ಬೆಂಗಳೂರಿನಲ್ಲಿ ಬೇಹುಗಾರಿಕೆಗಾಗಿ ನಡೆಯುತ್ತಿದ್ದ ಅಕ್ರಮ ದೂರವಾಣಿ ಕೇಂದ್ರದ ಮೇಲೆ ಪೊಲೀಸರ ದಾಳಿ !

ಕರ್ನಾಟಕ ಪೊಲೀಸರು ಮತ್ತು ಸೇನಾ ಗುಪ್ತಚರ ಇಲಾಖೆಯು ಇಲ್ಲಿ ಅಕ್ರಮವಾಗಿ ನಡೆಸಲಾಗುುತ್ತಿದ್ದ ದೂರವಾಣಿ ಕೇಂದ್ರದ ಮೇಲೆ ದಾಳಿ ನಡೆಸಿ ಮುಚ್ಚಿದೆ. ಈ ಕೇಂದ್ರಕ್ಕೆ ಅಂತರರಾಷ್ಟ್ರೀಯ ಕರೆ ಬಂದಾಗ, ಅದನ್ನು ಸ್ಥಳೀಯ ಕರೆಯಾಗಿ ಬದಲಾಯಿಸಲಾಗುತ್ತಿತ್ತು. ಕರ್ನಾಟಕ ಪೊಲೀಸರು ಮತ್ತು ಸೇನಾ ಗುಪ್ತಚರ ಇಲಾಖೆಯು ಇಲ್ಲಿ ಅಕ್ರಮವಾಗಿ ನಡೆಸಲಾಗುುತ್ತಿದ್ದ ದೂರವಾಣಿ ಕೇಂದ್ರದ ಮೇಲೆ ದಾಳಿ ನಡೆಸಿ ಮುಚ್ಚಿದೆ. ಈ ಕೇಂದ್ರಕ್ಕೆ ಅಂತರರಾಷ್ಟ್ರೀಯ ಕರೆ ಬಂದಾಗ, ಅದನ್ನು ಸ್ಥಳೀಯ ಕರೆಯಾಗಿ ಬದಲಾಯಿಸಲಾಗುತ್ತಿತ್ತು. ಜೊತೆಗೆ ವಿದೇಶದಿಂದ ದೂರವಾಣಿ ಕರೆ ಬರುತ್ತಿದೆ ಎಂದು ಯಾರಿಗೂ ತಿಳಿಯಬಾರದು ಮತ್ತು ಈ ಮೂಲಕ ಬೇಹುಗಾರಿಕೆ ನಡೆಸಲು ಆಗಬೇಕು ಎಂದು ಪ್ರಯತ್ನಿಸಲಾಗುತ್ತಿತ್ತು.

ಲಡಾಖ್ ಗಡಿಯಲ್ಲಿ ಭಾರತವೇ ಹಿಂದೆ ಸಾಗುತ್ತಿದ್ದು ಚೀನಾವು ಮುಂದೆ ಸರಿಯುತ್ತಿದೆ ! – ಡಾ. ಸುಬ್ರಹ್ಮಣ್ಯಂ ಸ್ವಾಮಿಯ ಹೇಳಿಕೆ

ಲಡಾಖ್‍ನಲ್ಲಿ ಸಂಘರ್ಷ ನಡೆದ ಸ್ಥಳದಿಂದ ಭಾರತೀಯ ಸೇನೆಯು ಮಾತ್ರ ಹಿಂದೆ ಸರಿದಿದೆ ಆದರೆ, ಚೀನಾ ಸೇನೆ ಇನ್ನೂ ಇದೆ ಮತ್ತು ಅದು ಮುಂದೆ ಬಂದಿದೆ ಎಂದು ಬಿಜೆಪಿ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.

ವಿವಾಹಿತ ಮತ್ತು ಅವಿವಾಹಿತ ಜೋಡಿಗಳು ‘ಲಿವ್ ಇನ್ ರಿಲೇಶನ್’ನಲ್ಲಿ ಒಟ್ಟಿಗೆ ಇರಲು ಸಾಧ್ಯವಿಲ್ಲ ! – ರಾಜಸ್ಥಾನ ಉಚ್ಚನ್ಯಾಯಾಲಯ

‘ಲಿವ್ ಇನ ರಿಲೇಶನ್’ ಎಂಬುದು ಪಾಶ್ಚಿಮಾತ್ಯರ ಸಂಸ್ಕೃತಿಯಾಗಿದೆ. ಭಾರತದಲ್ಲಿ ಯಾರಾದರೂ ಅದನ್ನು ಅನುಕರಿಸುತ್ತಿದ್ದರೆ, ಅದನ್ನು ಅಪರಾಧವೆಂದು ಪರಿಗಣಿಸಬೇಕು. ಭಾರತೀಯ ಸಂಸ್ಕೃತಿಯನ್ನು ರಕ್ಷಿಸಲು ಸರಕಾರವು ಪ್ರಯತ್ನಿಸಬೇಕು !

ಕುಲಭೂಷಣ ಜಾಧವ ಅವರಿಗೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಪಾಕಿಸ್ತಾನ ಸಂಸತ್ತಿನಿಂದ ಮಾನ್ಯತೆ

ಅಂತರರಾಷ್ಟ್ರೀಯ ನ್ಯಾಯಾಲಯದ ಒತ್ತಡಕ್ಕೆ ಮಣಿದ ಪಾಕಿಸ್ತಾನದ ‘ನ್ಯಾಶನಲ್ ಅಸೆಂಬ್ಲಿ’ಯು ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ ಜಾಧವ ಅವರಿಗೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಅನುಮೋದನೆ ನೀಡಿದೆ. ಇದರಿಂದ ಕುಲಭೂಷಣ್ ಜಾಧವ ಅವರಿಗೆ ದೊಡ್ಡ ಸಾಂತ್ವನ (ಸಮಾಧಾನ) ಸಿಕ್ಕಿದೆ.

ಹಿಂದೂಗಳು ೫ ರಿಂದ ೬ ಮಕ್ಕಳನ್ನು ಹಡೆಯಿರಿ ! – ಮಹಂತ ನರಸಿಂಹಾನಂದ

ಮುಸಲ್ಮಾನ ಜನಸಂಖ್ಯೆಯು ಬೆಳೆಯುತ್ತಿರುವ ಪದ್ಧತಿಯನ್ನು ಗಮನಿಸಿದರೆ, ಇದರಿಂದ ದೊಡ್ಡ ಬಿಕ್ಕಟ್ಟು ಬರಲಿದೆ. ಇದಕ್ಕಾಗಿ ಪ್ರತಿಯೊಬ್ಬ ಹಿಂದೂವು ಕನಿಷ್ಠ ೫ ರಿಂದ ೬ ಮಕ್ಕಳಿಗೆ ಜನ್ಮ ನೀಡಬೇಕು ಮತ್ತು ಪ್ರತಿಯೊಬ್ಬ ಹಿಂದೂಗಳು ಶಸ್ತ್ರಸಜ್ಜಿತರಾಗಿರಬೇಕು ಎಂದು ಇಲ್ಲಿನ ಡಾಸನಾ ದೇವಸ್ಥಾನದ ಮಹಂತ ನರಸಿಂಹಾನಂದ ಇವರು ಹೇಳಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಏಷ್ಯಾದ ಶ್ರೇಷ್ಠ ನಾಯಕ ಪ್ರಶಸ್ತಿ

ಪದ್ಮವಿಭೂಷಣ, ಕರ್ನಾಟಕ ರತ್ನ ಪುರಸ್ಕೃತರಾದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಪ್ರತಿಷ್ಠಿತ ‘ಏಷ್ಯಾದ ಶ್ರೇಷ್ಠ ನಾಯಕ’ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ಡಾ. ಹೆಗ್ಗಡೆಯವರ ಮುಂದಾಳತ್ವದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ‘ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯವು ‘ಏಷ್ಯಾದ ಹೆಮ್ಮೆ’ (ಪ್ರೈಡ್ ಆಫ್ ಏಷ್ಯಾ) ಪ್ರಶಸ್ತಿ ಲಭಿಸಿದೆ

ದೇವಾಲಯಗಳ ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ ! – ಮದ್ರಾಸ್ ಉಚ್ಚನ್ಯಾಯಾಲಯದ ಐತಿಹಾಸಿಕ ಆದೇಶ

ದೇವಾಲಯಗಳಿಗೆ ದಾನ ಮಾಡುವವರ ಇಚ್ಛೆಗೆ ವಿರುದ್ಧವಾಗಿ ಯಾರಿಗೂ ಭೂಮಿ ನೀಡಬಾರದು. ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ. ಸಾಮಾನ್ಯವಾಗಿ ದೇವಾಲಯದ ಭೂಮಿಯ ಮೇಲೆ ಆಯಾ ಸಮುದಾಯದ ಜನರ ಹಿತಾಸಕ್ತಿಗಳು ಅವಲಂಬಿಸಿರುವ ಸಂದರ್ಭಗಳಲ್ಲಿ ಕಾನೂನು ಅನ್ವಯಿಸುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಮದ್ರಾಸ್ ಉಚ್ಚನ್ಯಾಯಾಲಯವು ನೀಡಿದೆ.

