ಚರ್ಮದ ಆರೋಗ್ಯವು ‘ಸೌಂದರ್ಯವರ್ಧಕ’ಗಳಿಗಿಂತ ‘ಆಹಾರ’ದ ಮೇಲೆ ಹೆಚ್ಚು ಅವಲಂಬಿತ  !

ನಮ್ಮ ದೇಹದ ರಕ್ಷಣೆಯ ಗೋಡೆ ಯಾಗಿರುವ ಚರ್ಮದ ಪೋಷಣೆಯು ನಾವು ತೆಗೆದುಕೊಳ್ಳುತ್ತಿರುವ ಆಹಾರವನ್ನೇ ಅತ್ಯಧಿಕವಾಗಿ ಅವಲಂಬಿಸಿರುತ್ತದೆ. ಆದುದರಿಂದ ನಾವು ಮೊದಲು ಚರ್ಮದ ಬಗೆಗಿನ ಸಾಮಾನ್ಯ ಮಾಹಿತಿಯನ್ನು ತಿಳಿದುಕೊಳ್ಳೋಣ. ಚರ್ಮದ ಹೊರಗೆ ಬಾಹ್ಯಸ್ತರ ಮತ್ತು ಒಳಗೆ ಆಂತರಿಕ ಸ್ತರ ಹೀಗೆ ಎರಡು ಪದರುಗಳಿರುತ್ತವೆ. ಒಳಗಿನ ಪದರಿನ ಆಶ್ರಯದಿಂದ ರಕ್ತನಾಳಗಳು ಚರ್ಮದ ಎರಡೂ ಪದರುಗಳ ರಕ್ಷಣೆಯನ್ನು ಮಾಡುತ್ತವೆ. ಜೀವಕೋಶಗಳು ಹಳೆಯದಾದಂತೆ ಅವು ಒಳಗಿನಿಂದ ಹೊರಗಿನ ದಿಕ್ಕಿಗೆ ಹೋಗುತ್ತವೆ ಮತ್ತು ಮೃತ ಜೀವಕೋಶಗಳನ್ನು ದೇಹದಿಂದ ಹೊರಗೆ ಹಾಕಲಾಗುತ್ತದೆ.

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

೧. ಚರ್ಮದ ಕಾರ್ಯ

ಅ. ಚರ್ಮವನ್ನು ‘ರಕ್ಷಣಾ ಗೋಡೆ’ ಎನ್ನಲಾಗುತ್ತದೆ; ಬಾಹ್ಯ ವಾತಾವರಣ ಮತ್ತು ರೋಗಾಣುಗಳಿಂದ ಅದು ನಮ್ಮನ್ನು ರಕ್ಷಿಸುತ್ತದೆ.

ಆ. ಚರ್ಮವು ಸೂರ್ಯನ ಬೆಳಕಿನ ಸಹಾಯದಿಂದ ‘ಡಿ’ ಜೀವಸತ್ವವನ್ನು ತಯಾರಿಸುತ್ತದೆ. ಯಾರಲ್ಲಿ ಈ ಜೀವಸತ್ವ ಕಡಿಮೆ ಇರುತ್ತದೆಯೋ, ಅವರು ಎಳೆಬಿಸಿಲಿನಲ್ಲಿ ಮೈಕಾಯಿಸಿಕೊಳ್ಳಬೇಕು.

ಇ. ಚರ್ಮವು ಶರೀರದ ಉಷ್ಣತೆ ಮತ್ತು ನೀರಿನ ಪ್ರಮಾಣವನ್ನು ನಿಯಂತ್ರಣದಲ್ಲಿಡುವ ಮಹತ್ವದ ಕಾರ್ಯವನ್ನು ಮಾಡುತ್ತಿರುತ್ತದೆ. ಜ್ವರದಲ್ಲಿ ನಮಗೆ ಬೆವರು ಬರುವುದಿಲ್ಲ ಮತ್ತು ಶರೀರದ ತಾಪಮಾನ ಹೆಚ್ಚುತ್ತದೆ. ಔಷಧವನ್ನು ತೆಗೆದುಕೊಂಡ ನಂತರ ನಮಗೆ ಬೆವರು ಬರುತ್ತದೆ ಮತ್ತು ಜ್ವರ ಕಡಿಮೆ ಆಗುತ್ತದೆ.

ಈ. ಚರ್ಮದ ರೋಗಗಳು ಉಂಟಾಗಲು ನಾವು ಸೇವಿಸುವ ಆಹಾರವು ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆಹಾರದಿಂದ ನಮ್ಮ ದೇಹದಲ್ಲಿ ರಸ, ರಕ್ತ, ಮಾಂಸ, ಕೊಬ್ಬು, ಮೂಳೆ, ಮಜ್ಜೆ ಮತ್ತು ಶುಕ್ರ ಈ ೭ ಲೋಹಗಳು ಉತ್ಪನ್ನವಾಗುತ್ತವೆ. ಅದರಲ್ಲಿನ ರಸ ಮತ್ತು ರಕ್ತ ಉತ್ತಮವಾಗಿ ತಯಾರಾದರೆ, ಚರ್ಮವು ಆರೋಗ್ಯಕರ ಮತ್ತು ಕಾಂತಿಯುಕ್ತವಾಗುತ್ತದೆ. ಅದಕ್ಕಾಗಿ ಆಹಾರವೂ ಉತ್ತಮವಾಗಿರಬೇಕು.

೨. ಚರ್ಮರೋಗಗಳು ಯಾವುದರಿಂದ ಉದ್ಭವಿಸುತ್ತವೆ ?

ಅ. ಮಸಾಲೆಯುಕ್ತ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದು.

