ಸಾಧನೆಗೆ ಸಂಬಂಧಿಸಿ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ !
![](https://static.sanatanprabhat.org/wp-content/uploads/sites/5/2023/10/03223500/BindaTai.jpg)
ಓರ್ವ ಜವಾಬ್ದಾರ ಸಾಧಕ : ನಮ್ಮಲ್ಲಿ ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆ ಇರುವ ಮತ್ತು ವೃದ್ಧ ಸಾಧಕರ ಸಂಖ್ಯೆ ಹೆಚ್ಚಿರುವುದರಿಂದ ಅವರನ್ನು ಸಂಭಾಳಿಸಲು ಸಮಯ ನೀಡಬೇಕಾಗುತ್ತದೆ. ಸಾಧನೆಯೆಂದು ಹೇಗೆ ಮಾಡಬೇಕು ?
ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ : ಕೆಲವು ಸಾಧಕರು ಪೂರ್ಣ ಕ್ಷಮತೆಯಿಂದ ಸೇವೆಯನ್ನು ಮಾಡಬಲ್ಲರು, ಕೆಲವರು ಮಧ್ಯಮ ಕ್ಷಮತೆಯಿಂದ, ಇನ್ನು ಕೆಲವರು ಕಡಿಮೆ ಕ್ಷಮತೆಯಿಂದ ಸೇವೆಯನ್ನು ಮಾಡಬಲ್ಲರು. ನಮ್ಮ ಆಶ್ರಮದ ಬಾಗಿಲು ಸಾಧನೆ ಮಾಡುವ ಮತ್ತು ಸಾಧನೆಯನ್ನು ಮಾಡಲಿಚ್ಛಿಸುವ ಪ್ರತಿಯೊಬ್ಬರಿಗೂ ತೆರೆದಿದೆ.
![](https://static.sanatanprabhat.org/wp-content/uploads/sites/5/2024/06/09091042/Swati_Shinde_H_col.jpg)
ಹೊರಗಿನ ಜಗತ್ತಿನಲ್ಲಿ ವ್ಯಕ್ತಿಯ ಯೋಗ್ಯತೆಯನ್ನು ನೋಡಲಾಗುತ್ತದೆ. ‘ವ್ಯಕ್ತಿಯ ವಯಸ್ಸು, ಕ್ಷಮತೆ ಮತ್ತು ಕೌಶಲ್ಯ’, ಹೀಗೆ ಎಲ್ಲ ರೀತಿಯಿಂದ ಅಭ್ಯಾಸ ಮಾಡಿ ಅವರನ್ನು ಆರಿಸಲಾಗುತ್ತದೆ, ಆಮೇಲೆ ಅವರಿಗೆ ಕೆಲಸ ಕೊಡಲಾಗುತ್ತದೆ; ಆದರೆ ನಾವು ಇವೆಲ್ಲವುಗಳನ್ನು ಸಾಧನೆ ಎಂದು ನೋಡುತ್ತೇವೆ. ನಮ್ಮೊಂದಿಗೆ ಜೋಡಣೆಯಾಗಿರುವ ಸಾಧಕರೆಲ್ಲರೂ ಸಾಧನೆ ಮಾಡಲು ಬಂದಿರುತ್ತಾರೆ. ‘ಸಾಧಕರಿಂದ ಎಷ್ಟು ಸೇವೆಯಾಗುತ್ತದೆ ? ಅಥವಾ ನಾವು ಅವರಿಗೆ ಎಷ್ಟು ಸಮಯವನ್ನು ಕೊಡಬೇಕಾಗುತ್ತದೆ’, ಎಂದು ವಿಚಾರ ಮಾಡುವ ಬದಲು ಆ ಸಾಧಕರಿಗೆ ಮಹತ್ವ ನೀಡಬೇಕಾಗುತ್ತದೆ; ಏಕೆಂದರೆ ನಮ್ಮ ಸಂಸ್ಥೆ ಸಾಧಕರಿಗಾಗಿಯೇ ಇದೆ. ಸಾಧಕರು ಪರಸ್ಪರರಿಗೆ ಸಹಾಯ ಮಾಡುವುದು ಮತ್ತು ಇತರರಿಂದ ಸಹಾಯ ಪಡೆಯುವುದು, ಹೀಗೆ ಮಾಡುತ್ತಲೇ ಮುಂದೆ ಹೋಗಲಿಕ್ಕಿದೆ. ಕೆಲವೊಮ್ಮೆ ಸಾಧಕರು ಮಾಡಿದ ಸೇವೆಯನ್ನು ತಪಾಸಣೆ ಮಾಡಲು, ಅವುಗಳಲ್ಲಿ ಸುಧಾರಣೆ ಮಾಡಲು ಇತರ ಸಾಧಕರು ಸಮಯವನ್ನು ನೀಡಬೇಕಾಗುತ್ತದೆ; ಆದರೆ ಇದರಲ್ಲಿ ಆ ಜೀವಕ್ಕೆ ‘ತನ್ನಿಂದ ಸ್ವಲ್ಪವಾದರೂ ಸೇವೆ ಆಯಿತು’, ಎನ್ನುವ ಸಮಾಧಾನ ಸಿಗುತ್ತದೆ. ಆದ್ದರಿಂದ ಇತರರು ಆ ಸಾಧಕನಿಗೆ ಸಮಯ ನೀಡಬೇಕಾದರೂ, ಅದು ಯೋಗ್ಯವೇ ಆಗಿದೆ.
ಸಂಗ್ರಹ
– ಸೌ. ಸ್ವಾತಿ ಶಿಂದೆ (ಆಧ್ಯಾತ್ಮಿಕ ಮಟ್ಟ ಶೇ. ೬೫, ೩೬ ವರ್ಷ), ಸನಾತನ ಆಶ್ರಮ, ರಾಮನಾಥಿ ಗೋವಾ. (೨೮.೩.೨೦೨೪)