ಸಾಧಕರು, ವಾಚಕರು ಮತ್ತು ಹಿತಚಿಂತಕರಿಗಾಗಿ ಮಹತ್ವದ ಮಾಹಿತಿ

ಈಗ ಆನ್ಲೈನ್ ಆರ್ಥಿಕ ವಂಚನೆ ಮಾಡುವುದು ದಿನದಿನೇ ಹೆಚ್ಚುತ್ತಿದೆ. ಇದರಲ್ಲಿ ಮನೆಯಲ್ಲಿದ್ದು ನೌಕರಿ ನೀಡುವ ಆಮಿಷ ಒಡ್ಡಿ ಆರ್ಥಿಕ ವಂಚನೆಯ ಪ್ರಮಾಣ ಈಗ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ. ದೂರವಾಣಿ ಕರೆಯ ಮೂಲಕ ಸಂಪರ್ಕಿಸಿ ಹಾಗೂ ‘ವಾಟ್ಸಪ್’ ತಂತ್ರಾಂಶದ ಮೂಲಕ ಸಂದೇಶ ನೀಡಿ ಈ ರೀತಿಯಲ್ಲಿ ಮನೆಯಲ್ಲಿದ್ದುಕೊಂಡು ‘ಡೇಟಾ ಎಂಟ್ರಿ’ ಮಾಡುವ ನೌಕರಿ ಬಗ್ಗೆ ಹೇಳುತ್ತಾರೆ. ನಂತರ ವ್ಯಕ್ತಿಗೆ ಮನೆಯಲ್ಲಿದ್ದುಕೊಂಡು ಮಾಡಬಹುದಾದಂತಹ ಕೆಲಸ ನೀಡುತ್ತಾರೆ. ಈ ಕೆಲಸ ನೀಡುವ ಮೊದಲು ಆ ಕಂಪನಿಯ ಮೂಲಕ ‘ಆನ್ಲೈನ್’ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಕೆಲಸದ ಕುರಿತಾದ ಷರತ್ತುಗಳು ವಿಧಿಸಿರುತ್ತಾರೆ. ಅನಂತರ ಕೆಲಸ ಹೇಳಿರುವ ಕಾಲಾವಧಿಯಲ್ಲಿ ಪೂರ್ಣವಾದ ನಂತರ ಒಪ್ಪಂದದ ಪ್ರಕಾರ ನಿಮ್ಮಿಂದ ಯೋಗ್ಯ ರೀತಿಯಲ್ಲಿ ಕೆಲಸ ಆಗಿಲ್ಲ ಎಂದು ಸುಳ್ಳು ವರದಿ (ರಿಪೋರ್ಟ್) ನೀಡುತ್ತಾರೆ.
ಅದರ ನಂತರ ಬೋಗಸ್ ನ್ಯಾಯವಾದಿಯ ಹೆಸರಿನಿಂದ ‘ಇ-ಮೇಲ್’ ಮೂಲಕ ‘ನೀವು ಮಾಡಿರುವ ತಪ್ಪಾದ ಕೆಲಸದಿಂದ ನಿಮಗೆ ಕಲಂ ಅನ್ವಯಿಸುತ್ತಿದೆ’ ಎಂದು ಕಾನೂನು ರೀತ್ಯಾ ನೋಟಿಸ್ ನೀಡುತ್ತಾರೆ. ಅನಂತರ ಸಂಬಂಧಿತ ವ್ಯಕ್ತಿಯನ್ನು ನ್ಯಾಯವಾದಿಯು ಸಂಪರ್ಕಿಸುತ್ತಾನೆ ಮತ್ತು ನಿಮ್ಮ ಮೊಕದ್ದಮೆ ನ್ಯಾಯಾಲಯದಲ್ಲಿ ದಾಖಲಾಗದೇ ಅದನ್ನು ಮುಚ್ಚಬೇಕೆಂದಿದ್ದರೆ ಹಣ ನೀಡಬೇಕಾಗುತ್ತದೆ ಎಂದು ಹೇಳಿ ಹಣ ವಸೂಲಿ ಮಾಡುತ್ತಾರೆ. ನಂತರ ಕಂಪನಿಯ ಜೊತೆಗೆ ಮಾಡಿರುವ ಒಪ್ಪಂದ ರದ್ದುಪಡಿಸುವುದಕ್ಕಾಗಿ, ಜಾರಿಗೊಳಿಸಿರುವ ಕಲಂಗಳನ್ನು ರದ್ದುಗೊಳಿಸುವುದಕ್ಕಾಗಿ ಹಾಗೂ ತುಂಬಿರುವ ಹಣದ ಮೇಲೆ ಜಿಎಸ್ಟಿ ತುಂಬುವುದಕ್ಕಾಗಿ ಹೀಗೆ ಬೇರೆ ಬೇರೆ ಕಾರಣಗಳನ್ನು ಹೇಳಿ ಆ ವ್ಯಕ್ತಿಯ ಮೇಲೆ ಒತ್ತಡ ತರುತ್ತಾರೆ ಹಾಗೂ ಕಾನೂನುಕ್ರಮ ಕೈಗೊಳ್ಳುವುದಾಗಿ ಬೆದರಿಕೆ ನೀಡಿ ಹಣ ಕಳುಹಿಸಲು ಅನಿವಾರ್ಯಗೊಳಿಸುತ್ತಾರೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೌಕರಿ ನೀಡುವ ಕಂಪನಿಯ ಜಾಲತಾಣ, ಕಂಪನಿಯು ಮಾಡಿರುವ ಒಪ್ಪಂದ, ಕಂಪನಿಯಿಂದ ಕಳುಹಿಸಿರುವ ಕಾನೂನುರೀತ್ಯಾ ನೋಟೀಸ್ ಹಾಗೂ ನ್ಯಾಯವಾದಿ ಇದೆಲ್ಲವೂ ಸುಳ್ಳಾಗಿರುತ್ತದೆ. ಆದ್ದರಿಂದ ಯಾರಾದರೂ ಈ ರೀತಿ ನೌಕರಿ ನೀಡುತ್ತೇವೆ ಎಂದು ಸಂದೇಶ ನೀಡಿದರೆ ಅಥವಾ ಇ-ಮೇಲ್ ಕಳುಹಿಸಿದರೆ ಜಾಗರೂಕರಾಗಿ ಈ ರೀತಿ ಪ್ರಸಂಗಗಳಿಗೆ ಪ್ರತಿಕ್ರಿಯಿಸಬೇಡಿ.
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಮಾಲೆಗಾಂವ್ ನಲ್ಲಿ ಬಕ್ರೀದ್ ಸಂದರ್ಭದಲ್ಲಿ 906 ಗೋವುಗಳಿಗೆ ಜೀವದಾನ : 257 ಗೋಕಳ್ಳಸಾಗಾಣಿಕೆದಾರರ ವಿರುದ್ಧ ಪ್ರಕರಣ ದಾಖಲು !
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