ಕುರಾನ್ ಸುಡುವ ಸಾಲ್ವಾನ್ ಮೋಮಿಕಾ ಜೀವಂತ !

ಓಸ್ಲೋ (ನಾರ್ವೆ) – ನಾನು ಜೀವಂತವಾಗಿದ್ದೇನೆ. ನಾರ್ವೆಯಲ್ಲಿನ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ನನ್ನ ಸಾವಿನ ಸುಳ್ಳು ಸುದ್ದಿಯನ್ನು ಪ್ರಕಟಿಸಿವೆ ಎಂದು ಇಸ್ಲಾಂನ (ಕಟ್ಟರ್)ತೀವ್ರ ವಿಮರ್ಶಕ (ಟೀಕಾಕಾರ) ಮತ್ತು ಕುರಾನ್ ಸುಡುವ ಸಾಲ್ವಾನ ಮೊಮಿಕಾ ಹೇಳಿದ್ದಾರೆ.
The newspapers and news sites that published the news of my death in Norway are false and their goal is to intimidate everyone who doubts or criticizes Islam. Therefore, I say, your rumors and false media will not scare us. I am alive and will not surrender despite the injustice… pic.twitter.com/PwmDwY9THa
— Salwan momika (@salwan_momika1) April 11, 2024
ಅವರು ಮುಂದೆ ಮಾತನಾಡಿ, “ಇಸ್ಲಾಂ ಧರ್ಮವನ್ನು ಅನುಮಾನಿಸುವ ಅಥವಾ ಟೀಕೆ ಮಾಡುವ ಪ್ರತಿಯೊಬ್ಬರನ್ನೂ ಹೆದರಿಸುವುದು ಇಂತಹ ಮಾಧ್ಯಮಗಳ ಗುರಿಯಾಗಿದೆ. ಇಂತಹ ಸುದ್ದಿಗಳಿಗೆ ನಾನು ಹೆದರುವುದಿಲ್ಲ. ನಾರ್ವೆಯ ಅಧಿಕಾರಿಗಳು ನನಗೆ ಅನ್ಯಾಯ ಮಾಡಿದ್ದರೂ ಸಹ ನಾನು ಶರಣಾಗುವುದಿಲ್ಲ. ನಾನು ವಿಮಾನದಿಂದ ಇಳಿದ ತಕ್ಷಣ ಪೊಲೀಸರು ನನ್ನನ್ನು ಬಂಧಿಸಿ ನನ್ನ ಮೊಬೈಲ್ ಅನ್ನು ವಶಪಡಿಸಿಕೊಂಡರು. ಯಾರೊಂದಿಗೂ ಸಂವಾದ (ಸಂವಹನ) ನಡೆಸಲು ನನಗೆ ಅವಕಾಶ ನೀಡಲಿಲ್ಲ. ಪೊಲೀಸರು ನನ್ನನ್ನು ನೇರವಾಗಿ ನ್ಯಾಯಾಲಯಕ್ಕೆ ಕರೆದೊಯ್ದರು. ‘ನಾರ್ವೆಯ ರಾಷ್ಟ್ರೀಯ ಭದ್ರತೆಗೆ ಧಕ್ಕೆ ನಿರ್ಮಾಣ ಮಾಡಿರುವ ಕಾರಣ ನಿಮ್ಮನ್ನು ವಶಕ್ಕೆ (ಕಸ್ಟಡಿಗೆ) ತೆಗೆದುಕೊಳ್ಳಲಾಗಿದೆ’ ಎಂದು ನ್ಯಾಯಾಲಯ ಹೇಳಿದೆ. ನಿಮ್ಮ ಜೈಲುವಾಸ ಅಥವಾ ನಿಮ್ಮ ನ್ಯಾಯಾಲಯವು ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ. ಇಸ್ಲಾಂ ಹಲವು ದೇಶಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿರುವುದರಿಂದ ಮತ್ತು ಅಲ್ಲಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗುತ್ತಿರುವ ಕಾರಣ ನೀವು ಸಂತೋಷವಾಗಿರುತ್ತೀರಿ ಎಂದು ಕಾಣಿಸುತ್ತಿದೆ. ಆನಂತರ ಪೊಲೀಸರು ನನ್ನನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ದರು. ಅವರು ನನ್ನನ್ನು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಮಾಧ್ಯಮಗಳಿಂದ ದೂರವಿರುವ ರಹಸ್ಯ ಜೈಲಿನಲ್ಲಿ ಕೂಡಿಹಾಕಿದರು ಎಂದು ಮೋಮಿಕಾ ತಿಳಿಸಿದರು.
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