ಆ. ಹೆಚ್ಚು ಪ್ರಮಾಣದಲ್ಲಿ ಖಾರ, ಉಪ್ಪು, ಹುಳಿ ಪದಾರ್ಥಗಳನ್ನು ತಿನ್ನುವುದು. (ಹಸಿ ಮೆಣಸಿನಕಾಯಿ, ಮಿಡಿಮಾವಿನಕಾಯಿ, ಟೊಮೆಟೊ, ಹುಣಸೆಹಣ್ಣು, ಮೊಸರು, ಪಂಜಾಬಿ ಪದಾರ್ಥಗಳನ್ನು ಸೇವಿಸುವುದು)

ಇ. ಹುಳಿ ಹಾಕಿದ ಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದು (ಇಡ್ಲಿ, ದೋಸೆ, ಉತ್ತಪ್ಪಾ, ಬ್ರೆಡ್, ರಸ್ಕ (ಟೋಸ್ಟ) ಇತ್ಯಾದಿಗಳು)

ಈ. ವಿರುದ್ಧ ಪದಾರ್ಥಗಳನ್ನು ಸೇವಿಸುವುದು (ಮಿಲ್ಕಶೇಕ್, ಬಾಳೆಹಣ್ಣಿನ ಶೀಕರಣಿ, ಅನಾನಾಸಿನ ರಾಯಿತಾ.)

ಉ. ಮಾಂಸಾಹಾರ ಸೇವಿಸುವ ವ್ಯಕ್ತಿಯಲ್ಲಿ ಆ ಆಹಾರವು ಜೀರ್ಣವಾಗದಿದ್ದರೆ ಚರ್ಮರೋಗಗಳಾಗುತ್ತವೆ.

ಊ. ಇದಲ್ಲದೇ ದಿನವಿಡಿ ಬಹಳ ಸಲ ಚಹಾ ಸೇವನೆ, ತಂಪು ಪಾನೀಯ, ರಾತ್ರಿಯ ಜಾಗರಣೆ, ಮಾನಸಿಕ ಒತ್ತಡ, ಸೌಂದರ್ಯ ವರ್ಧಕಗಳ ಅತಿಯಾದ ಬಳಕೆ, ಮದ್ಯಪಾನ ಈ ಎಲ್ಲವುಗಳು ಚರ್ಮರೋಗಗಳಿಗೆ ಕಾರಣವಾಗುತ್ತವೆ.

೩. ಚರ್ಮ ರೋಗಗಳಾಗದಂತೆ ತೆಗೆದುಕೊಳ್ಳುವ ಕಾಳಜಿ !

ಅ. ಜೀರ್ಣಕ್ರಿಯೆ ಸುಧಾರಿಸಲು ಊಟದ ಸಮಯವನ್ನು ಪಾಲಿಸಬೇಕು, ಜೀರ್ಣವಾಗುವಷ್ಟೇ ತಿನ್ನಬೇಕು. ರಾತ್ರಿ ಜಾಗರಣೆ ಮಾಡಬಾರದು. ಪಡವಲಕಾಯಿ, ಕುಂಬಳ ಕಾಯಿ, ಹೀರೆಕಾಯಿ ಇಂತಹ ತರಕಾರಿಗಳು, ಹಾಗೆಯೇ ಸೌತೆ ಕಾಯಿ, ಗಜ್ಜರಿ, ಮೂಲಂಗಿ ಇವುಗಳ ಕೊಸಂಬರಿಯನ್ನು ತಿನ್ನಬೇಕು. ಹಣ್ಣುಗಳಲ್ಲಿ ದ್ರಾಕ್ಷಿ, ದಾಳಿಂಬೆ, ನೆಲ್ಲಿಕಾಯಿ ಮತ್ತು ಪಪ್ಪಾಯಿ ತಿನ್ನಬೇಕು.

ಆ. ದೇಹದಲ್ಲಿನ ನೀರಿನ ಪ್ರಮಾಣವನ್ನು ಸರಿಯಾಗಿಟ್ಟುಕೊಳ್ಳಬೇಕು. ಬಾಯಾರಿಕೆ ಯಾದಾಗ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು. ‘ಚರ್ಮ ಕಾಂತಿಯುತವಾಗಲು ಸಾಕಷ್ಟು ನೀರು ಕುಡಿಯಬೇಕು’, ಎಂಬ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುತ್ತವೆ; ಆದರೆ ಅಗತ್ಯವಿದ್ದಷ್ಟೇ ನೀರನ್ನು ಕುಡಿಯುವುದು, ಆರೋಗ್ಯದ ದೃಷ್ಟಿಯಲ್ಲಿ ಯೋಗ್ಯವಾಗಿದೆ ! ಅತಿರೇಕ ಎಂದಿಗೂ ಅಪಾಯಕಾರಿ

ಇ. ಹಾಲು ಕುಡಿಯುವಾಗ ಅದರಲ್ಲಿ ಯಾವಾಗಲೂ ಚಿಟಿಕೆಯಷ್ಟು ಅರಿಶಿಣವನ್ನು ಹಾಕಿ ಕುಡಿಯಬೇಕು.

ಉ. ಚರ್ಮದ ಮೇಲೆ ರಸಾಯನಿಕ ಪದಾರ್ಥಗಳಿರುವ ಸೌಂದರ್ಯವರ್ಧಕಗಳನ್ನು ಬಳಸುವ ಬದಲು ನೈಸರ್ಗಿಕ ಪದಾರ್ಥಗಳಿರುವ ಎಣ್ಣೆ, ಲೇಪನ, ಉಟಣೆಗಳನ್ನು ಬಳಸಬೇಕು.

– ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪುಣೆ (೧೮.೧೨.೨೦೨೩)