‘ಅಲ್ಲಾಹು ಅಕ್ಬರ್ ‘ (ಅಲ್ಲ ಮಹಾನ) ಹೇಳಲು ಅನಿವಾರ್ಯಗೊಳಿಸಲಾಯಿತು !

ಮೀರಾ ರೋಡ (ಠಾಣೆ ಜಿಲ್ಲೆ) – ಇಲ್ಲಿ ಮಾರ್ಚ್ ೨೫ ರಂದು ಓರ್ವ ಅಪ್ರಾಪ್ತ ಹಿಂದೂ ಹುಡುಗನು ರಸ್ತೆಯಲ್ಲಿ ಇನೋರ್ವ ಹಿಂದೂವಿಗೆ ‘ಜೈ ಶ್ರೀರಾಮ’ ಎಂದು ಹೇಳಿ ನಮಸ್ಕರಿಸಿದನು. ಇದರಿಂದ ಸಿಟ್ಟಾದ ಮತಾಂಧರು ಅವನಿಗೆ ಹಿಗ್ಗಾಮುಗ್ಗಾ ಥಳಿಸಿದರು; ಅಷ್ಟೇ ಅಲ್ಲದೆ ಆ ಸಂತ್ರಸ್ತ ಹಿಂದೂ ಹುಡುಗನಿಗೆ ‘ಅಲ್ಲಾಹು ಅಕ್ಬರ್’ ಎಂದು ಹೇಳಲು ಅನಿವಾರ್ಯಗೊಳಿಸಿದರು. ಈ ಸಂದರ್ಭದಲ್ಲಿ ಸಿಸಿಟಿವಿ ದೃಶ್ಯಾವಳಿಯು ಪ್ರಸಾರವಾಗಿದ್ದು ೫ ಜನರ ವಿರುದ್ಧ ದೂರು ದಾಖಲಾಗಿದೆ.
೧. ಸಂತ್ರಸ್ತ ಹುಡುಗ ರಾತ್ರಿ ೯ ಗಂಟೆಗೆ ಹಾಲು ತರಲು ಮನೆಯಿಂದ ಹೊರಗೆ ಬಂದಿದ್ದ. ಅವನು ಅವರ ಅಪಾರ್ಟ್ಮೆಂಟ್ ಕಡೆಗೆ ಬರುವಾಗ ದಾರಿಯಲ್ಲಿ ವಾಚ್ ಮ್ಯಾನ್ ನಿಂತಿದ್ದಾರೆ, ಎಂದು ಭಾವಿಸಿ ಅವರಿಗೆ ‘ಜೈ ಶ್ರೀ ರಾಮ’ ಎಂದು ಹೇಳಿ ನಮಸ್ಕರಿಸಿದನು.
೨. ಅದೇ ಸಮಯದಲ್ಲಿ ಅಲ್ಲೇ ನಿಂತಿದ್ದ ೫ ಜನ ಮತಾಂಧರ ಗುಂಪು ಅವನಿಗೆ ನಿಲ್ಲಲು ಹೇಳಿದರು. ಅವನು ಹೆದರಿ ಅಪಾರ್ಟ್ಮೆಂಟ್ ನಲ್ಲಿ ಓಡಿ ಹೋದನು. ಅವನನ್ನು ಬೆಂಬೇತ್ತಿರುವ ಮತಾಂಧರು ಅಲ್ಲಿಗೆ ಬಂದರು ಮತ್ತು ಅಪಾರ್ಟ್ಮೆಂಟ್ ಲಿಪ್ಟ್ ಹತ್ತಿರ ಅವನನ್ನು ಹಿಡಿದು ಥಳಸಿದರು.
೩. ಸಂತ್ರಸ್ತ ಹುಡುಗನಿಂದ ‘ಅಲ್ಲಾಹು ಅಕ್ಬರ್’ (ಅಲ್ಲ ಮಹಾನ) ಎಂದು ಹೇಳಿಸಿದರು. ಭಯದಿಂದ ಆ ಸಂತ್ರಸ್ತ ಹುಡುಗ ಹೇಳಿದನು.
೪. ಅಲ್ಲಿ ನಿಂತಿರುವ ಓರ್ವ ವ್ಯಕ್ತಿಯು ಆ ಹುಡುಗನ ತಂದೆಗೆ ಈ ಘಟನೆಯ ಮಾಹಿತಿ ನೀಡಿದರು. ತಂದೆ ಅಲ್ಲಿಗೆ ಬಂದ ನಂತರ ಮತಾಂಧರು ಓಡಿ ಹೋದರು. ಈ ಘಟನೆಯ ನಂತರ ಸಂತ್ರಸ್ತ ಹುಡುಗ ಹೆದರಿಕೊಂಡಿದ್ದಾನೆ.
೫. ಮೇರಾ ರೋಡ್ ಪರಿಸರದಲ್ಲಿ ಮತಾಂಧ ಮುಸಲ್ಮಾನರಿಂದ ಧಾರ್ಮಿಕ ಬಿರಿಕು ನಿರ್ಮಾಣ ಮಾಡುವ ಘಟನೆಗಳು ಹೆಚ್ಚುತ್ತಲೇ ಇವೆ. ಜನವರಿ ೨೧ ರಂದು ಅಲ್ಲಿ ಮತಾಂಧರು ಹಿಂದೂಗಳ ವಾಹನಗಳ ಮೇಲೆ ದಾಳಿ ಮಾಡಿ ಗಲಭೆ ನಡೆಸಿದ್ದರು. ಇತ್ತೀಚಿಗೆ ಇಲ್ಲಿ ಓರ್ವ ಮತಾಂಧನಿಂದ ಶ್ರೀ ಸ್ವಾಮಿ ಸಮರ್ಥ ಇವರ ಮುಖದ ಮೇಲೆ ಪ್ರಧಾನಮಂತ್ರಿ ಮೋದಿ ಅವರ ಮುಖದ ಚಿತ್ರ ಅಂಟಿಸಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದರು.
Thane: Minor assaulted for greeting youth with ‘Jai Shri Ram’, forced to chant ‘Allah Hu Akbar’; incident caught on CCTV camerahttps://t.co/6kZRIuZ5ED
— OpIndia.com (@OpIndia_com) March 26, 2024
ಸಂಪಾದಕೀಯ ನಿಲುವು‘ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ’, ಎಂದು ಹೇಳುವ ಮುಸಲ್ಮಾನ ಪ್ರೇಮಿಗಳು ಇದರ ಬಗ್ಗೆ ಏನು ಹೇಳುವರು ? ಮೀರಾ ರೋಡ್ ಪಾಕಿಸ್ತಾನದಲ್ಲಿಯಿದೆಯೆ ? ಇಲ್ಲಿಯ ಮತಾಂಧ ಮುಸಲ್ಮಾನರು ಪದೇಪದೇ ಸಮಾಜಘಾತಕ ಕೃತ್ಯಗಳನ್ನು ನಡೆಸಿ ಹಿಂದೂಗಳನ್ನು ಗುರಿ ಮಾಡುತ್ತಾರೆ. ಇದನ್ನು ತಡೆಯುವುದಕ್ಕಾಗಿ ಪೊಲೀಸ ಮತ್ತು ಸರಕಾರ ಏನು ಮಾಡಲಿದೆ ? |
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್