|
(ಖ್ವಾಜಾ ಎಂದರೆ ಸ್ವಾಮಿ, ಮಾಲೀಕ ಅಥವಾ ಗುರು)

ಬಲರಾಮಪುರ (ಉತ್ತರ ಪ್ರದೇಶ) – ಪ್ರವಾದಿ ಮಹಮ್ಮದ ಪೈಗಂಬರರ ಜನ್ಮದಿನದ ನಿಮಿತ್ತ ಬಲರಾಮ್ಪುರ ಜಿಲ್ಲೆಯ ಉಟ್ರೌಲಾ ಈ ಮುಸ್ಲಿಂ ಬಾಹುಳ್ಯವಿರುವ ಮಾರುಕಟ್ಟೆಯಲ್ಲಿ ಮತಾಂಧ ಮುಸ್ಲಿಮರು ಮೆರವಣಿಗೆ ನಡೆಸಿದ್ದರು. ಈ ಮೆರವಣಿಗೆ ಹಿಂದೂ ವ್ಯಾಪಾರಿಗಳು ನಿರ್ಮಿಸಿದ್ದ ಗಣೇಶೋತ್ಸವ ಮಂಟಪದ ಮುಂದೆ ಬಂದಾಗ ಮತಾಂಧ ಮುಸ್ಲಿಮರು ಮಂಟಪದ ಮುಂದೆ ನಿಂತು ಹಸಿರು ಬಾವುಟ ಹಾರಿಸಿದರು. ಆ ಸಮಯದಲ್ಲಿ ‘ಭಾರತದಲ್ಲಿರಬೇಕಿದ್ದರೆ, ಖ್ವಾಜಾ ಹೇಳಲೇಬೇಕು’ ರೊಂದಿಗೆ ‘ರಸೂಲ್ ಕೆ ಗುಲಾಮ್ ಕೊ ಮೌತ್ ಭಿ ಖಬುಲ್ ಹೈ’ (ಅಲ್ಲಾನ ಗುಲಾಮರಿಗೆ ಸಾವು ಸ್ವೀಕಾರವಿದೆ), ‘ಪ್ಯಾಲೆಸ್ತೀನ್ ಮುಸ್ಲಿಂ ಜಿಂದಾಬಾದ್’, ‘ಮಸ್ಜಿದ್-ಎ-ಅಕ್ಸಾ ಜಿಂದಾಬಾದ್’ (ಜೆರುಸಲೇಂನಲ್ಲಿರುವ ಮಸೀದಿ) ಎಂದು ಘೋಷಣೆ ಕೂಗಿದರು. ಪೊಲೀಸರ ಎದುರಿಗೆ ಘೋಷಣೆಗಳು ಕೂಗಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಯಿತು. ಪೊಲೀಸ್ ಅಧೀಕ್ಷಕ ಸಂಜಯ ದುಬೆ ಇವರು ಘೋಷಣೆ ಕೂಗಿದವರಲ್ಲಿ ಕೆಲವರನ್ನು ಬಂಧಿಸಿದರು; ಆದರೆ ಮುಸಲ್ಮಾನರು ಅವರನ್ನು ಬಿಡುವಂತೆ ಒತ್ತಡ ಹೇರಿದ್ದರಿಂದ ದುಬೆ ಅವರನ್ನು ಬಿಡುಗಡೆ ಮಾಡಿದರು. (ಮುಸಲ್ಮಾನರ ಮುಂದೆ ತಲೆ ಬಾಗುವ ಪೊಲೀಸರು ಹಿಂದೂಗಳ ಮೇಲೆ ಯಾವಾಗಲೂ ಪೌರುಶ ತೋರಿಸುತ್ತಾರೆ ಎನ್ನುವುದನ್ನು ಗಮನಿಸಿರಿ ! – ಸಂಪಾದಕರು) ಮುಸ್ಲಿಮರ ಈ ಕೃತ್ಯದ ವಿರುದ್ಧ ಸಿದ್ಧಿ ವಿನಾಯಕ ಸೇವಾ ಸಮಿತಿಯು ಪೊಲೀಸರಿಗೆ ದೂರು ನೀಡಿದೆ.
ಸಂಪಾದಕೀಯ ನಿಲುವುಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ! ಹಿಂದೂ ಬಹುಸಂಖ್ಯಾತ ರಾಷ್ಟ್ರದಲ್ಲಿ ಅಲ್ಪಸಂಖ್ಯಾತ ಮತಾಂಧ ಮುಸ್ಲಿಮರು ಉದ್ಧಟರಾಗಿದ್ದಾರೆ. ಅವರಿಗೆ ಸರಕಾರ ತಕ್ಕ ಪಾಠ ಯಾವಾಗ ಕಲಿಸುವುದು ? |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