ಮಂಗಳೂರಿನಲ್ಲಿ ಶ್ರೀರಾಮನ ಅವಮಾನದ ವಿರುದ್ಧ ಧ್ವನಿ ಎತ್ತಿದ ಮಹಿಳೆಗೆ ಇಸ್ಲಾಮಿಕ್ ದೇಶಗಳಿಂದ ಬೆದರಿಕೆ !

ಮಂಗಳೂರು – ಇಲ್ಲಿನ ಜಿರಿಸಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಭಾ ಎಂಬ ಶಿಕ್ಷಕಿ ಶ್ರೀರಾಮನನ್ನು ಅವಮಾನಿಸಿದ್ದಕ್ಕಾಗಿ ಧ್ವನಿ ಎತ್ತಿದ್ದ ಮಹಿಳೆಗೆ ಇದೀಗ ದುಬೈ, ಕತಾರ್, ಸೌದಿ ಅರೇಬಿಯಾದಿಂದ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಈ ಸಂದರ್ಭದಲ್ಲಿ ಈ ಮಹಿಳೆಯು ಇಲ್ಲಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.