ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ

ದೇಹೂಗಾಂವ್ (ಪುಣೆ ಜಿಲ್ಲೆ) – ಆಷಾಢಿ ವಾರಿ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಶ್ರೀಕ್ಷೇತ್ರ ದೇಹೂನ ಪವಿತ್ರ ಇಂದ್ರಾಯಣಿ ನದಿಯಲ್ಲಿ ನೂರಾರು ಮೀನುಗಳು ಸತ್ತ ಸ್ಥಿತಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ. ನದಿಯ ಕಲುಷಿತ ನೀರಿನಿಂದಾಗಿ ಭಾರಿ ಪ್ರಮಾಣದಲ್ಲಿ ಮೀನುಗಳು ಸಾವನ್ನಪ್ಪಿದ್ದು, ಈ ಸತ್ತ ಮೀನುಗಳು ನದಿಯ ತೀರಕ್ಕೆ ತೇಲಿ ಬಂದಿರುವುದರಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡಿದೆ. ವಾರಿಗಾಗಿ ದೇಹೂಗೆ ಲಕ್ಷಾಂತರ ವಾರಕರಿಗಳು (ಯಾತ್ರಿಕರು) ಬರುತ್ತಿದ್ದು, ಅವರು ಇದೇ ನದಿಯಲ್ಲಿ ಸ್ನಾನ ಮತ್ತು ಆಚಮನ ಮಾಡುತ್ತಾರೆ. ಇಂತಹ ಪವಿತ್ರ ಸಮಯದಲ್ಲಿ ನದಿಗೆ ಬಂದೊದಗಿದ ಈ ದುಸ್ಥಿತಿಯು ಭಕ್ತರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.

ಈ ಕಾರಣದಿಂದಾಗಿ, ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರಿಕರು ತಕ್ಷಣವೇ ನದಿತೀರಕ್ಕೆ ಇಳಿದು ಸತ್ತ ಮೀನುಗಳನ್ನು ಹೊರತೆಗೆದು ಪರಿಸರವನ್ನು ಸ್ವಚ್ಛಗೊಳಿಸಿದರು. (ಈ ಕೆಲಸವನ್ನು ‘ಆರ್ಟ್ ಆಫ್ ಲಿವಿಂಗ್’ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರಿಕರು ಮಾಡಬೇಕಾಗಿದ್ದರೆ, ಆಡಳಿತ ಅವಶ್ಯಕತೆ ಏತಕ್ಕಾಗಿ ಬೇಕು ? – ಸಂಪಾದಕರು)

ಸಂಪಾದಕೀಯ ನಿಲುವು

ಪವಿತ್ರ ತೀರ್ಥಕ್ಷೇತ್ರದಲ್ಲಿ ಆಷಾಢಿ ವಾರಿಯ ಹೊಸ್ತಿಲಲ್ಲೇ ನದಿಯ ಈ ರೀತಿಯ ದುಸ್ಥಿತಿಯಾಗುವುದು, ಆಡಳಿತಾತ್ಮಕ ಉದಾಸೀನತೆಯ ಲಕ್ಷಣವಾಗಿದೆ! ಈ ಮಾಲಿನ್ಯಕ್ಕೆ ಕಾರಣರಾದ ಸಂಬಂಧಪಟ್ಟವರ ವಿರುದ್ಧ ಸರಕಾರವು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು!