ಫಲಕ ಪ್ರಸಿದ್ಧಿಗಾಗಿ

೧. ಕಾಂಗ್ರೆಸ್‌ ನ ಆಡಳಿತದಲ್ಲಿ ಹಿಂದೂಗಳಿಗೆ ಹೆಬ್ಬೆಟ್ಟು !

ರಾಜಸ್ಥಾನದ ಕಾಂಗ್ರೆಸ್‌ ಸರಕಾರದ ಮುಖ್ಯಮಂತ್ರಿ ಅಶೋಕ ಗೆಹಲೊತ್‌ ಇವರು ತಾತ್ಕಾಲಿಕ ಸ್ವರೂಪದಲ್ಲಿ ಕೆಲಸ ಮಾಡುತ್ತಿರುವ ೧೦ ಸಾವಿರದ ೫೨೮ ಸರಕಾರಿ ಸಿಬ್ಬಂದಿಗಳನ್ನು ಕಾಯಂ ಮಾಡುವುದಾಗಿ ನಿರ್ಧರಿಸಿದ್ದಾರೆ. ಇದರಲ್ಲಿ ‘ರಾಜಸ್ಥಾನ ಮದರಸಾ ಬೋರ್ಡ್‌’ನಲ್ಲಿ ಕಾರ್ಯ ನಿರ್ವಹಿಸುವ ೫ ಸಾವಿರದ ೫೬೨ ಜನರ ಸಮಾವೇಶವಿದೆ.

೨. ಭಾರತದಲ್ಲಿ ಮುಸಲ್ಮಾನರಲ್ಲ ಹಿಂದೂಗಳು ಅಸುರಕ್ಷಿತರು !

ಅಕ್ಟೋಬರ್‌ ೮ ರಂದು ಝಾರಖಂಡದ ರಾಜಧಾನಿ ರಾಂಚಿಯಿಂದ ಶೌರ್ಯ ಜಾಗರಣ ಯಾತ್ರೆಯಿಂದ ಮರಳುತ್ತಿದ್ದ ಹಿಂದುತ್ವನಿಷ್ಠ ಕಾರ್ಯಕರ್ತರ ಮೇಲೆ ಹಜಾರಿಬಾಗದಲ್ಲಿ ಮಸೀದಿಯೊಂದರ ಹತ್ತಿರ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ಮಾಡಿದ ಘಟನೆ ನಡೆಯಿತು.

೩. ಭಾರತದಲ್ಲಿನ ಪಾಕಪ್ರೇಮಿಗಳನ್ನು ಪಾಕಿಸ್ತಾನಕ್ಕೆ ಅಟ್ಟಿ !

ಭಾಗ್ಯನಗರ (ತೆಲಂಗಾಣ)ದ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಅಕ್ಟೋಬರ್‌ ೧೦ ರಂದು ಪಾಕಿಸ್ತಾನದ ವಿರುದ್ಧ ಶ್ರೀಲಂಕಾ ನಡುವಿನ ವಿಶ್ವ ಕಪ್‌ ಕ್ರಿಕೆಟ್‌ ಪಂದ್ಯ ನಡೆಯಿತು. ಈ ಸಮಯದಲ್ಲಿ ಪ್ರೇಕ್ಷಕರಲ್ಲಿದ್ದ ಸಾವಿರಾರು ಜನರು ಪಾಕಿಸ್ತಾನದ ಗೆಲುವಿಗಾಗಿ ಘೋಷಣೆ ನೀಡಿದರು.

೪. ಮುಸಲ್ಮಾನರು ಬಹುಸಂಖ್ಯೆಯಲ್ಲಿರುವ ಪ್ರದೇಶದಲ್ಲಿನ ಹಿಂದೂಗಳ ಸ್ಥಿತಿಯನ್ನು ತಿಳಿಯಿರಿ !

