಂದುಗಳು ತಮ್ಮ ಜೊತೆಗೆ ಕುಟುಂಬ, ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಸಿದ್ದರಾಗಬೇಕು ! – ರಮೇಶ ಶಿಂದೆ ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಏಳನೆಯ ದಿನ (ಜೂನ್ ೩೦ )

ಉದ್ಬೋದನ ಸತ್ರ – ಹಿಂದುತ್ವ ರಕ್ಷಣೆ

ರಮೇಶ ಶಿಂದೆ

ವಿದ್ಯಾಧಿರಾಜ ಸಭಾಂಗಣ – ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (‘ಪಿ.ಎಫ್.ಐ’) ಜನವರಿ ೧, ೨೦೫೦ ರಲ್ಲಿ ಭಾರತವನ್ನು ಇಸ್ಲಾಮಿ ರಾಷ್ಟ್ರ ಎಂದು ಘೋಷಿಸುವುದಿದೆ. ಇಂದು ‘ಜಮೀಯತ್ ಉಲೇಮಾ ಏ ಹಿಂದ್’ ಈ ಸಂಘಟನೆ ಮುಸಲ್ಮಾನ ಯುವಕರಿಗೆ ಬಹಿರಂಗವಾಗಿಯೇ ಸೈನ್ಯ ಪ್ರಶಿಕ್ಷಣ ನೀಡುತ್ತಿದೆ ಮತ್ತು ಬರುವ ೧೦ ವರ್ಷಗಳಲ್ಲಿ ಅವರು ಒಂದು ಕಾಲು ಕೋಟಿ ಯುವಕರಿಗೆ ತರಬೇತಿಗೊಳಿಸುವವರಿದ್ದಾರೆ. ಇದಕ್ಕಾಗಿ ಅವರ ಸಿದ್ಧತೆ ನಡೆಯುತ್ತಿದೆ. ಶತ್ರು ಯಾವಾಗಲೂ ಯುದ್ಧದ ತಯಾರಿಯಲ್ಲಿ ಇರುತ್ತಾನೆ. ಅದಕ್ಕೆ ಪ್ರತಿ ಬಾರಿಯೂ ಬುದ್ಧಿಯಿಂದ ತಿಳಿ ಹೇಳಲು ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ಹಿಂದುಗಳು ತಮ್ಮ ರಕ್ಷಣೆ ಮಾಡಿಕೊಳ್ಳಲು ಸಿದ್ದರಿರುವದು ಆವಶ್ಯಕವಾಗಿದೆ. ಭಾರತೀಯ ಸೈನ್ಯ ಮತ್ತು ಪೊಲೀಸರ ಸಂಖ್ಯಾಬಲದಲ್ಲಿ ಮತಾಂಧರ ಸಂಖ್ಯೆ 20 ಕೋಟಿ ಇದೆ. ನಾವು ಯಾರ ಮೇಲೂ ಅನ್ಯಾಯ ಮಾಡಬೇಕೆಂದಿಲ್ಲ, ಆದರೆ ಧರ್ಮ ಮತ್ತು ರಾಷ್ಟ್ರದ ರಕ್ಷಣೆ ಮಾಡುವುದಿದೆ. ಆದ್ದರಿಂದ ಹಿಂದುಗಳು ಪೊಲೀಸರ ಮೇಲೆ ಅವಲಂಬಿತವಾಗದೆ ಸ್ವಂತದ ಜೊತೆಗೆ ಕುಟುಂಬ, ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಸಿದ್ಧರಾಗಬೇಕು. ನಮ್ಮ ಜೊತೆಗೆ ಶ್ರೀ ಕೃಷ್ಣ ಇರುವನು, ಆದರಿಂದ ಸೋಲು ಸಾಧ್ಯವಿಲ್ಲ. ನಾವು ಅನೀತಿ ಮತ್ತು ಅಧರ್ಮದಿಂದಲ್ಲದೆ, ನೀತಿ ಮತ್ತು ಧರ್ಮದ ಸಹಾಯದಿಂದ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ’ದ ಕೊನೆಯ ದಿನದಂದು ಹೇಳಿದರು. ಅವರು ‘ಭವಿಷ್ಯದಲ್ಲಿನ ಆಪತ್ಕಾಲದಲ್ಲಿ ಮಾಡಬಾಕಾಗುವ ಸಿದ್ಧತೆ’ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದರು.

ಶೋಭಾಯಾತ್ರೆಯಲ್ಲಿ ಸಹಭಾಗಿ ಆಗುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಉಪಾಯ ಯೋಜನೆ ಮಾಡಬೇಕು !

