
ಗೌಹತ್ತಿ (ಆಸ್ಸಾಂ) – ಜೋಹರಾತ್ ವಾಯುಪಡೆಯ ನೆಲೆಯಲ್ಲಿ ‘ಎಎನ್-32’ ವಿಮಾನವು ಇಳಿಯುತ್ತಿದ್ದಾಗ ಅದು ಪತನಗೊಂಡು 5 ಸೈನಿಕರು ವೀರಮರಣ ಹೊಂದಿದ್ದಾರೆ ಎಂದು ಭಾರತೀಯ ವಾಯುಪಡೆಯು ಮಾಹಿತಿ ನೀಡಿದೆ. ಇದರಲ್ಲಿ ಸ್ಕ್ವಾಡ್ರನ್ ಲೀಡರ್ ಪ್ರಶಾಂತ ಸಿಂಗ, ಫ್ಲೈಟ್ ಲೆಫ್ಟಿನೆಂಟ್ ಶುಭಮ ಕುಮಾರ, ಸಾರ್ಜಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ ವಾಯು ಖೇಮಾರಾಮ ಕುಮಾವತ ಮತ್ತು ಅಗ್ನಿವೀರ ವಾಯು ದಾನಿಶ ಆಲಂ ಸೇರಿದ್ದಾರೆ. ಅಪಘಾತಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖಾ ಸಮಿತಿಗೆ ಆದೇಶಿಸಲಾಗಿದೆ.

ಇದೇ ರೀತಿಯ ಘಟನೆಯೊಂದು ಮಾರ್ಚ್ 5ರಂದು ನಡೆದಿತ್ತು. ಆಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಸುಖೋಯ್ ‘ಸೂ-30 ಎಮ್.ಕೆ.ಐ.’ ಯುದ್ಧ ವಿಮಾನವು ಪತನಗೊಂಡು ಅದರಲ್ಲಿದ್ದ ಇಬ್ಬರೂ ಪೈಲಟ್ ಗಳು ಮೃತಪಟ್ಟಿದ್ದರು.
ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯ!
ಪತಿಯು ಸುಳ್ಳು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿರುವುದರಿಂದ ಪತ್ನಿಯ ವಂಚನೆಯಾಗಿದೆ! – Telangana High Court
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
ಈಗ ಶತ್ರುಗಳ ಕ್ಷಿಪಣಿಗಳು ಗಾಳಿಯಲ್ಲೇ ನಾಶ !