ಸಂಭಲ (ಉತ್ತರಪ್ರದೇಶ) ದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಹಿಂದೂ ವಿದ್ಯಾರ್ಥಿಯನ್ನು ಥಳಿಸಲು ಹೇಳಿದ ಮುಸಲ್ಮಾನ ಶಿಕ್ಷಕಿ !

ಶಿಕ್ಷಕಿಯ ಬಂಧನ

ಸಂಭಲ (ಉತ್ತರಪ್ರದೇಶ) – ಇಲ್ಲಿನ ದುಗಾವರ ಊರಿನಲ್ಲಿರುವ ಸೇಂಟ್ ಆಂಥನಿ ಉಚ್ಚ ಮಾಧ್ಯಮಿಕ ಶಾಲೆಯಲ್ಲಿ ಶಾಯಿಸ್ತಾ ಎಂಬ ಹೆಸರಿನ ಮುಸಲ್ಮಾನ ಶಿಕ್ಷಕಿಯು ಮುಸಲ್ಮಾನ ವಿದ್ಯಾರ್ಥಿಗಳಿಗೆ ಓರ್ವ ಹಿಂದೂ ವಿದ್ಯಾರ್ಥಿಯನ್ನು ಥಳಿಸಲು ಹೇಳಿರುವ ಘಟನೆಯು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿಯ ಪಾಲಕರು ದೂರು ನೀಡಿದ ನಂತರ ಶಾಯಿಸ್ತಾಳನ್ನು ಬಂಧಿಸಲಾಯಿತು ಹಾಗೆಯೆ ಶಾಲೆಯು ಆಕೆಯನ್ನು ಅಮಾನತುಗೊಳಿಸಿದೆ.

ಸಂತ್ರಸ್ತ ಹುಡುಗನ ತಂದೆಯು ಮಾತನಾಡುತ್ತ, ಹುಡುಗನು ಹಿಂದೂ ಆಗಿದ್ದರಿಂದ ಶಿಕ್ಷಕಿಯು ಮುಸಲ್ಮಾನ ವಿದ್ಯಾರ್ಥಿಗಳಿಗೆ ಆತನನ್ನು ಥಳಿಸಲು ಹೇಳಿದ್ದರು. ಇದರಿಂದಾಗಿ ಹುಡುಗನು ಭಯ ಹಾಗೂ ನಾಚಿಕೆಯಿಂದಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಈ ಬಗ್ಗೆ ಅವನಲ್ಲಿ ವಿಚಾರಿಸಿದಾಗ ಅವನು ನಡೆದ ಘಟನೆಯನ್ನು ತಿಳಿಸಿದನು, ಎಂದು ಹೇಳಿದರು.

(ಸೌಜನ್ಯ – VK News)

ಸಂಪಾದಕೀಯ ನಿಲುವು

ಇಂತಹ ಮಾನಸಿಕತೆಯ ಶಿಕ್ಷಕಿ ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿರಬಹುದು ಎಂಬುದರ ಕಲ್ಪನೆ ಬರುತ್ತದೆ !