ವಾಯುಪಡೆಯ ವಿಮಾನ ಪತನ: 5 ಸೈನಿಕರ ವೀರಮರಣ

ಗೌಹತ್ತಿ (ಆಸ್ಸಾಂ) – ಜೋಹರಾತ್ ವಾಯುಪಡೆಯ ನೆಲೆಯಲ್ಲಿ ‘ಎಎನ್-32’ ವಿಮಾನವು ಇಳಿಯುತ್ತಿದ್ದಾಗ ಅದು ಪತನಗೊಂಡು 5 ಸೈನಿಕರು ವೀರಮರಣ ಹೊಂದಿದ್ದಾರೆ ಎಂದು ಭಾರತೀಯ ವಾಯುಪಡೆಯು ಮಾಹಿತಿ ನೀಡಿದೆ. ಇದರಲ್ಲಿ ಸ್ಕ್ವಾಡ್ರನ್ ಲೀಡರ್ ಪ್ರಶಾಂತ ಸಿಂಗ, ಫ್ಲೈಟ್ ಲೆಫ್ಟಿನೆಂಟ್ ಶುಭಮ ಕುಮಾರ, ಸಾರ್ಜಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ ವಾಯು ಖೇಮಾರಾಮ ಕುಮಾವತ ಮತ್ತು ಅಗ್ನಿವೀರ ವಾಯು ದಾನಿಶ ಆಲಂ ಸೇರಿದ್ದಾರೆ. ಅಪಘಾತಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖಾ ಸಮಿತಿಗೆ ಆದೇಶಿಸಲಾಗಿದೆ.

ಇದೇ ರೀತಿಯ ಘಟನೆಯೊಂದು ಮಾರ್ಚ್ 5ರಂದು ನಡೆದಿತ್ತು. ಆಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಸುಖೋಯ್ ‘ಸೂ-30 ಎಮ್.ಕೆ.ಐ.’ ಯುದ್ಧ ವಿಮಾನವು ಪತನಗೊಂಡು ಅದರಲ್ಲಿದ್ದ ಇಬ್ಬರೂ ಪೈಲಟ್‌ ಗಳು ಮೃತಪಟ್ಟಿದ್ದರು.

ಸಂಪಾದಕೀಯ ನಿಲುವು

ಶಾಂತಿಕಾಲದಲ್ಲಿ ವಿಮಾನಗಳು ಪತನಗೊಳ್ಳುವ ಭಾರತವು ವಿಶ್ವದ ಏಕೈಕ ರಾಷ್ಟ್ರವಾಗಿದೆ !