ಅಮೇರಿಕಾದಿಂದ ಪಾಕಿಸ್ತಾನ ಮತ್ತು ತಾಲಿಬಾನ್ ಗೆ ಕರೆ !

ವಾಷಿಂಗ್ಟನ್ (ಅಮೇರಿಕಾ) – ಪಾಕಿಸ್ತಾನವು ಅಪಘಾನಿಸ್ತಾನದಲ್ಲಿ ನಡೆಸಿರುವ ವೈಮಾನಿಕ ದಾಳಿಯ ಕುರಿತು ಅಮೆರಿಕದಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೇರಿಕಾದಿಂದ ತಾಲಿಬಾನಗೆ ‘ಅಪಘಾನಿಸ್ತಾನದ ಭೂಮಿಯಿಂದ ಭಯೋತ್ಪಾದಕ ದಾಳಿ ಮಾಡದಂತೆ ಕಾಳಜಿ ವಹಿಸುವುದು ಮತ್ತು ಪಾಕಿಸ್ತಾನವು ಸಹನೆಯಿಂದ ಇರಲು ಕರೆ ನೀಡಿದೆ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ನಾಗರಿಕರಿಗೆ ಹಾನಿ ಆಗಬಾರದೆಂದು ಅಮೇರಿಕಾ ಹೇಳಿದೆ.
ಅಮೇರಿಕಾದ ವಿದೇಶಾಂಗ ಇಲಾಖೆಯ ಮುಖ್ಯ ಉಪವಕ್ತಾರ ವೇದಾಂತ ಪಟೇಲ್ ಇವರು, ‘ಅಪಘಾನಿಸ್ತಾನ ಇದು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಹಾನಿ ಮಾಡಬಯಸುವ ಭಯೋತ್ಪಾದಕರ ಸುರಕ್ಷಿತ ಅಡಗುತಾಣ ಆಗಬಾರದು, ಇದಕ್ಕಾಗಿ ಅಮೇರಿಕಾ ಕಟಿಬದ್ಧವಾಗಿದೆ’, ಎಂದು ಹೇಳಿದರು.
ಅಪಘಾನಿಸ್ತಾನಕ್ಕೆ ಹೊಣೆಗಾರರನ್ನಾಗಿ ಮಾಡದಿರಿ !
ಅಪಘಾನಿಸ್ತಾನದ ವಕ್ತಾರರಾದ ಜಬಿಉಲ್ಲಾಹ ಮುಜಾಹಿದ್ ಇವರು ಮಾತನಾಡಿ, ಪಾಕಿಸ್ತಾನ ಸತತವಾಗಿ ದಾಳಿಯ ಕಾರ್ಯಾಚರಣೆ ನಡೆಸುತ್ತಿದೆ. ಅಪಘಾನಿಸ್ತಾನದ ಗಡಿಯ ಭಾಗದಲ್ಲಿ ಪಾಕಿಸ್ತಾನದ ಸೈನ್ಯ ಉದ್ದೇಶಪೂರ್ವಕವಾಗಿ ನಮ್ಮ ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ ಎಂದು ಹೇಳಿದರು.
ಎರಡು ದೇಶಗಳಿಂದ ಪರಸ್ಪರರ ಆರೋಪ !
ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು, ಕಳೆದ ೨ ವರ್ಷಗಳಲ್ಲಿ ನಾವು ಭಯೋತ್ಪಾದಕ ಗುಂಪಿನ ಉಪಸ್ಥಿತಿಯ ಬಗ್ಗೆ ಅಪಘಾನ ಸರಕಾರಕ್ಕೆ ಮೇಲಿಂದ ಮೇಲೆ ಗಂಭೀರವಾಗಿ ಕಳವಳ ವ್ಯಕ್ತ ಪಡಿಸಿದೆವು; ಆದರೆ ಅದು ಸ್ವೀಕರಿಸಲಿಲ್ಲ ಮತ್ತು ಸೈನ್ಯದ ನೆಲೆಯ ಮೇಲೆ ದಾಳಿ ನಡೆಸಿತು, ಎಂದು ಹೇಳಿದರು.
ಪಾಕಿಸ್ತಾನ ಸೈನ್ಯವು, ಭಯೋತ್ಪಾದನೆಗೆ ಅಪಘಾನಿಸ್ತಾನದ ಸಂಪೂರ್ಣ ಬೆಂಬಲ ಮತ್ತು ಸಹಾಯವಿದೆ ಎಂದು ಹೇಳಿದೆ.
ತಾಲಿಬಾನದ ರಕ್ಷಣಾ ಸಚಿವಾಲಯವು, ವೈಮಾನಿಕ ದಾಳಿಗೆ ಪ್ರತ್ಯುತ್ತರ ನೀಡುವುದಕ್ಕಾಗಿ ಅವರ ಸುರಕ್ಷಾ ದಳವು ಗಡಿಯಲ್ಲಿನ ಪಾಕಿಸ್ತಾನಿ ಸೈನ್ಯವನ್ನು ಗುರಿ ಮಾಡಿದೆ. ನಾವು ಈ ದಾಳಿಯನ್ನು ಖಂಡಿಸುವುದಕ್ಕಾಗಿ ಪಾಕಿಸ್ತಾನದ ಅಧಿಕಾರಿಗಳನ್ನು ಕರೆಸಿಕೊಂಡೆವು. ಪಾಕಿಸ್ತಾನ ಸ್ವಂತ ತಪ್ಪು ಮರೆಮಾಚುವುದಕ್ಕಾಗಿ ಈ ರೀತಿ ನಡೆದುಕೊಳ್ಳುತ್ತದೆ ಎಂದು ಹೇಳಿದೆ.
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ಪಾಕ್ ಸೈನ್ಯವು ಕಾರ್ಗಿಲ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿತು !
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim