ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸರಿಗೆ ವಿಸ್ತಾರ ವಾಹಿನಿಯಿಂದ ಸತ್ಕಾರ !

ಶ್ರೀ. ಚೇತನ ರಾಜಹಂಸ ಇವರನ್ನು ಸತ್ಕಾರ  ಮಾಡುತ್ತಿರುವ ಶ್ರೀ. ಕಿರಣ ಕುಮಾರ್‌

ಬೆಂಗಳೂರು : ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ವಿಸ್ತಾರ ವಾಹಿನಿಯ ಕಾರ್ಯನಿರ್ವಹಣಾ ನಿರ್ದೇಶಕರಾದ ಶ್ರೀ. ಕಿರಣ ಕುಮಾರ್‌ ಡಿ.ಕೆ ಇವರನ್ನು ಭೇಟಿ ಮಾಡಿ ಸಂಸ್ಥೆಯ ಅಧ್ಯಾತ್ಮ ಪ್ರಸಾರ ಕಾರ್ಯದ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಶ್ರೀ. ಕಿರಣ ಕುಮಾರ್‌ ಇವರು ಶ್ರೀ. ಚೇತನ ರಾಜಹಂಸ ಇವರಿಗೆ ಸಂಸ್ಥೆಯ ರಜತ ಮಹೋತ್ಸವ ಆಚರಿಸುತ್ತಿರುವುದಕ್ಕಾಗಿ ಅಭಿನಂದನೆ ತಿಳಿಸಿ ಸತ್ಕಾರ ಮಾಡಿದರು.