ಶ್ರೀ. ಶಿಂದೆ ಇವರು ಮಾತು ಮುಂದುವರೆಸುತ್ತಾ, ”ಭಾರತದಲ್ಲಿ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಇವೆ. ಇದರಲ್ಲಿ ಮತಭೇದ ಇರಬಹುದು; ಆದರೆ ಇದರ ಲಾಭ ಶತ್ರುವಿಗೆ ಆಗದಂತೆ ಗಮನ ಇರಬೇಕು. ಹಾಗೂ ಎಲ್ಲರಿಗೂ ಹಿಂದೂ ರಾಷ್ಟ್ರದ ಸ್ಥಾಪನೆ ಬೇಕಿದೆ. ಆದ್ದರಿಂದ ಎಲ್ಲರೂ ಸಂಘಟಿತರಾಗುವುದು ಆವಶ್ಯಕವಾಗಿದೆ. ಹಿಂದುಗಳ ಪ್ರತಿಯೊಂದು ದೇವತೆಯ ಕೈಯಲ್ಲಿ ಶಸ್ತ್ರಗಳು ಇವೆ. ಸಿಖ್ಕರ ಸೊಂಟಕ್ಕೆ ಶಸ್ತ್ರ ಇರುತ್ತದೆ, ಪೊಲೀಸ ಮತ್ತು ಸೈನ್ಯ ಇವರ ಬಳಿ ಕೂಡ ಶಸ್ತ್ರ ಇರುತ್ತದೆ; ಆದರೆ ಬ್ರಿಟಿಷರು ‘ಭಾರತೀಯ ಶಸ್ತ್ರ ಅಧಿನಿಯಮ ೧೮೭೮’ ಜಾರಿಗೊಳಿಸಿ ಹಿಂದೂಗಳನ್ನು ನಿಶಸ್ತ್ರರನ್ನಾಗಿ ಮಾಡಿದೆ. ಅಂದಿನಿಂದ ಹಿಂದೂಗಳ ಪರಿಸ್ಥಿತಿ ದಯನೀಯವಾಗಿದೆ. ವಿವಿಧ ಗಲಭೆಯಲ್ಲಿ ಮತಾಂಧರು ಹಿಂದೂಗಳ ಮೇಲೆ ಆಧುನಿಕ ಶಸ್ತ್ರಾಸ್ತ್ರಗಳ ಸಹಿತ ದಾಳಿ ನಡೆಸುತ್ತಾರೆ. ಅಂತಹ ಸಮಯದಲ್ಲಿ ಅನೇಕ ಹಿಂದೂಗಳು ತಮ್ಮ ಜೀವ ಕಳೆದುಕೊಳ್ಳುತ್ತಾರೆ. ಹೀಗೆ ಇರುವಾಗ ಹಬ್ಬ ಉತ್ಸವದ ಸಮಯದಲ್ಲಿ ಹಿಂದುತ್ವನಿಷ್ಠರು ಶೋಭಾಯಾತ್ರೆ ನಡೆಸುತ್ತಾರೆ; ಆದರೆ ಅವರ ಬಳಿ ಹಿಂದೂ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಯಾವುದೇ ಉಪಾಯ ಯೋಜನೆ ಇರುವುದಿಲ್ಲ. ಇದರ ಬಗ್ಗೆ ಕೂಡ ಯೋಚನೆ ಮಾಡುವುದು ಆವಶ್ಯಕವಾಗಿದೆ.” ಎಂದು ಹೇಳಿದರು.

ಶ್ರೀ. ಶಿಂದೆ ಇವರ ಭಾಷಣದಲ್ಲಿನ ಮಹತ್ವದ ಅಂಶಗಳು

೧. ಸ್ವಾತಂತ್ರ್ಯ ವೀರ ಸಾವರ್ಕರ್ ಇಂಗ್ಲೆಂಡಿಗೆ ಹೋಗಿದ್ದರು ಮತ್ತು ಅಲ್ಲಿಂದ ಪುಸ್ತಕದ ಮೂಲಕ ಭಾರತದಲ್ಲಿ ಬಂದುಕು ಕಳುಹಿಸಿದ್ದರು. ಹಾಗೂ ಕ್ರಾಂತಿಕಾರರಿಗೆ ಬಾಂಬ್ ತಯಾರಿಸುವ ಪದ್ಧತಿ ಕೂಡ ಕಳುಹಿಸಿದ್ದರು. ಅವರು ಕೇವಲ ಪುಸ್ತಕ ಬರೆದು ಅಷ್ಟಕ್ಕೇ ಬಿಟ್ಟಿದ್ದರೆ, ಆಗ ದೇಶಕ್ಕೆ ಸ್ವಾತಂತ್ರ್ಯ ದೊರೆಯುತ್ತಿರಲಿಲ್ಲ.

೨. ‘ಪಿ.ಎಫ್.ಐ’ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಭಾರತದಲ್ಲಿ ಯುದ್ಧದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ಪಿ.ಎಫ್.ಐ’ ಒಂದು ನೀತಿ ತಯಾರಿಸಿದೆ. ಅದರಲ್ಲಿ, ಹಿಂದುಳಿದ ಜಾತಿ, ಹಿಂದುಳಿದ ವರ್ಗ ಮತ್ತು ‘ಓಬಿಸಿ’ ಜನಾಂಗವನ್ನು ಜೊತೆಗೂಡಿಸಿ ಚುನಾವಣೆಯನ್ನು ಎದುರಿಸಬೇಕಿದೆ ಎಂದು ಹೇಳಿದೆ. ಅದೇ ರೀತಿ ಅವರ ಮನಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ತಪ್ಪಾದ ಅಭಿಪ್ರಾಯ ಮೂಡಿಸುವುದಾಗಿದೆ ಎಂದು ಹೇಳಿದರು.