ಹಿಂದೂಗಳಿಗೆ ಎರಡನೇ ಬಾಂಗ್ಲಾದೇಶವಾಗಿರುವ ಬಂಗಾಲ !

೧. ಖಲಿಸ್ತಾನವಾದಿಗಳು ಈ ಬಗ್ಗೆ ಏಕೆ ಮೌನವಾಗಿದ್ದಾರೆ ?

ಪಾಕಿಸ್ತಾನದಲ್ಲಿ ಸಿಕ್ಖ್ ವ್ಯಕ್ತಿಯೊಬ್ಬ ತಮ್ಮ ಬೈಸಾಖಿ ಹಬ್ಬವನ್ನು ಆಚರಿಸಿದನೆಂದು ಆತನನ್ನು ವಿವಸ್ತ್ರಗೊಳಿಸಿ ಥಳಿಸುವ ವೀಡಿಯೊವನ್ನು ಪಾಕಿಸ್ತಾನದಲ್ಲಿನ ಜಿಹಾದಿ ಸಂಘಟನೆ ‘ತೆಹರಿಕ್‌-ಎ-ಲಬ್ಬೈಕ್‌ ಪಾಕಿಸ್ತಾನ್’ (ಟಿ.ಎಲ್‌.ಪಿ.) ಬಿತ್ತರಿಸಿದೆ.

೨. ಪೊಲೀಸರು ಇದನ್ನು ಎಲ್ಲೆಡೆ ಮಾಡಬೇಕು !

ರಾಂಚಿಯಲ್ಲಿ (ಝಾರ್ಖಂಡ್) ಶ್ರೀರಾಮನವಮಿ ನಿಮಿತ್ತ ತೆಗೆದ ಮೆರವಣಿಗೆಯ ಮಾರ್ಗವನ್ನು ಪೊಲೀಸರು ಡ್ರೋನ್‌ ಕ್ಯಾಮೆರಾ ಮೂಲಕ ಪರಿಶೀಲಿಸಿದಾಗ ೧೦ ಮನೆಗಳ ಛಾವಣಿಗಳ ಮೇಲೆ ಬೃಹತ ಸಂಖ್ಯೆಯಲ್ಲಿ ಕಲ್ಲುಗಳನ್ನು ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ಪೊಲೀಸರು ಕಲ್ಲುಗಳನ್ನು ತೆಗೆಯುವಂತೆ ಮನೆ ಮಾಲೀಕರಿಗೆ ಆದೇಶಿಸಿದ್ದಾರೆ.

೩. ಈ ಹಿಂದೂಗಳನ್ನು ಯಾರು ರಕ್ಷಿಸುವರು ?

ಮ್ಯಾನ್ಮಾರ್‌ನ ಅರಾಕಾನ್‌ ಪ್ರಾಂತ್ಯದ ಬುಥಿದುವಾಂಗ್‌ನಲ್ಲಿ ರೊಹಿಂಗ್ಯಾ ಮುಸಲ್ಮಾನರ ಶಸ್ತ್ರಸಜ್ಜಿತ ಗುಂಪು ೧ ಸಾವಿರದ ೬೦೦ ಕ್ಕೂ ಹೆಚ್ಚು ಹಿಂದೂಗಳು ಮತ್ತು ೧೨೦ ಬೌದ್ಧ ಧರ್ಮದವರನ್ನು ಒತ್ತೆಯಾಳಾಗಿರಿಸಿದೆ ಎಂದು ‘ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

೪. ಹಿಂದೂಗಳಿಗೆ ಎರಡನೇ ಬಾಂಗ್ಲಾದೇಶವಾಗಿರುವ ಬಂಗಾಲ !

ರಾಮನವಮಿಯ ದಿನ ಬಂಗಾಲದಲ್ಲಿ ೩ ಕಡೆಗಳಲ್ಲಿ ಹಿಂಸಾಚಾರ ನಡೆದಿತ್ತು. ಮುರ್ಶಿದಾಬಾದ್‌ನಲ್ಲಿ ಮೇಲ್ಛಾವಣಿಯಿಂದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ನಾಡಬಾಂಬ್‌ ಸ್ಫೋಟಿಸಲಾಗಿರುವುದಾಗಿಯೂ ಹೇಳಲಾಗಿದೆ. ಮೂರೂ ಸ್ಥಳಗಳಲ್ಲಿ ನಡೆದ ಹಿಂಸಾಚಾರದಲ್ಲಿ ೧೮ ಜನರು  ಗಾಯಗೊಂಡಿದ್ದಾರೆ.

೫. ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ದೇಶವಿರೋಧಿ ಭರವಸೆಗಳನ್ನು ತಿಳಿಯಿರಿ !

ಪಾಕಿಸ್ತಾನ ಮತ್ತು ಚೀನಾ ಇವು ಅಣ್ವ್ರಸ್ತ್ರಗಳಿಂದ ಸುಸಜ್ಜಿತ ವಾಗಿರುವಾಗ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಾರತದ ಅಣ್ವಸ್ತ್ರಗಳನ್ನು ನಾಶ ಪಡಿಸುವುದು ಸೇರಿದಂತೆ ಪಾಕಿಸ್ತಾನದೊಂದಿಗೆ ಮಾತುಕತೆಯ ಭರವಸೆ ನೀಡಿದೆ.

೬. ಭಾರತದಲ್ಲಿ ಅಸುರಕ್ಷಿತ ಹಿಂದೂಗಳ ಹೆಣ್ಮಕ್ಕಳು !

ಹುಬ್ಬಳ್ಳಿಯ ಬಿವಿಬಿ ಮಹಾವಿದ್ಯಾಲಯದ ಪರಿಸರದಲ್ಲಿ ಕಾಂಗ್ರೆಸ್‌ ನಗರಸೇವಕರ ಮಗಳಾದ ನೇಹಾ ಹಿರೇಮಠ ಇವಳನ್ನು ಫೈಯ್ಯಾಜನು ಪ್ರೇಮಪ್ರಕರಣದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದನು.

೭. ಮತಾಂಧರ ಪರಾಕಾಷ್ಠೆಯ ಹಿಂದೂದ್ವೇಷವನ್ನು ತಿಳಿಯಿರಿ !

ಸಂಯುಕ್ತ ಅರಬ್‌ ಎಮಿರೇಟ್ಸ್ ಈ ಮರುಭೂಮಿಯಾಗಿರುವ ಇಸ್ಲಾಮಿಕ್‌ ದೇಶದಲ್ಲಿನ ದುಬೈ ಸೇರಿದಂತೆ ಕೆಲವು ನಗರಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಉಂಟಾಗಿದೆ. ದೇಶದಲ್ಲಿ ಹಿಂದೂ ದೇವಾಲಯ ನಿರ್ಮಾಣದಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ ಎಂದು ಮತಾಂಧರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.