
ದೇಹೂಗಾಂವ್ (ಪುಣೆ ಜಿಲ್ಲೆ) – ಆಷಾಢಿ ವಾರಿ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಶ್ರೀಕ್ಷೇತ್ರ ದೇಹೂನ ಪವಿತ್ರ ಇಂದ್ರಾಯಣಿ ನದಿಯಲ್ಲಿ ನೂರಾರು ಮೀನುಗಳು ಸತ್ತ ಸ್ಥಿತಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ. ನದಿಯ ಕಲುಷಿತ ನೀರಿನಿಂದಾಗಿ ಭಾರಿ ಪ್ರಮಾಣದಲ್ಲಿ ಮೀನುಗಳು ಸಾವನ್ನಪ್ಪಿದ್ದು, ಈ ಸತ್ತ ಮೀನುಗಳು ನದಿಯ ತೀರಕ್ಕೆ ತೇಲಿ ಬಂದಿರುವುದರಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡಿದೆ. ವಾರಿಗಾಗಿ ದೇಹೂಗೆ ಲಕ್ಷಾಂತರ ವಾರಕರಿಗಳು (ಯಾತ್ರಿಕರು) ಬರುತ್ತಿದ್ದು, ಅವರು ಇದೇ ನದಿಯಲ್ಲಿ ಸ್ನಾನ ಮತ್ತು ಆಚಮನ ಮಾಡುತ್ತಾರೆ. ಇಂತಹ ಪವಿತ್ರ ಸಮಯದಲ್ಲಿ ನದಿಗೆ ಬಂದೊದಗಿದ ಈ ದುಸ್ಥಿತಿಯು ಭಕ್ತರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.
ಈ ಕಾರಣದಿಂದಾಗಿ, ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರಿಕರು ತಕ್ಷಣವೇ ನದಿತೀರಕ್ಕೆ ಇಳಿದು ಸತ್ತ ಮೀನುಗಳನ್ನು ಹೊರತೆಗೆದು ಪರಿಸರವನ್ನು ಸ್ವಚ್ಛಗೊಳಿಸಿದರು. (ಈ ಕೆಲಸವನ್ನು ‘ಆರ್ಟ್ ಆಫ್ ಲಿವಿಂಗ್’ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರಿಕರು ಮಾಡಬೇಕಾಗಿದ್ದರೆ, ಆಡಳಿತ ಅವಶ್ಯಕತೆ ಏತಕ್ಕಾಗಿ ಬೇಕು ? – ಸಂಪಾದಕರು)
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!
ಗಡಿ ಜಿಲ್ಲೆಗಳ ಜನಸಂಖ್ಯಾಶಾಸ್ತ್ರದ (Demographic) ಬದಲಾವಣೆಗಳ ಕುರಿತು ಅಧ್ಯಯನ ನಡೆಸಿ!