ಹಲಾಲ್‌ ಪ್ರಮಾಣಪತ್ರದ ಬಗ್ಗೆ ವಿಚಾರಣೆ ನಡೆಸಿ ಕಾರ್ಯಾಚರಣೆ ಮಾಡುವೆವು ! – ಶ್ರೀ. ವಿಷ್ಣುದೇವ ಸಾಯ

  • ಛತ್ತಿಸಗಡದ ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಇವರಿಂದ ಹಿಂದುತ್ವನಿಷ್ಠರಿಗೆ ಆಶ್ವಾಸನೆ !

  • ಛತ್ತೀಸಗಡದಲ್ಲೂ ಹಲಾಲ್‌ ಉತ್ಪಾದನೆಗಳ ನಿಷೇಧಕ್ಕಾಗಿ ತತ್ಪರತೆಯಿಂದ ಪ್ರಯತ್ನಿಸುವುದಾಗಿ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾರಿಂದ ಹಿಂದುತ್ವನಿಷ್ಠರಿಗೆ ಆಶ್ವಾಸನೆ

ಛತ್ತೀಸಗಡದ ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ (೧) ಇವರನ್ನು ಭೇಟಿ ಮಾಡಿ ಮನವಿ ನೀಡುತ್ತಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು

ರಾಯಪುರ – ಆಹಾರ ಪದಾರ್ಥ ಮತ್ತು ಉತ್ಪಾದನೆಗಳಿಗೆ ಪ್ರಮಾಣಪತ್ರ ನೀಡುವ ಅಧಿಕಾರ ಕೇವಲ ಸರಕಾರಕ್ಕೆ ಇದೆ. ಖಾಸಗಿ ಸಂಸ್ಥೆಗಳಿಗಲ್ಲ, ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇವರು ಇತ್ತೀಚಿಗೆ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗಲೂ ಕೆಲವು ಖಾಸಗಿ ಮುಸಲ್ಮಾನ ಸಂಸ್ಥೆಗಳು ಕಾನೂನುಬಾಹಿರವಾಗಿ ಹಲಾಲ್‌ ಪ್ರಮಾಣಪತ್ರ ನೀಡಿ ಬೃಹತ್‌ ಪ್ರಮಾಣದಲ್ಲಿ ವ್ಯಾಪಾರಿಗಳನ್ನು ಲೂಟಿ ಮಾಡುತ್ತಿದ್ದಾರೆ. ಈ ಕಾನೂನುಬಾಹಿರ ಹಲಾಲ್‌ ಪ್ರಮಾಣಪತ್ರ ಮತ್ತು ಹಲಾಲ್‌ ಉತ್ಪಾದನೆಗಳನ್ನು ಉತ್ತರಪ್ರದೇಶ ಸರಕಾರ ನಿಷೇಧಿಸಿದೆ. ಹಾಗೆ ಛತ್ತೀಸಗಡ ರಾಜ್ಯದಲ್ಲಿಯೂ ನಿಷೇಧ ಹೇರಬೇಕೆಂದು ಹಿಂದುತ್ವನಿಷ್ಠ ಸಂಘಟನೆಗಳು ಛತ್ತೀಸಗಡದ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾ ಮತ್ತು ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಇವರನ್ನು ಪ್ರತ್ಯಕ್ಷ ಭೇಟಿಯಾಗಿ ಮನವಿ ನೀಡಿದವು. ಮುಖ್ಯಮಂತ್ರಿ ವಿಷ್ಣುದೇವ ಸಾಯ ಇವರು, ‘ವಿಚಾರಣೆ ನಡೆಸಿ ಕಾರ್ಯಾಚರಣೆ ಮಾಡಲಾಗುವುದು’, ಎಂದು ಆಶ್ವಾಸನೆ ನೀಡಿದರು. ಈ ವೇಳೆ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾ ಇವರು, ‘ಈ ವಿಷಯ ಗಂಭೀರವಾಗಿದೆ, ಈ ಕೃತ್ಯಗಳ ಮೇಲೆ ಇಂದೇ ನಿಷೇಧ ಹೇರಬೇಕೆಂದು ಅನಿಸುತ್ತದೆ; ಬರುವ ವಾರಗಳಲ್ಲಿ ಹಲಾಲ್‌ ಉತ್ಪಾದನೆಗಳ ಮೇಲೆ ನಿಷೇಧ ತರಲು ಪ್ರಯತ್ನಿಸುವೆವು. ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಸರಕಾರ ಇದರ ಬಗ್ಗೆ ಗಂಭೀರವಾಗಿ ಕ್ರಮಕೈಗೊಳ್ಳುವುದು’ ಎಂದು ಪ್ರತಿನಿಧಿಗಳ ನಿಯೋಗಕ್ಕೆ ಆಶ್ವಾಸನೆ ನೀಡಿದರು.

