
ನವದೆಹಲಿ – ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವುದಕ್ಕಾಗಿ ಪಾಕಿಸ್ತಾನದ ಹೆಸರು ಹೇಳಬಾರದು. ಭಾರತೀಯ ನಾಯಕರು ಜಮ್ಮು ಕಾಶ್ಮೀರದ ಕುರಿತು ಸುಳ್ಳು ದಾವೆಗಳನ್ನು ಮಾಡುವುದನ್ನು ನಿಲ್ಲಿಸಬೇಕು, ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರೆ ಝಾಹರಾ ಬಲೋಚ್ ಅವರು ಹೇಳಿಕೆ ನೀಡಿದ್ದಾರೆ. ಏಪ್ರಿಲ್ ೨೬ ರಂದು ಅವರು ಪತ್ರಕರ್ತರ ಸಭೆಯಲ್ಲಿ ಮೇಲಿನ ದಾವೆ ಮಾಡುತ್ತ ಭಾರತೀಯ ನಾಯಕರು ತಮ್ಮ ಭಾಷಣದಲ್ಲಿ ಮತಕ್ಕಾಗಿ ಪಾಕಿಸ್ತಾನದ ಅಂಶಗಳನ್ನು ಎತ್ತುವುದನ್ನು ನಿಲ್ಲಿಸಬೇಕು ಎಂದು ಬಲೋಚ್ ಹೇಳಿದ್ದಾರೆ. ಅವರು ಜಮ್ಮು ಕಾಶ್ಮೀರದ ಬಗ್ಗೆ ಭಾರತೀಯ ನಾಯಕರ ಎಲ್ಲಾ ದಾವೆಗಳನ್ನು ತಳ್ಳಿ ಹಾಕಿದ್ದಾರೆ.
ಝಾಹರಾ ಬಲೋಜ್ ತಮ್ಮ ಮಾತನ್ನು ಮುಂದುವರೆಸುತ್ತಾ , ಜಮ್ಮು ಕಾಶ್ಮೀರದ ಬಗ್ಗೆ ಭಾರತೀಯ ನಾಯಕರ ಪ್ರಚೋದನಕಾರಿ ಭಾಷಣಗಳು ಕಳೆದ ಕೆಲವು ಸಮಯದಿಂದ ಹೆಚ್ಚಾಗಿವೆ. ಇದು ಅತ್ಯಂತ ಆಘಾತಕಾರಿ ಆಗಿದೆ. ಅವರ ಈ ಹೇಳಿಕೆಗಳು ರಾಷ್ಟ್ರವಾದದಿಂದ ಪ್ರೇರೇಪಿತವಾಗಿವೆ. ಆದ್ದರಿಂದ ಈ ಪ್ರದೇಶದಲ್ಲಿನ ಶಾಂತಿಗೆ ಅಪಾಯ ಉಂಟಾಗಬಹುದು. ಭಾರತದ ದಾವೆಗಳು ಐತಿಹಾಸಿಕ ಮತ್ತು ಕಾನೂನು ಸಂಗತಿಗಳಿಗೆ ವಿರುದ್ಧವಾಗಿವೆ ಎಂದವರು ಹೇಳಿದರು.
ಪಾಕ್ ವ್ಯಾಪ್ತ ಕಾಶ್ಮೀರ ನಮ್ಮ ಪ್ರದೇಶವಾಗಿದೆ, ಇದೇ ಮತ್ತು ಇರುವುದು ! – ರಾಜನಾಥ ಸಿಂಗ್

ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಏಪ್ರಿಲ್ ೧೧ ರಂದು ಮಧ್ಯಪ್ರದೇಶದಲ್ಲಿನ ಸತನಾ ಜಿಲ್ಲೆಯಲ್ಲಿನ ಒಂದು ಸಭೆಯಲ್ಲಿ ಪಾಕಿಸ್ತಾನವನ್ನು ಉಲ್ಲೇಖಿಸುತ್ತಾ ಮಾತನಾಡಿ, ಜಮ್ಮು ಕಾಶ್ಮೀರದ ಅಭಿವೃದ್ಧಿ ಯಾವ ರೀತಿ ಆಗುತ್ತಿದೆ ಅಂದರೆ ಪಾಕ್ ವ್ಯಾಪಿತ ಕಾಶ್ಮೀರದ ಜನರಿಗೂ ಅನಿಸಲು ಶುರುವಾಗಿದೆ, ಅವರ ಅಭಿವೃದ್ಧಿ ಕೇವಲ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಂದಲೇ ಸಾಧ್ಯ ಎಂದು. ಪಾಕಿಸ್ತಾನ ವ್ಯಾಪಿತ ಕಾಶ್ಮೀರ ನಮ್ಮ ಪ್ರದೇಶವಾಗಿತ್ತು, ಆಗಿದೆ ಮತ್ತು ನಮ್ಮ ಪ್ರದೇಶವೇ ಆಗಿರಲಿದೆ ಎಂದು ಸಿಂಗ್ ಗಂಭೀರವಾಗಿ ಹೇಳಿದರು!
ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ್ ಅವರು ಕೂಡ ಪತ್ರಕರ್ತರ ಸಭೆಯಲ್ಲಿ ಮಾತನಾಡಿ, ಪಾಕ್ ವ್ಯಾಪಿತ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ, ಅದು ನಾವು ಎಂದಿಗೂ ಒಪ್ಪುವುದಿಲ್ಲ. ಅದು ಭಾರತದ ಪ್ರದೇಶವಾಗಿದೆ ಎಂದು ಭಾರತದಲ್ಲಿನ ಎಲ್ಲಾ ಪಕ್ಷದ ಒಂದೇ ನಿಲುವಾಗಿದೆ ಎಂದಿದ್ದರು.
ಸಂಪಾದಕೀಯ ನಿಲುವು
|
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ
ಇರಾನ್ ಯುದ್ಧದಲ್ಲಿ ರಷ್ಯಾ ಮತ್ತು ಚೀನಾ ಭಾಗಿಯಾದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ! – ಟ್ರಂಪ್ ಎಚ್ಚರಿಕೆ
‘ಅರಾಮ್ ಕೊ’ ಎಂಬ ವಿಶ್ವದ ಅತಿ ದೊಡ್ಡ ತೈಲ ಸಂಸ್ಥೆಯ ಮೇಲೆ ದಾಳಿ
ಬಾಂಗ್ಲಾದೇಶದಲ್ಲಿ ಶರಣಾಗುವಾಗ ನಾಚಿಕೆಯಾಗಲಿಲ್ಲವೇ? – Maulana Fazlur Rahman
ಭಾರತದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳ ಮೇಲೆ ಚೀನಾ ಅಕ್ರಮ ನಿಯಂತ್ರಣ ಸಾಧಿಸಿದೆ !
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಗತ್ಯ!