ಶ್ರೀರಾಮನ ಮೇಲಿನ ಕಾಂಗ್ರೆಸ್‌ ದ್ವೇಷ ತಿಳಿಯಿರಿ !

೧. ಶ್ರೀರಾಮನ ಮೇಲಿನ ಕಾಂಗ್ರೆಸ್‌ದ್ವೇಷ ತಿಳಿಯಿರಿ !

ಶ್ರೀರಾಮನಿಂದಾಗಿ ಕಾಂಗ್ರೆಸ್‌ಗೆ ಸಮಸ್ಯೆಯಾಗಿತ್ತು. ಈಗ ದೇಶದಲ್ಲಿ ಶ್ರೀರಾಮನನ್ನು ಬಹಿರಂಗವಾಗಿ ಬೆಂಬಲಿಸಲಾಗುತ್ತಿದೆ’ ಎಂದು ಕಾಂಗ್ರೆಸ್‌ನ ವಿದೇಶದ ಶಾಖೆ ‘ಇಂಡಿಯನ್‌ ಓವರ್‌ ಸೀಸ್‌ ಕಾಂಗ್ರೆಸ್’ ಅಧ್ಯಕ್ಷ ಸ್ಯಾಮ್‌ ಪಿತ್ರೋದಾ ಹೇಳಿದ್ದಾರೆ.

೨. ಇಂತಹವರನ್ನು ಜೈಲಿಗೆ ಹಾಕುವುದು ಯಾವಾಗ ?

ಪ್ರಧಾನಿ ಮೋದಿ ಇವರು ‘ಹಿಂದೂ ಯಾವುದೇ ಧರ್ಮವಲ್ಲ’ ಎಂದಾಗ ಭಾವನೆಗಳಿಗೆ ಧಕ್ಕೆಯಾಗಲ್ಲ; ಆದರೆ ನಾನು ಅಂತಹ ಹೇಳಿಕೆ ನೀಡಿದಾಗ ಭೂಕಂಪ ಆಗುತ್ತದೆ’ ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ.

೩. ಸರಕಾರ ಇಂತಹ ಶಾಲೆಗಳಿಗೆ ಬೀಗ ಜಡಿಯಬೇಕು

ದೇವಾಸ್‌ನಲ್ಲಿ (ಮಧ್ಯಪ್ರದೇಶ) ೨ ಕ್ರೈಸ್ತ ಮಿಶನರಿ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಕ್ರೈಸ್ತರ ಪ್ರಾರ್ಥನೆ ಕಲಿಸಿ ಅವರನ್ನು ಮತಾಂತರಿಸಲಾಗುತ್ತಿದೆ, ಎಂದು ಮಕ್ಕಳ ಹಕ್ಕುಗಳ ರಾಷ್ಟ್ರೀಯ ರಕ್ಷಣಾ ಆಯೋಗ ಹೇಳಿದೆ.

೪. ಇಂತಹ ನಟರನ್ನು ಹಿಂದೂಗಳು ಶ್ಲಾಘಿಸುತ್ತಾರೆ !

ನಟ ರಣಬೀರ್‌ ಕಪೂರ್‌ ಇವರು ಕೇಕ್‌ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಿ ‘ಜೈ ಮಾತಾ ದಿ’ ಎಂದು ಕೂಗಿದ್ದಾರೆ. ಈ ಬಗ್ಗೆ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

೫. ನುಸುಳುಕೋರರಿಗೆ ಸಹಾಯ ಮಾಡುವವರಿಗೆ ಮರಣದಂಡನೆ ವಿಧಿಸಬೇಕು !

ಬಾಂಗ್ಲಾದೇಶಿ ನುಸುಳುಕೋರರು ಮಹಾರಾಷ್ಟ್ರದ ಪುಣೆಯಲ್ಲಿ ೬೦೪ ನಕಲಿ ಪಾಸ್‌ಪೋರ್ಟ್‌ಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ.