ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ

ನಗರಸಭೆ ನೇಮಕಾತಿ ಹಗರಣ ಪ್ರಕರಣ

(ಇಡಿ ಎಂದರೆ ಜಾರಿ ನಿರ್ದೇಶನಾಲಯ)

ಕೊಲಕಾತಾ (ಬಂಗಾಳ) – ನಗರಸಭೆ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಜೂನ್ ೧೪ ರಂದು ಬೆಳಿಗ್ಗೆ ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಕಾಮರಹಾಟಿಯ ಶಾಸಕ ಮದನ್ ಮಿತ್ರಾ ಅವರ ಭವಾನಿಪುರ ಮತ್ತು ಕಾಳಿಘಾಟ್‌ನಲ್ಲಿರುವ ನಿವಾಸಗಳ ಮೇಲೆ ದಾಳಿ ನಡೆಸಿದೆ. ಈ ಸಮಯದಲ್ಲಿ ಕೇಂದ್ರ ಭದ್ರತಾ ಪಡೆಗಳ ಸೈನಿಕರನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಲಾಗಿತ್ತು. ತನಿಖಾ ಸಂಸ್ಥೆಗಳು ಮಿತ್ರಾ ಅವರ ನಿವಾಸದಲ್ಲಿ ಕೆಲವು ದಾಖಲೆಗಳನ್ನು ಪರಿಶೀಲಿಸುತ್ತಿವೆ ಎಂದು ಹೇಳಲಾಗುತ್ತಿದೆ.

ಕಾಮರಹಾಟಿ ನಗರಸಭೆಯ ಅಧ್ಯಕ್ಷ ಗೋಪಾಲ್ ಸಾಹಾ ಅವರೊಂದಿಗೆ ನಡೆದಿದೆ ತಥಾಕಥಿತ ಅನುಚಿತ ವರ್ತನೆಯನ್ನು ವಿರೋಧಿಸಿ, ಮದನ್ ಮಿತ್ರಾ ಅವರು ಜೂನ್ ೧೨ ರಂದು ರಾತ್ರಿ ಪಕ್ಷದ ಎಲ್ಲಾ ನಗರಸೇವಕರಿಗೆ ಸಾಮೂಹಿಕ ರಾಜೀನಾಮೆ ನೀಡುವಂತೆ ಆದೇಶಿಸಿದ್ದರು. ಈ ಘಟನೆ ನಡೆದ ಮರುದಿನವೇ ಇಡಿ ಈ ಕ್ರಮ ಕೈಗೊಂಡಿದೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ ಎಂದರೆ ಹಗರಣಗಳು ಎಂದೇ ಸಮೀಕರಣವಾಗಿದೆ. ಇಂತಹ ಪಕ್ಷ ಬಂಗಾಳದಲ್ಲಿ ೧೫ ವರ್ಷಗಳ ಕಾಲ ಅಧಿಕಾರದಲ್ಲಿರುವುದು ವ್ಯವಸ್ಥೆಯ ವೈಫಲ್ಯವಲ್ಲವೇ?