ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನ (ಜೂನ್ 27)
![](https://static.sanatanprabhat.org/wp-content/uploads/sites/5/2024/06/28115203/Bhaskar_raju.jpg)
ಇಡೀ ವಿಶ್ವದಲ್ಲಿ ಸನಾತನ ಧರ್ಮವೊಂದೇ ಸತ್ಯ, ಉಳಿದೆಲ್ಲವೂ ಸುಳ್ಳು. ಕ್ರೈಸ್ತ, ಇಸ್ಲಾಂ ಮತ್ತು ನಾಸ್ತಿಕರು ಅಂದರೆ ಕಮ್ಯುನಿಸ್ಟರು ಇವರಿಂದ ಸುಳ್ಳು ಪ್ರಚಾರ ಆಗುತ್ತಿದೆ. ಸುಳ್ಳು ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಇದನ್ನು ಎದುರಿಸುವಾಗ, ಸನಾತನಧರ್ಮದ ರಕ್ಷಣಾತ್ಮಕ ನಿಲುವು ತೆಗೆದುಕೊಳ್ಳುತ್ತಿದ್ದಾರೆ; ಆದರೆ ಈಗ ಈ ಸುಳ್ಳು ಪ್ರಚಾರವನ್ನು ಎದುರಿಸಲು ಆಕ್ರಮಣಕಾರಿ ನಿಲುವು ತಳೆಯಬೇಕಾದ ಸಮಯ ಬಂದಿದೆ ಎಂದು ತೆಲಂಗಾಣದ ಧರ್ಮಮಾರ್ಗಂ ಸೇವಾ ಟ್ರಸ್ಟ್ ನ ಟ್ರಸ್ಟಿ ಡಾ. ಭಾಸ್ಕರ್ ರಾಜು ವಿ. ಇಲ್ಲಿ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ವ್ಯಕ್ತಪಡಿಸಿದರು.
ಡಾ. ಭಾಸ್ಕರ್ ರಾಜು ವಿ. ತಮ್ಮ ಮಾತನ್ನು ಮುಂದುವರೆಸಿ, ಕ್ರೈಸ್ತ ಮತ್ತು ಇಸ್ಲಾಂ ಕಪಟಿಗಳಾಗಿದ್ದರೆ, ಕಮ್ಯುನಿಸ್ಟರು ದೇಶದ್ರೋಹಿಗಳಾಗಿದ್ದಾರೆ. ಈ ಜನರ ಸಿದ್ಧಾಂತಗಳನ್ನು ಒಪ್ಪಬಾರದು. ಅವರ ಸುಳ್ಳು ನರೆಟಿವ್ ಗಳನ್ನು ಅಲ್ಲಗಳೆಯುವ ‘ನರೆಟಿವ್’ಅನ್ನು ನಾವು ಸಿದ್ಧಪಡಿಸಬೇಕು. ಅದಕ್ಕಾಗಿ ಹಿಂದೂಗಳಾದ ನಾವು ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟಿತವಾಗಿ ಈ ಆಕ್ರಮಣಕಾರಿ ನೀತಿಯನ್ನು ಜಾರಿಗೆ ತರಬೇಕು. ಹಾಗೆ ಮಾಡುವಾಗ ಕಪಟಿ, ಜಿಹಾದಿಗಳು, ಮತಾಂಧರು, ಮತಾಂತರ ಮಾಫಿಯಾ, ನಗರ ನಕ್ಸಲರು ಇತ್ಯಾದಿ ಪದಗಳನ್ನು ಆಗಾಗ್ಗೆ ಬಳಸಬೇಕು ಎಂದು ಹೇಳಿದರು.