ಸೂರ್ಯಗ್ರಹಣದಿಂದ ಜಗತ್ತಿನಲ್ಲಿ ಯುದ್ಧದ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಯಿದೆ ! – ಜ್ಯೋತಿಷ್ಯರ ಭವಿಷ್ಯವಾಣಿ

ಚೀನಾ ಮತ್ತು ಅಮೇರಿಕಾದಲ್ಲಿ ಚಂದ್ರ ಮತ್ತು ಸೂರ್ಯಗ್ರಹಣ ಇವೆರಡೂ ಕಂಡುಬಂದಿದ್ದವು. ಆದ್ದರಿಂದ ಮುಂದಿನ ೪೫ ರಿಂದ ೯೦ ದಿನಗಳಲ್ಲಿ ಉಭಯ ದೇಶಗಳ ನಡುವೆ ಯುದ್ಧದ ಸ್ಥಿತಿ ಉದ್ಭವಿಸಬಹುದು. ಯುದ್ಧದ ಸ್ಥಿತಿ ವಿಶ್ವದ ಮಧ್ಯದಲ್ಲಿ ಕಂಡುಬರಲಿದೆ. ಮಧ್ಯದಲ್ಲಿ ಇಸ್ರೈಲ್ ದೇಶವಿದೆ. ಅಲ್ಲಿಯೂ ಸಹ ಯುದ್ಧದಂತಹ ಪರಿಸ್ಥಿತಿ ಮತ್ತೆ ಉದ್ಭವಿಸಬಹುದು.

ಚೀನಾ ಆ್ಯಪ್ ಮೂಲಕ ೨೪ ದಿನಗಳಲ್ಲಿ ದುಪ್ಪಟ್ಟು ಹಣ ಮಾಡಿಕೊಡುವ ಆಮಿಷ ತೋರಿಸಿ ಮೋಸ ಮಾಡಿದ ಸಮೂಹದ ಬಂಧನ

ದೆಹಲಿ ಪೊಲೀಸರ ಸೈಬರ್ ಶಾಖೆಯು ಒಂದು ಗ್ಯಾಂಗ್ ಅನ್ನು ಬಂಧಿಸಿದೆ. ಈ ಗುಂಪು ಚೀನಾದ ಆ್ಯಪ್ ಮೂಲಕ ೫ ಲಕ್ಷ ಭಾರತೀಯರಿಗೆ ಮೋಸ ಮಾಡಿ ೧೫೦ ಕೋಟಿ ರೂಪಾಯಿ ಲೂಟಿ ಮಾಡಿದೆ. ಈ ಮೊತ್ತ ೨೫೦ ಕೋಟಿ ರೂಪಾಯಿವರೆಗೆ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಗ್ಯಾಂಗ್ ‘೨೪ ದಿನಗಳಲ್ಲಿ ಹಣವನ್ನು ದ್ವಿಗುಣಗೊಳಿಸಿ ಕೊಡುತ್ತೇವೆ’, ಎಂದು ಹೇಳುವ ಮೂಲಕ ಜನರನ್ನು ಮೋಸ ಮಾಡಿದೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ಗೀತಾ ಪ್ರೆಸ್ ಮುಚ್ಚಲಾಗುವುದು ಎಂಬ ಸುದ್ದಿಗೆ ಬಿಜೆಪಿ ಸಂಸದ ರವಿ ಕಿಶನ್‍ರಿಂದ ಭರವಸೆ !

ರವಿ ಕಿಶನ್ ತಮ್ಮ ಮಾತನ್ನು ಮುಂದುವರೆಸುತ್ತಾ, ಪ್ರೆಸ್ ಸಂಪೂರ್ಣವಾಗಿ ಸ್ವಾವಲಂಬಿಯಾಗಿದೆ. ನೌಕರರಿಗೆ ತಿಂಗಳಿಗೆ ೮೦ ಲಕ್ಷ ರೂ.ರೂಪಾಯಿಗಳನ್ನು ಸಂಬಳವಾಗಿ ನೀಡುತ್ತಿದೆ. ಪ್ರತಿ ತಿಂಗಳು ೧೫ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಲಾಗುತ್ತದೆ. ಇಲ್ಲಿ ಮುದ್ರಣ ಯಂತ್ರಗಳು ಅತ್ಯಾಧುನಿಕವಾಗಿದೆ. ಪ್ರೆಸ್‍ಗೆ ಆರ್ಥಿಕ ಬಿಕ್ಕಟ್ಟು ಇಲ್ಲ. ಈ ಪ್ರೆಸ್ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಹೇಳಿದರು.