ವಿಶ್ವ ಆರೋಗ್ಯ ಸಂಘಟನೆಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ಇವರ ನೇಮಕ

ಕೇಂದ್ರೀಯ ಆರೋಗ್ಯಮಂತ್ರಿ ಡಾ. ಹರ್ಷವರ್ಧನ ಇವರನ್ನು ವಿಶ್ವ ಆರೋಗ್ಯ ಸಂಘಟನೆಯ ೩೪ ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಲಾಗಿದೆ. ಅವರು ಮೇ ೨೨ ರಂದು ಉಸ್ತುವಾರಿಯನ್ನು ವಹಿಸಲಿದ್ದಾರೆ. ಪ್ರಾದೇಶಿಕ ಸಮೂಹದ ಕಾರ್ಯಕಾರಿ ಮಂಡಳಿಯ ಅಧಿಕಾರವನ್ನು ಒಂದು ವರ್ಷಕ್ಕಾಗಿ ‘ರೊಟೇಶನ್’ (ಸರದಿ) ಪದ್ದತಿಯಲ್ಲಿ ನೀಡುತ್ತಾರೆ. ಭಾರತಕ್ಕೆ ನೀಡುವ ನಿರ್ಧಾರವನ್ನು ಕೈಗೊಂಡಿದ್ದಾರೆ.

ಅಮೇರಿಕಾದಲ್ಲಿ ಪ್ರಾರ್ಥನೆಯ ಮೂಲಕ ಕೊರೋನಾ ಪೀಡಿತರ ಮೇಲೆ ಚಿಕಿತ್ಸೆ ನೀಡಲು ಯತ್ನ

ಅಮೇರಿಕಾದಲ್ಲಿನ ಭಾರತೀಯ ವಂಶದ ಡಾಕ್ಟರ್‌ಗಳಿಂದ ‘ಪ್ರಾರ್ಥನೆ ಮಾಡುವುದರಿಂದ ಕೊರೋನಾ ಪೀಡಿತರ ಆರೋಗ್ಯದಲ್ಲಿ ಸುಧಾರಣೆ ಆಗಬಹುದೇ ?, ಎಂಬ ವಿಷಯದ ಮೇಲೆ ಸಂಶೋಧನೆ ನಡೆಯುತ್ತಿದೆ. ಅದರ ಒಂದು ಭಾಗವೆಂದು ಭಾರತೀಯ ಮೂಲದ ಡಾ. ಧನಂಜಯ ಲಾಕಿರೆಡ್ಡಿಯವರು ಮೇ ೧ ರಿಂದ ‘ಪ್ರೇಯರ್ ಥೆರಪಿ ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಭಾರತದ ಲಿಪುಲೆಖ, ಲಿಪಿಯಾಧುರಾ ಹಾಗೂ ಕಾಲಾಪಾನಿ ಈ ಪ್ರದೇಶಗಳು ತನ್ನದೆಂದ ನೇಪಾಳ

ಭಾರತದ ಲಿಪುಲೆಖ, ಲಿಪಿಯಾಧುರಾ ಹಾಗೂ ಕಾಲಾಪಾನಿ ಈ ಪ್ರದೇಶಗಳ ಮೇಲೆ ನೇಪಾಳ ತನ್ನದೆಂದು ಹೇಳಿಗೆ. ಭಾರತದ ಈ ಮೂರು ಪ್ರದೇಶಗಳು ನೇಪಾಳದ್ದಾಗಿದೆ ಎಂಬ ನಕಾಶೆಯನ್ನು ನೇಪಾಳವು ಪ್ರಕಾಶಿಸಲಿದೆ. ನೇಪಾಳದ ಮಂತ್ರಿಮಂಡಳಿಯ ಸಭೆಯಲ್ಲಿ ಈ ನಿರ್ಣಯವನ್ನು ತೆಗೆಕೊಳ್ಳಲಾಯಿತು.

ಲಾಕ್‌ಡೌನ್‌ದಿಂದಾಗಿ ಆರ್ಥಿಕ ನಷ್ಟ ಅನುಭವಿಸಿದ ಸಣ್ಣ ಮತ್ತು ಮಧ್ಯಮ ಗಾತ್ರದ ಸುದ್ದಿ ಪ್ರಕಾಶಕರಿಗೆ ಗೂಗಲ್ ಆರ್ಥಿಕ ನೆರವು

ಜಾಗತಿಕ ಮಟ್ಟದ ಸಾರಿಗೆ ನಿಷೇಧವು ಆರ್ಥಿಕತೆಯನ್ನು ತೀವ್ರವಾಗಿ ಪೆಟ್ಟುಬಿದ್ದಿದೆ. ಸಣ್ಣ ಸಂಸ್ಥೆಗಳ ಮೇಲೆ ಮತ್ತು ದೊಡ್ಡ ಸಂಸ್ಥೆಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಇದು ಪತ್ರಿಕಾರಂಗದ ಮೇಲೆಯೂ ಅದರ ಪರಿಣಾಮ ಬೀರುತ್ತಿದೆ. ಅಂತಹ ಸುದ್ದಿ ಪ್ರಕಾಶಕರಿಗೆ ಗೂಗಲ್ ಫೌಂಡೇಶನ್ ಸಹಾಯ ಮಾಡಲಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಸುದ್ದಿ ಪ್ರಕಾಶಕರಿಗೆ ಗೂಗಲ್ ಆರ್ಥಿಕ ನೆರವು ನೀಡಲಿದೆ.

