ರಾಜ್ಯ ಸರಕಾರ ಘೋಷಿಸಿರುವ ಸಾರ್ವಜನಿಕ ರಜೆಯ ಆದೇಶದ ವಿರುದ್ಧದ ಪ್ರಕರಣ

ಮುಂಬಯಿ – ರಾಜ್ಯ ಸರಕಾರವು ಶ್ರೀ ರಾಮಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತದಿಂದ ಘೋಷಿಸಿರುವ ಸಾರ್ವಜನಿಕ ರಜೆಯ ಆದೇಶದ ವಿರುದ್ಧ ಕಾನೂನು ವಿಭಾಗದ ನಾಲ್ವರು ವಿದ್ಯಾರ್ಥಿಗಳು ಮುಂಬೈ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ‘ರಾಜ್ಯ ಸರಕಾರ ಘೋಷಿಸಿರುವ ರಜೆ ತನ್ನ ಮನಸ್ಸಿನಂತಿದೆ. ಇಂತಹ ರಜೆಯನ್ನು ಘೋಷಿಸಲು ರಾಜ್ಯ ಸರಕಾರದ ಅಧಿಕಾರದಲ್ಲಿಲ್ಲ’ ಎಂದು ಅರ್ಜಿಗಳಲ್ಲಿ ಹೇಳಲಾಗಿತ್ತು. ಈ ಅರ್ಜಿಯನ್ನು ಮುಂಬೈ ಉಚ್ಚನ್ಯಾಯಾಲಯ ತಿರಸ್ಕರಿಸಿದೆ. ಇಂತಹ ಅರ್ಜಿಯಿಂದ ನಮಗೆ ಆಘಾತವಾಗಿದೆ. ಅರ್ಜಿಯಲ್ಲಿ ಇನ್ನಿತರ ಗಂಭೀರ ಹೇಳಿಕೆಗಳಿವೆ. ಅರ್ಜಿಯಲ್ಲಿ ತಿಳಿಸಿರುವಂತಹ ಹೇಳಿಕೆಗಳ ಬಗ್ಗೆ ಕಾನೂನಿನ ವಿದ್ಯಾರ್ಥಿಗಳಲ್ಲಿ ಕಲ್ಪನಾಶಕ್ತಿ ಕಲ್ಪನೆ ಇದೆ ಎಂದು ನಂಬುವುದು ನಮಗೆ ಕಷ್ಟ ಎಂದು ನ್ಯಾಯಾಲಯವು ವಿಚಾರಣೆಯಲ್ಲಿ ಹೇಳಿದೆ. ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರಿದ್ದ ವಿಶೇಷ ಪೀಠದ ಮುಂದೆ ವಿಚಾರಣೆ ನಡೆಯಿತು.
‘ಬಾಹ್ಯ ಕಾರಣಗಳಿಗಾಗಿ ಅರ್ಜಿ ಸಲ್ಲಿಸಲಾಗಿದೆಯೆನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಅರ್ಜಿಯೇ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿದೆ. ನ್ಯಾಯಾಲಯಕ್ಕೆ ಬರುವ ಅರ್ಜಿದಾರರು ಕೇವಲ ಸ್ವಚ್ಛ ಕೈಗಳಿಂದ ಮಾತ್ರವಲ್ಲ, ಸ್ವಚ್ಛವಾದ ಮನಸ್ಸಿನೊಂದಿಗೆ ಬರಬೇಕು.’ ಎಂದು ನ್ಯಾಯಾಲಯ ಹೇಳಿದೆ.
1. ಸರಕಾರದ ನಿರ್ಣಯ ರಾಜಕೀಯ ಪ್ರೇರಿತವಲ್ಲ ಮತ್ತು ಮೂಲಭೂತ ಹಕ್ಕುಗಳಿಗೆ ಅಪಾಯ ನಿರ್ಮಾಣ ಮಾಡುವಂತಹದ್ದಲ್ಲ. ನಿರ್ಣಯವು ಕಾರ್ಯನೀತಿಯ ನಿರ್ಧಾರವಾಗಿದೆ. 17 ರಾಜ್ಯಗಳು ಸಾರ್ವಜನಿಕ ರಜೆಯನ್ನು ಘೋಷಿಸಿವೆ. ಅಂತಹ ನಿರ್ಣಯ ಕಾರ್ಯಕಾರಿ ನೀತಿಯ ವ್ಯಾಪ್ತಿಯಡಿಯಲ್ಲಿ ಬರುತ್ತದೆ ಎಂದು ನ್ಯಾಯಾಲಯ ಹೇಳಿದೆ.
2. `ನಿರ್ದಿಷ್ಟ ಧರ್ಮದೆಡೆಗೆ ವಾಲಿಸುವುದು ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿಲ್ಲ’, ಎಂದು ಅರ್ಜಿದಾರರು ಹೇಳಿದಾಗ, ` ರಾಜ್ಯ ಸರಕಾರಕ್ಕೆ ರಜೆ ಘೋಷಿಸುವ ಸಂಪೂರ್ಣ ಅಧಿಕಾರವಿದೆ’, ಎಂದು ಸರಕಾರಿ ನ್ಯಾಯವಾದಿಗಳು ಹೇಳಿದರು.
Breaking | Bombay High Court Rejects PIL Challenging Maharashtra Govt’s Declaration Of Public Holiday On Ram Mandir Consecration Day
reports @CourtUnquote #RamMandir #Publicholiday #BombayHighCourt https://t.co/lyztusEXDE
— Live Law (@LiveLawIndia) January 21, 2024
ಸಂಪಾದಕರು ನಿಲುವು* ಅರ್ಜಿಯು ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿದೆ ಎಂದು ನ್ಯಾಯಾಲಯದ ಅಭಿಪ್ರಾಯ |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