|
|
ಕೋಲಂಬೊ – ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಷೆ ಇವರು ಇಡೀ ಶ್ರೀಲಂಕಾದಲ್ಲಿ ಗೋಹತ್ಯೆಯ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ರಾಜಪಕ್ಷೆ ಇವರು ತಮ್ಮ ಆಢಳಿತಾರೂಢ ‘ಶ್ರೀಲಂಕಾ ಪೊಡುಜನಾ ಪೆರುಮನಾ’ (ಎಸ್.ಎಲ್.ಪಿ.ಪಿ.) ಪಕ್ಷದ ಸಂಸದೀಯ ಸಭೆಯಲ್ಲಿ ಈ ಘೋಷಣೆ ಮಾಡಿದರು. ಗೋಹತ್ಯೆಯನ್ನು ನಿಷೇಧಿಸಿದರೂ, ಗೋವಂಶದ ಮಾಂಸದ ಆಮದಿನ ಮೇಲೆ ಅದೇರೀತಿ ಗೋವಂಶದ ಮಾಂಸ ಸೇವನೆ ಮೇಲೆ ನಿಷೇಧವಿಲ್ಲ, ಎಂದೂ ಅವರು ಸ್ಪಷ್ಟಪಡಿಸಿದರು.
Sri Lanka: Parliamentary Group of ruling party approves proposal to ban cow slaughterhttps://t.co/feeTPLQes0
— OpIndia.com (@OpIndia_com) September 8, 2020
ರಾಜಪಕ್ಷೆಯವರ ಸರಕಾರ ಕೂಡಲೇ ಈ ಬಗ್ಗೆ ಒಂದು ಮಸೂದೆಯನ್ನು ತರಲಿದೆ. ಶ್ರೀಲಂಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ಬೌದ್ಧ ಧರ್ಮದವರು ವಾಸವಾಗಿದ್ದಾರೆ. ಅಲ್ಲಿ ಶೇ. ೯೦ ಕ್ಕೂ ಹೆಚ್ಚು ಜನರು ಮಾಂಸಾಹಾರವನ್ನು ಸೇವಿಸುತ್ತಾರೆ. ಹಿಂದೂ ಹಾಗೂ ಬೌದ್ಧ ಧರ್ಮದ ಸಮುದಾಯದಲ್ಲಿ ಮಾತ್ರ ಗೋಮಾಂಸ ಸೇವಿಸುವುದಿಲ್ಲ ಎಂದು ಹೇಳಾಗುತ್ತದೆ. ಕಳೆದ ಅನೇಕ ವರ್ಷಗಳಿಂದ ಬೌದ್ಧ ಧರ್ಮದವರಿಂದ ಗೋಹತ್ಯೆಯನ್ನು ನಿಷೇಧ ಹೇರುವಂತೆ ಆಗ್ರಹಿಸಲಾಗುತ್ತಿತ್ತು.

ಬಾಂಗ್ಲಾದೇಶ ಸರಕಾರವು ದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತಿದೆಯೇ? – ಸಂಪಾದಕ ಸಲಾಹ್ ಉದ್ದೀನ್ ಚೌಧರಿ
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
‘ಚಾಟ್ಜಿಪಿಟಿ’ಯಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ!
ಇಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ !
ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!