ಮುಂದಿನ ೬ ತಿಂಗಳಲ್ಲಿ ಪ್ರತಿದಿನ ೬,೦೦೦ ಕ್ಕೂ ಹೆಚ್ಚು ಮಕ್ಕಳು ಸಾಯುವ ಸಾಧ್ಯತೆಯಿದೆ! – ಯುನಿಸೆಫ್

ಕರೋನಾ ಬಿಕ್ಕಟ್ಟು ಮಕ್ಕಳ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ತಕ್ಷಣದ ಕ್ರಮ ತೆಗೆದುಕೊಳ್ಳಲು ವಿಫಲವಾದರೆ ೫ ವರ್ಷದೊಳಗಿನ ಮಕ್ಕಳ ಸಾವಿನ ಅಪಾಯ ಹೆಚ್ಚಾಗಬಹುದು. ಮುಂದಿನ ಆರು ತಿಂಗಳಲ್ಲಿ ಪ್ರತಿದಿನ ೬,೦೦೦ ಕ್ಕೂ ಹೆಚ್ಚು ಮಕ್ಕಳು ಸಾಯುವ ಸಾಧ್ಯತೆಯಿದೆ ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಹೇಳಿದ್ದಾರೆ.

ಪಾಕ್ ನಗರಗಳಲ್ಲಿ ಕ್ರೈಸ್ತರಿಂದ ಮಾಡಿಸಲಾಗುತ್ತದೆ ಚರಂಡಿ ಸ್ವಚ್ಚತೆ !

ಪಾಕ್‌ನಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಧಾರ್ಮಿಕ ಸ್ವಾತಂತ್ರ್ಯವಿಲ್ಲ. ಅಲ್ಲಿಯ ಕ್ರೈಸ್ತರಿಗೆ ಬಲವಂತವಾಗಿ ಚರಂಡಿ ಸ್ವಚ್ಚತೆಯ ಕೆಲಸಕ್ಕೆ ಹಾಕುತ್ತಾರೆ. ಅಲ್ಲಿಯ ಅನೇಕ ಹಿಂದುಳಿದ ವರ್ಗದವರು ಕ್ರೈಸ್ತಧರ್ಮವನ್ನು ಸ್ವೀಕಾರ ಮಾಡಿದ್ದಾರೆ; ಆದರೂ ಅವರಿಂದ ಚರಂಡಿ ಸ್ವಚ್ಚತೆಯನ್ನು ಮಾಡಿಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಅವರಿಗೆ ಮಾಸ್ಕ್ ಅಥವಾ ಕೈಗವಸುಗಳನ್ನು ಕೊಡುತ್ತಿಲ್ಲ. ಇದರಿಂದ ಅನೇಕ ಜನರು ಮೃತಪಟ್ಟಿದ್ದಾರೆ

ಭಾರತವು ವಿಶ್ವದ ಆಧ್ಯಾತ್ಮಿಕ ಗುರುವಾಗಿದ್ದರೂ ಭಾರತದಲ್ಲಿ ಈ ರೀತಿಯ ಪ್ರಯೋಗ ನಡೆಸುವ ವಿಚಾರ ಯಾರ ಮನಸ್ಸಿಗೂ ಬರುವುದಿಲ್ಲ; ಏಕೆಂದರೆ ಭಾರತವು ವಿನಾಶಕಾರಿ ಜಾತ್ಯತೀತವನ್ನು ಅಂಗೀಕರಿಸಿದೆ !

ಡಾ. ಧನಂಜಯ ಲಾಕಿರೆಡ್ಡಿರವರು ಮಾತನಾಡುತ್ತ, “ನಾವು ವಿಜ್ಞಾನದ ಮೇಲೆ ವಿಶ್ವಾಸವಿಡುತ್ತೇವೆ. ಜೊತೆಗೆ ದೈವೀ ಅಲೌಕಿಕ ಶಕ್ತಿಯ ಮೇಲೆ ಕೂಡ ವಿಶ್ವಾಸವಿಡುತ್ತೇವೆ. ಆದ್ದರಿಂದ ‘ದೈವೀ ಶಕ್ತಿಯಿಂದ ರೋಗಿಗಳ ಮೇಲೆ ಏನಾದರೂ ಪರಿಣಾಮವಾಗುತ್ತದೆಯೇ, ಎಂಬ ಬಗ್ಗೆ ನಾವು ಅಭ್ಯಾಸ ಮಾಡಲಿದ್ದೇವೆ, ಎಂದಿದ್ದಾರೆ.