ಹಿಂದುತ್ವನಿಷ್ಠರ ರಕ್ಷಣೆ ಯಾವಾಗ ಆಗಲಿದೆ ?
ಮಧ್ಯಪ್ರದೇಶದ ಶಿವಸೇನೆಯ ಮಾಜಿ ರಾಜ್ಯಮುಖ್ಯಸ್ಥ ರಮೇಶ ಸಾಹು ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಗೋಲಿಬಾರ್ನಲ್ಲಿ ಅವರ ಪತ್ನಿ ಮತ್ತು ಮಗಳು ಗಾಯಗೊಂಡರು. ಈ ಹತ್ಯೆಗೆ ಹಳೆಯ ವಿವಾದ ಕಾರಣ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಶಿವಸೇನೆಯ ಮಾಜಿ ರಾಜ್ಯಮುಖ್ಯಸ್ಥ ರಮೇಶ ಸಾಹು ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಗೋಲಿಬಾರ್ನಲ್ಲಿ ಅವರ ಪತ್ನಿ ಮತ್ತು ಮಗಳು ಗಾಯಗೊಂಡರು. ಈ ಹತ್ಯೆಗೆ ಹಳೆಯ ವಿವಾದ ಕಾರಣ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿರುವುದನ್ನು ಖಂಡಿಸುತ್ತಾ ಭಾಜಪ ಹಾಗೂ ಜನಸೇನಾಗಳ ಮುಖಂಡರು ಹಾಗೂ ಅನೇಕ ಸಾವಿರಾರು ಕಾರ್ಯಕರ್ತರು ಸಪ್ಟೆಂಬರ್ ೧೦ ರಂದು ಸಂಪೂರ್ಣ ಆಂಧ್ರಪ್ರದೇಶದಲ್ಲಿ ೧೧ ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಿದರು.
ಕರ್ಪೂರದ ಉತ್ಪಾದನೆ ಹಾಗೂ ಮಾರಾಟ ಮಾಡುವ ರಾಯಗಡ ಜಿಲ್ಲೆಯ ಕುಂಭಿವಲಿಯಲ್ಲಿನ ‘ಮಂಗಲಮ್ ಆರಗ್ಯಾನಿಕ್ಸ್ ಲಿಮಿಟೆಡ್’ ಈ ಸಂಸ್ಥೆಯು ತನ್ನ ‘ಮಂಗಲಮ್ ಕರ್ಪೂರ’ದ ಉತ್ಪಾದನೆಯ ಜಾಹೀರಾತಿನಲ್ಲಿ ಪ್ರಭು ಶ್ರೀರಾಮನು ಸೆಲ್ಫೀ (ಸಂಚಾರವಾಣಿಯಲ್ಲಿ ಸ್ವಂತದ ಫೋಟೊವನ್ನು ಸ್ವತಃ ತೆಗೆಯುವುದು) ತೆಗೆದುಕೊಳ್ಳುತ್ತಿರುವಂತೆ ತೋರಿಸಿ ಪ್ರಭು ಶ್ರೀರಾಮನ ಘೋರ ಅವಹೇಳನೆಯು ಇಂದಿಗೂ ಮುಂದುವರೆದಿದೆ.
ಮಂಡ್ಯ ಜಿಲ್ಲೆಯ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ಅರ್ಚಕರಾಗಿ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ದೇವಾಲಯದ ಆವರಣದಲ್ಲೇ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ದರೋಡೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ರಾತ್ರಿ ಸುಮಾರು ೧ ಗಂಟೆಯ ಸಮಯದಲ್ಲಿ ಮೂರುಜನರು ಮಲಗಿರುವಾಗ ಸಂಭವಿಸಿದೆ.
ಯಾವುದೇ ರೀತಿಯ ಆನಂದ ನಮಗೆ ಪ್ರತ್ಯಕ್ಷವಾಗಿ ದೇವರಿಂದ ಸಿಗುತ್ತಿರುತ್ತದೆ. ಅದು ಕ್ಯಾಥೊಲಿಕ್ ಕ್ರೈಸ್ತ ಅಥವಾ ಇನ್ನಾವುದೇ ಇರುವುದಿಲ್ಲ, ಅದು ಕೇವಲ ದಿವ್ಯವಾಗಿರುತ್ತದೆ. ಉತ್ತಮವಾದ ಬೇಯಿಸಿದ ಆಹಾರ ಹಾಗೂ ದೈಹಿಕ ಸಂಬಂಧದಿಂದಾಗಿ ಸಿಗುವ ಆನಂದ ದಿವ್ಯವಾಗಿರುತ್ತದೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಹೇಳಿದ್ದಾರೆ.