ಭರೂಚ(ಗುಜರಾತ)ದಲ್ಲಿನ ಮುಸಲ್ಮಾನರು ಬಹುಸಂಖ್ಯೆಯಲ್ಲಿರುವ ಇಖರ ಗ್ರಾಮದ ಹಿಂದೂಗಳಿಗೆ ಅಲ್ಲಿಯ ಮುಸ್ಲಿಮರು ‘ನವರಾತ್ರಿಯ ಸಮಯದಲ್ಲಿ ಗರಬಾ ನೃತ್ಯದ ಆಯೋಜನೆ ಮಾಡಿದಲ್ಲಿ ಅದನ್ನು ಒಡೆದು ನಷ್ಟಗೊಳಿಸುವುದಾಗಿ’ ಬೆದರಿಕೆ ಹಾಕಿದ್ದಾರೆ.

೫. ಇಂತಹ ಕಠೋರ ಕಾನೂನುಗಳು ಭಾರತದಲ್ಲಿಯೂ ಬೇಕು !

ರಜಾ ಕಾದರಿ ಎಂಬಾತ ಕಾಂಗ್ರೆಸ್‌ ನ ಓರ್ವ ಮುಸಲ್ಮಾನ ಮುಖಂಡರು ಜನವರಿ ೨೦೨೩ ರಲ್ಲಿ ಅರೇಬಿಯಾದ ಕಾಬಾ ಮಸೀದಿಯ ಮುಂದೆ ರಾಹುಲ್‌ ಗಾಂಧಿಯವರ ‘ಭಾರತ ಜೋಡೊ ಯಾತ್ರೆ’ ಯ ಪ್ರಚಾರ ಮಾಡಿದ್ದರಿಂದ ಅವರನ್ನು ಬಂಧಿಸಿ ೮ ತಿಂಗಳು ಸೆರೆಮನೆಯಲ್ಲಿ ಇಡುವುದರೊಂದಿಗೆ ಚಾಟಿಯಿಂದ ೯೯ ಏಟುಗಳನ್ನು ಹೊಡೆಯುವ ಶಿಕ್ಷೆಯನ್ನೂ ವಿಧಿಸಲಾಯಿತು.

೬. ಕ್ರೂರ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ ಕಾಂಗ್ರೆಸ್ ನಿಷೇಧಿಸಿರಿ !

ಲಡಾಖ್‌ದಲ್ಲಿನ ಕಾಂಗ್ರೆಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಅಸಗರ ಅಲೀ ಕರಬಲಾಯಿ ಇವರು, ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್‌ನಿಂದ ಇಸ್ರೈಲ್‌ ಮೇಲಾದ ದಾಳಿಯನ್ನು ಬೆಂಬಲಿಸಲು ‘ನಮಗೆ ಅಭಿಮಾನ ಎನಿಸುತ್ತಿದ್ದು, ನಾವು ಹಮಾಸ್‌ನ ಸೈನಿಕರೊಂದಿಗೆ ಇದ್ದೇವೆ, ಎಂದು ಹೇಳಿಕೆ ನೀಡಿದ್ದಾರೆ.

೭. ಹಿಂದೂ ರಾಷ್ಟ್ರದ ಅನಿವಾರ್ಯತೆ ತಿಳಿಯಿರಿ !

ಜಮ್ಮು ಕಾಶ್ಮೀರದ ಪೂಂಛದಲ್ಲಿ ಮತಾಂಧ ಮುಸಲ್ಮಾನರು ‘ಎಲ್ಲಾ ಹಿಂದೂಗಳು ಮತ್ತು ಸರದಾರರು (ಸಿಕ್ಖ್‌ರು) ಈ ಪ್ರದೇಶ ಬಿಟ್ಟು ಹೋಗದಿದ್ದರೆ ಬೆಲೆ ತೆರಬೇಕಾಗುವುದು’ ಎಂದು ಬರೆದ ಬಿತ್ತಿಪತ್ರಗಳನ್ನು ಹಿಂದೂಗಳ ಮನೆಗಳಿಗೆ ಅಂಟಿಸಿ ಬೆದರಿಕೆಯೊಡ್ಡಿದ್ದಾರೆ.