ಈ ನಿಯೋಗದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಡ ಸಂಘಟಕ ಶ್ರೀ. ಸುನಿಲ ಘನವಟ, ಭಜರಂಗ ದಳದ ಶ್ರೀ. ಅಂಕಿತ ದ್ವಿವೇದಿ, ಮಿಷನ್‌ ಸನಾತನದ ಶ್ರೀ. ಮದನ ಮೋಹನ ಉಪಾಧ್ಯಾಯ, ಶ್ರೀ. ನೀಲಕಂಠ ಮಹಾದೇವ ಸಂಸ್ಥಾನದ ಪಂಡಿತ ನೀಲಕಂಠ ತ್ರಿಪಾಠಿ, ಕಿನ್ನರ್‌ ಅಖಾಡಾದ ಸಾಧ್ವಿ ಸೌಮ್ಯ, ಛತ್ತೀಸಗಡದÀ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮಂಗೇಶ ಖಂಗನ ಮತ್ತು ಶ್ರೀ. ಹೇಮಂತ ಕಾನಸಕರ ಇವರು ಸಹಭಾಗಿ ಆಗಿದ್ದರು. ಈ ಸಮಯದಲ್ಲಿ ಹಲಾಲ್‌ ಪ್ರಮಾಣಪತ್ರದ ಕಾನೂನುಬಾಹಿರ ಕೃತ್ಯಗಳ ವಿಷಯವಾಗಿ ದಾಖಲೆ ಮತ್ತು ಸಾಕ್ಷಿಗಳನ್ನು ಒದಗಿಸಲಾಯಿತು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಹಲಾಲ್‌ ಜಿಹಾದ್‌ ಕುರಿತು ಒಂದು ಭಯಾನಕ ವಾಸ್ತವದ ಕಿರುಚಿತ್ರವನ್ನು ತೋರಿಸಲಾಯಿತು. ಈ ವೇಳೆ ಇಬ್ಬರಿಗೂ ಹಲಾಲ್‌ ಜಿಹಾದ್‌ ಪುಸ್ತಕ ಉಡುಗೊರೆಯಾಗಿ ನೀಡಲಾಯಿತು.

ಹಾಲು, ಸಕ್ಕರೆ, ಬೇಕರಿ ಉತ್ಪಾದನೆಗಳು, ಕುರುಕಲು ತಿಂಡಿಗಳು, ರೆಡಿ ಟು ಈಟ್, ಅಡಿಗೆ ಎಣ್ಣೆ, ಔಷಧಿ, ವೈದ್ಯಕೀಯ ಉಪಕರಣಗಳು ಮತ್ತು ಸೌಂದರ್ಯವರ್ಧಕಗಳು ಮತ್ತು ಇತರೆ ಉತ್ಪಾದನೆಗಳ ಕವರ್‌ ಮೇಲೆ ಹಲಾಲ್‌ ಸರ್ಟಿಫೈಡ್‌ ಮುದ್ರೆ ಒತ್ತುವ ಕಾನೂನುರೀತ್ಯಾ ವ್ಯವಸ್ಥೆ ಇಲ್ಲ ಹಾಗೂ ಔಷಧ ಮತ್ತು ಸೌಂದರ್ಯ ಪ್ರಸಾದನ ಕಾನೂನು, ೧೯೪೦ ಮತ್ತು ಸಂಬಂಧಿತ ನಿಯಮಗಳಲ್ಲಿ ಹಲಾಲ್‌ ಪ್ರಮಾಣಪತ್ರಕ್ಕಾಗಿ ಯಾವುದೇ ವ್ಯವಸ್ಥೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಔಷಧಿಗಳು, ವೈದ್ಯಕೀಯ ಉಪಕರಣಗಳು ಅಥವಾ ಕಾಸ್ಮೆಟಿಕ್‌ ಕವರಗಳ ಮೇಲೆ ಹಲಾಲ್‌ ಪ್ರಮಾಣಪತ್ರಕ್ಕೆ ಸಂಬಂಧಿತ ಯಾವುದೇ ತಥ್ಯ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಮೂದಿಸಿದ್ದಲ್ಲಿ ಅದು ಒಂದು ದಂಡನೀಯ ಅಪರಾಧವಾಗಿದೆ. ಭಾರತೀಯ ಆಹಾರ ಭದ್ರತಾ ಮತ್ತು ಮಾನಕ ಪ್ರಾಧಿಕರಣ (ಈಶ್ಶ್ೀ) ಇವರಿಗೆ ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿರ್ಧರಿಸುವ ಮತ್ತು ಪ್ರಮಾಣಪತ್ರ ನೀಡುವ ಅಧಿಕಾರ ನೀಡಲಾಗಿದೆ. ಹಲಾಲ್‌ ಪ್ರಮಾಣಪತ್ರವು ಈ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಸಂದೇಹವನ್ನು ಮೂಡಿಸಿ ಸರಕಾರಿ ನಿಯಮಗಳನ್ನು ಉಲ್ಲಂಘಿಸುತ್ತಿದೆ, ಎಂದು ಶ್ರೀ. ಸುನೀಲ ಘನವಟ ಇವರು ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾ ಮತ್ತು ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಇವರಿಗೆ ಮಾಹಿತಿ ನೀಡಿದರು.