ಶ್ರಾದ್ಧವಿಧಿಯ ಬಗ್ಗೆ ಭಕ್ತರಿಗೆ ಶಾಸ್ತ್ರೀಯ ಮಾಹಿತಿ ಸಿಗಬೇಕೆಂದು ಸನಾತನ ಸಂಸ್ಥೆಯ ವತಿಯಿಂದ ‘ಶ್ರಾದ್ಧವಿಧಿ’ ಈ ‘ಅಂಡ್ರೈಡ್ ಆಪ್’ಅನ್ನು ನಿರ್ಮಿಸಲಾಯಿತು. ಇದರಲ್ಲಿ ಶ್ರಾದ್ಧದ ಮಹತ್ವ, ವಿಧ, ಶ್ರಾದ್ಧದ ಸಂದರ್ಭದಲ್ಲಿನ ಸಂದೇಹ ನಿವಾರಣೆ ಇತ್ಯಾದಿ ಜ್ಞಾನವನ್ನು ನೀಡುವ ಲೇಖನ, ಭಗವಾನ ದತ್ತಾತ್ರೇಯನ ಕುರಿತಾದ ಲೇಖನಗಳು ಹಾಗೂ ದತ್ತಾತ್ರೇಯ ದೇವತೆಯ ನಾಮಜಪದ ಆಡಿಯೋ ಲಭ್ಯವಿದೆ.
ರಕ್ಷಣಾ ಸಚಿವಾಲಯದ ೭೪೪೨೬.೮೮೮ ಚದರ ಮೀಟರ್ ಭೂಮಿಯನ್ನು ಕರ್ನಾಟಕ ಸರಕಾರಕ್ಕೆ ಪರಸ್ಪರ ಮಾರಾಟ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (‘ಇ.ಡಿ.’)ಯು ಬೆಂಗಳೂರಿನ ‘ಚರ್ಚ್ ಆಫ್ ಸೌಥ ಇಂಡಿಯಾ ಟ್ರಸ್ಟ್ ಅಸೋಸಿಯೇಶನ್’ನಿಂದ (‘ಸಿ.ಎಸ್.ಐ.ಟಿ.ಎ.’ ನಿಂದ) ೫೯ ಕೋಟಿ ೫೨ ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದೆ.
ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಮೇಲೆ ಶ್ರೀರಾಮಮಂದಿರದ ನಿರ್ಮಾಣಕಾರ್ಯವು ಆರಂಭವಾಗಿದೆ. ಅದಕ್ಕಾಗಿ ಭಕ್ತರು ದೇವಸ್ಥಾನದ ಟ್ರಸ್ಟ್ಗೆ ಅರ್ಪಣೆಯನ್ನು ನೀಡುತ್ತಿದ್ದಾರೆ. ಅದಕ್ಕಾಗಿ ಟ್ರಸ್ಟ್ ತೆರೆದಿದ್ದ ಬ್ಯಾಂಕ್ ಖಾತೆಯಲ್ಲಿ ಈ ಮೊತ್ತವನ್ನು ಜಮೆ ಮಾಡಲಾಗುತ್ತಿದೆ. ಈ ಬ್ಯಾಂಕಿನ ಖಾತೆಯಿಂದ ೬ ಲಕ್ಷ ರೂಪಾಯಿಗಳ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಷೆ ಇವರು ಇಡೀ ಶ್ರೀಲಂಕಾದಲ್ಲಿ ಗೋಹತ್ಯೆಯ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ರಾಜಪಕ್ಷೆ ಇವರು ತಮ್ಮ ಆಢಳಿತಾರೂಢ ‘ಶ್ರೀಲಂಕಾ ಪೊಡುಜನಾ ಪೆರುಮನಾ’ (ಎಸ್.ಎಲ್.ಪಿ.ಪಿ.) ಪಕ್ಷದ ಸಂಸದೀಯ ಸಭೆಯಲ್ಲಿ ಈ ಘೋಷಣೆ ಮಾಡಿದರು.
ಶ್ರೀಲಂಕಾ ಸಾಲವನ್ನು ತೀರಿಸಲಾಗದೇ ತನ್ನ ‘ಹಂಬನಟೊಟಾ ಬಂದರ್’ಅನ್ನು ೯೯ ವರ್ಷಗಳ ಕಾಲ ಬಾಡಿಗೆಗೆ ನೀಡಬೇಕಾಯಿತು. ಚೀನಾದೊಂದಿಗಿನ ಈ ಒಪ್ಪಂದ ಮಾಡಿಕೊಂಡಿರುವುದು ನಮ್ಮ ದೊಡ್ಡ ತಪ್ಪಾಗಿತ್ತು ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಜಯನಾಥ ಕೋಲಂಬಗೆ ಇವರು ಒಂದು ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.