ಯಾರು ಸನಾತನ ಧರ್ಮವನ್ನು ಅವಮಾನಿಸುವರೋ, ಅವರದ್ದು 2024 ರಲ್ಲಿ ಕೊನೆಗೊಳ್ಳಲಿದೆ ! – ಯೋಗ ಋಷಿ ರಾಮದೇವಬಾಬಾ

ವಾರಣಾಸಿ (ಉತ್ತರ ಪ್ರದೇಶ) – ಯಾರು ಸನಾತನ ಧರ್ಮವನ್ನು ಅವಮಾನಿಸುತ್ತಿದ್ದಾರೆಯೋ ಅವರ 2024 ರಲ್ಲಿ (2024ರಲ್ಲಿ ದೇಶದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ) ಅಂತ್ಯವಾಗಲಿದೆ ಎಂದು ಯೋಗಿಶಿ ರಾಮದೇವ ಬಾಬಾ ಇವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.

ಕಳೆದ ಕೆಲವು ದಿನಗಳಿಂದ ಸನಾತನ ಧರ್ಮವನ್ನು ಮುಗಿಸುವ ಬಗ್ಗೆ ವಿವಿಧ ರಾಜಕೀಯ ಮುಖಂಡರು ನೀಡುತ್ತಿರುವ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಯೋಗ ಋಷಿ ರಾಮದೇವ ಬಾಬಾ ಅವರು ಕಾಶಿಯನ್ನು ಶ್ಲಾಘಿಸುತ್ತಾ, ಸನಾತನ ಧರ್ಮದ ಮರ್ಮ ಕಾಶಿಯಲ್ಲಿದೆ. ಕಾಶಿ ಶಾಶ್ವತ ನಗರವಾಗಿದೆ. ಇದು ಅನಾದಿ ಮತ್ತು ಅನಂತ ಕಾಲದಿಂದಲೂ ಉಪಾಸನೆಯ ಮಹಾತೀರ್ಥವಾಗಿದೆ. ಇದು ಕಲಿಕೆ ಮತ್ತು ಮೋಕ್ಷದ ನಗರವಾಗಿದೆ. ಈಗ ಸಂಪೂರ್ಣ ಜಗತ್ತಿನಲ್ಲಿ ಕಾಶಿ ಆರೋಗ್ಯ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕಾಗಿ ಜಗತ್ತಿನಲ್ಲಿ ಆಕರ್ಷಣೆಯ ಕೇಂದ್ರವಾಗಿದೆ ಎಂದು ಹೇಳಿದರು. (ಕಾಶಿ ಪ್ರವಾಸೋದ್ಯಮವಲ್ಲ, ಬದಲಾಗಿ ಹಿಂದೂ ಧರ್ಮಶಿಕ್ಷಣದ ಕೇಂದ್ರವಾಗಬೇಕು ! – ಸಂಪಾದಕರು) ಸಂಸ್ಕೃತಿ ಮತ್ತು ಜ್ಞಾನವು ಇದು ಸನಾತನ ಧರ್ಮದ ಸಾರವಾಗಿದೆ. (ಸನಾತನ ಧರ್ಮದ ಸಾರವನ್ನು ಎಲ್ಲರಿಗೂ ತಿಳಿಸಲು ಅದನ್ನು ಹೇಳುವುದು ಅವಶ್ಯಕವಾಗಿದೆ. ಅದಕ್ಕೊಂದು ವ್ಯವಸ್ಥೆಯನ್ನು ಮಾಡಬೇಕು ! – ಸಂಪಾದಕರು)