ಭಟ್ಕಳದಲ್ಲಿ ಪೊಲೀಸರ ಮೋಗಲಾಯಿ ಆಡಳಿತ!
ಹಿಂದುತ್ವನಿಷ್ಠರು ಪ್ರತಿಭಟಿಸಿದ ನಂತರ ಮುಸಲ್ಮಾನನ ಬಂಧನ

ಭಟ್ಕಳ – ಒಂದು ವಾಣಿಜ್ಯ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯನ್ನು ಅದೇ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದ ಮುಸಲ್ಮಾನ ಮಾರಾಟಗಾರನೊಬ್ಬ (‘ಸೇಲ್ಸ್ಮ್ಯಾನ್’) ಅಪಹರಿಸಲು ಪ್ರಯತ್ನಿಸಿದನು. ಆ ಸಮಯದಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರ ಜಾಗರೂಕತೆಯಿಂದ ಈ ಸಂಚು ವಿಫಲವಾಯಿತು. ಈ ಪ್ರಕರಣದಲ್ಲಿ ಪೊಲೀಸರು ಮುಸಲ್ಮಾನನ ಮೇಲೆ ಕ್ರಮ ಕೈಗೊಳ್ಳುವ ಬದಲು ಹಿಂದುತ್ವನಿಷ್ಠ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದರು. ನಂತರ ಹಿಂದುತ್ವನಿಷ್ಠರು ಒತ್ತಡ ಹೇರಿದ ನಂತರ ಪೊಲೀಸರು ಮುಸಲ್ಮಾನನನ್ನು ಬಂಧಿಸಿದರು.
1. ನಗರದ ಒಂದು ವಾಣಿಜ್ಯ ಸಂಕೀರ್ಣದಲ್ಲಿ ಮಾರುಕೇರಿ ಭಾಗದ ಹಿಂದೂ ಯುವತಿಯೊಬ್ಬಳು ಕೆಲಸ ಮಾಡುತ್ತಿದ್ದಳು. ಅದೇ ಸಂಕೀರ್ಣದಲ್ಲಿ ಕಾರ್ಗದ್ದೆಯ ಶಾಹಿದ್ ಖಾನ್ ಎಂಬಾತ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದನು.
2. ಜೂನ್ 17 ರಂದು ‘ನನಗೆ ನಿನ್ನೊಂದಿಗೆ ತುರ್ತಾಗಿ ಮಾತನಾಡಬೇಕು, ನಡಿ ಹೋಗೋಣ’ ಎಂದು ಹೇಳಿ, ಖಾನ್ ಯುವತಿಯನ್ನು ಬಲವಂತವಾಗಿ ಕಾರ್ನಲ್ಲಿ ಕೂರಿಸಿಕೊಂಡು ಸಾಗರ ನಗರದ ದಿಕ್ಕಿಗೆ ವೇಗವಾಗಿ ಚಲಿಸಿದನು.
3. ಸಾಗರ ರಸ್ತೆಯ ನಿರ್ಜನ ಪ್ರದೇಶದ ಕಡೆಗೆ ಕಾರ್ ಅನುಮಾನಾಸ್ಪದವಾಗಿ ಹೋಗುತ್ತಿರುವುದನ್ನು ಕಂಡು ಹಿಂದೂ ಸಂಘಟನೆಯ ಕಾರ್ಯಕರ್ತರು ತಕ್ಷಣವೇ ವಾಹನವನ್ನು ತಡೆದರು. ನಂತರ ಅವರು ಯುವತಿಯನ್ನು ರಕ್ಷಿಸಿ ಶಾಹಿದ್ ಖಾನ್ನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು.
4. ಪೊಲೀಸರು ಆರೋಪಿ ಶಾಹಿದ್ ಖಾನ್ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಬದಲು ಯುವತಿಯನ್ನು ರಕ್ಷಿಸಿದ 2 ಹಿಂದೂ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದರು. ಪೊಲೀಸರ ಈ ಕೃತ್ಯದಿಂದಾಗಿ ಪ್ರದೇಶದಲ್ಲಿ ಉದ್ವಿಗ್ನತೆ ನಿರ್ಮಾಣವಾಯಿತು.
5. ಪೊಲೀಸರ ಪಕ್ಷಪಾತಿ ಧೋರಣೆಯನ್ನು ಖಂಡಿಸುತ್ತಾ, ಭಾಜಪ ಮತ್ತು ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೂನ್ 17 ರ ರಾತ್ರಿ ಭಟ್ಕಳ ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಧರಣಿ ಸತ್ಯಾಗ್ರಹ ನಡೆಸಿದರು.
6. ಆಂದೋಲನದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಸಂತ್ರಸ್ತ ಹಿಂದೂ ಯುವತಿಯೇ ಸ್ವತಃ ಪೊಲೀಸ್ ಠಾಣೆಗೆ ಬಂದು ಶಾಹಿದ್ ಖಾನ್ ವಿರುದ್ಧ ಲಿಖಿತ ದೂರು ನೀಡಿದಳು. ‘ನನ್ನ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ನನ್ನನ್ನು ಕಾರ್ನಲ್ಲಿ ಕೂರಿಸಲಾಗಿತ್ತು’, ಎಂದು ಅವಳು ದೂರಿನಲ್ಲಿ ನಮೂದಿಸಿದಳು.
7. ಯುವತಿಯ ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ಶಾಹಿದ್ ಖಾನ್ನನ್ನು ಬಂಧಿಸಿದರು.
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಢಾಕಾದಲ್ಲಿ (ಬಾಂಗ್ಲಾದೇಶ) ಭಾರತೀಯ ರಾಯಭಾರ ಕಚೇರಿಯ ಮೇಲೆ ‘ಜಮಾತ್-ಎ-ಇಸ್ಲಾಮಿ’ಯಿಂದ ಮೆರವಣಿಗೆ ನಡೆಸಿ ದಾಳಿ ಮಾಡಲು ಯತ್ನ
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!