ಕೆಲವು ನಗರ ನಕ್ಸಲೀಯರು ಕಾಂಗ್ರೆಸ್ ಪಕ್ಷವನ್ನು ನಡೆಸುತ್ತಿದ್ದಾರೆ ! – ಪ್ರಧಾನಿ ಮೋದಿ ಇವರಿಂದ ಗಂಭೀರ ಆರೋಪ

ಭೋಪಾಲ್ (ಮಧ್ಯಪ್ರದೇಶ) – ಕಾಂಗ್ರೆಸ್ ಇಚ್ಛಾಶಕ್ತಿ ಕಳೆದುಕೊಂಡಿದೆ. ತಳಮಟ್ಟದವರೆಗೂ ತಲುಪಿರುವ ಕಾಂಗ್ರೆಸ್ ನಾಯಕರು ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ನಾಯಕರು ನಡೆಸುತ್ತಿಲ್ಲ. ಕಾಂಗ್ರೆಸ್ ಈಗ ಕಂಪನಿಯಾಗಿದೆ. ಕಾಂಗ್ರೆಸ್ ನ ಘೋಷಣೆಗಳಿಂದ ಹಿಡಿದು ನೀತಿಗಳವರೆಗೆ ಎಲ್ಲವನ್ನೂ ಆಮದು ಮಾಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್‌ಅನ್ನು ಈಗ ಕೆಲವು ನಗರ ನಕ್ಸಲಿಯರು ಗುತ್ತಿಗೆ ಪಡೆದಿದ್ದಾರೆ. ಕಾಂಗ್ರೆಸ್ ಈಗ ನಗರ ನಕ್ಸಲೀಯರಿಂದ ನಡೆಯುತ್ತಿದೆ. ಕಾಂಗ್ರೆಸ್‌ನ ತಳಮಟ್ಟದ ನಾಯಕರಿಗೆ, ತಮ್ಮ ಪಕ್ಷ ಟೊಳ್ಳಾಗಿದೆ ಎಂದು ಈಗ ಅರಿವಾಗುತ್ತಿದೆ. ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಆರೋಪಿಸಿದರು.

ಪ್ರಧಾನಿ ಮೋದಿಯವರು ಮಾತು ಮುಂದುವರೆಸಿ, ಭಾರತ ಸ್ವಾತಂತ್ರವಾದನಂತರ ಮಧ್ಯಪ್ರದೇಶದಲ್ಲಿ ದೀರ್ಘ ಕಾಲದ ವಗೆರೆ ಅಧಿಕಾರದಲ್ಲಿತ್ತು. ಆದರೆ ಈ ಅವಧಿಯಲ್ಲಿ ನೈಸರ್ಗಿಕ ಸಂಪತ್ತಿನಿಂದ ಸಮೃದ್ಧವಾಗಿರುವ ಮಧ್ಯಪ್ರದೇಶವನ್ನು ಕಾಂಗ್ರೆಸ್ ‘ಅಸ್ವಸ್ಥ’ ರಾಜ್ಯವನ್ನಾಗಿ ಮಾಡಿತು. ಕಾಂಗ್ರೆಸ್ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ಹಗರಣಗಳ ದಾಖಲೆಗಳನ್ನು ನಿರ್ಮಿಸಿದೆ. ವೋಟ್ ಬ್ಯಾಂಕ್ ಮತ್ತು ಓಲೈಕೆಯ ರಾಜಕಾರಣ ಮಾಡುವ ಈ ಪಕ್ಷಕ್ಕೆ ಮಧ್ಯಪ್ರದೇಶದಲ್ಲಿ ಮತ್ತೊಂದು ಅವಕಾಶ ಸಿಕ್ಕರೆ ರಾಜ್ಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಕಾಂಗ್ರೆಸ್ ಮತ್ತೊಮ್ಮೆ ಮಧ್ಯಪ್ರದೇಶವನ್ನು ‘ಅನಾರೋಗ್ಯ’ ರಾಜ್ಯವನ್ನಾಗಿ ಮಾಡುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಒಂದು ವೇಳೆ ಹೀಗೆ ಇದ್ದಲ್ಲಿ ಸರಕಾರ ಕೂಡಲೇ ಕಾಂಗ್ರೆಸ್ ಅನ್ನು ಬ್ಯಾನ್ ಮಾಡಬೇಕು ಎಂದು ಜನರಿಗೆ ಅನಿಸುತ್ತದೆ !