‘ಭಾರತಕ್ಕೇ ಆದ್ಯತೆ’ ಈ ನೀತಿಯಿಂದ ಹಿಂದೆ ಸರಿಯದಿರಲು ಶ್ರೀಲಂಕಾ ನಿರ್ಧಾರ
ಭಾರತವು ಅನೇಕ ದೇಶಗಳಲ್ಲಿರುವ ಚೀನಾವಿರೋಧದ ಅಸಮಾಧಾನದ ಲಾಭವನ್ನು ಪಡೆದು ಆ ದೇಶಗಳನ್ನು ಸಂಘಟಿಸಿ ಚೀನಾಗೆ ಪಾಠ ಕಲಿಸಬೇಕು !
ಕೋಲಂಬೊ – ಶ್ರೀಲಂಕಾ ಸಾಲವನ್ನು ತೀರಿಸಲಾಗದೇ ತನ್ನ ‘ಹಂಬನಟೊಟಾ ಬಂದರ್’ಅನ್ನು ೯೯ ವರ್ಷಗಳ ಕಾಲ ಬಾಡಿಗೆಗೆ ನೀಡಬೇಕಾಯಿತು. ಚೀನಾದೊಂದಿಗಿನ ಈ ಒಪ್ಪಂದ ಮಾಡಿಕೊಂಡಿರುವುದು ನಮ್ಮ ದೊಡ್ಡ ತಪ್ಪಾಗಿತ್ತು ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಜಯನಾಥ ಕೋಲಂಬಗೆ ಇವರು ಒಂದು ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇನ್ನುಮುಂದೆ ಶ್ರೀಲಂಕಾವು ‘ಭಾರತಕ್ಕೇ ಆದ್ಯತೆ’ (ಇಂಡಿಯಾ ಫಸ್ಟ್) ಈ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ನಿರ್ಧರಿಸಿದೆ ಎಂದು ಹೇಳಿದರು.
ಕೊಲಂಬಗೆಯವರು ತಮ್ಮ ಮಾತನ್ನು ಮುಂದುವರಿಸುತ್ತಾ, “ಶ್ರೀಲಂಕಾ ತನ್ನ ಅಲಿಪ್ತವಾದಿ ನಿಲುವನ್ನು ಬಿಡುವುದಿಲ್ಲ. ಅದರೊಂದಿಗೆ ‘ಇಂಡಿಯಾ ಫಸ್ಟ್’ ಈ ನಿಲುವನ್ನೂ ಬಿಡುವುದಿಲ್ಲ. ರಣನೀತಿ ಭದ್ರತೆಯ ಸಂದರ್ಭದಲ್ಲಿ ‘ಇಂಡಿಯಾ ಫಸ್ಟ್’ನ ನೀತಿಯನ್ನು ಅವಲಂಬಿಸುವಂತೆ ರಾಷ್ಟ್ರಪತಿ ಗೊಟಬಯಾ ರಾಜಪಕ್ಷೆಯವರು ಆದೇಶವನ್ನು ನೀಡಿದ್ದಾರೆ. ನಮಗೆ ಭಾರತದಿಂದ ಯಾವುದೇ ರೀತಿಯ ಅಪಾಯವಿಲ್ಲ. ತದ್ವಿರುದ್ದ ಭಾರತದಿಂದಲೇ ನಮಗೆ ಹೆಚ್ಚು ಲಾಭವನ್ನು ಪಡೆಯಲಿಕ್ಕಿದೆ” ಎಂದು ಹೇಳಿದರು.
Will have ‘India first’ policy, China port deal a mistake: Sri Lanka
Sri Lanka wants to pursue a “neutral” foreign policy but will retain an “India First” approach in strategic and security matters, foreign secretary Jayanath Colombage has said.
Read–https://t.co/XYvRmr5y9f pic.twitter.com/mCnuauCYTl
— The Times Of India (@timesofindia) August 26, 2020