‘ಇಂಡಿಯಾ’ ಮೈತ್ರಿಕೂಟದ ಸ್ಥಾಪನೆ ಸನಾತನ ಧರ್ಮ ನಾಶ ಮಾಡುವುದಕ್ಕಾಗಿ ಆಗಿದೆ ! – ತಮಿಳುನಾಡಿನ ದ್ರಮುಕದ ನಾಯಕ ಮತ್ತು ರಾಜ್ಯದ ಶಿಕ್ಷಣ ಸಚಿವ ಕೆ. ಪೊನ್ಮುಡಿ

ತಮಿಳುನಾಡಿನ ದ್ರಮುಕದ ನಾಯಕ ಮತ್ತು ರಾಜ್ಯದ ಶಿಕ್ಷಣ ಸಚಿವ ಕೆ. ಪೊನ್ಮುಡಿ ಇವರಿಂದ ಇಂಡಿಯಾ ಮೈತ್ರಿಕೂಟದ ನಿಜವಾದ ಉದ್ದೇಶ ಬಹಿರಂಗ !

ಚೆನ್ನೈ (ತಮಿಳುನಾಡು) – ದೇಶದಲ್ಲಿನ ವಿರೋಧಿ ಪಕ್ಷದ ‘ಇಂಡಿಯಾ’ ಮೈತ್ರಿಕೂಟದ ನಿರ್ಮಾಣ ಸನಾತನ ಧರ್ಮವನ್ನು ನಾಶಗೊಳಿಸುವ ಏಕೈಕ ಉದ್ದೇಶದಿಂದ ಮಾಡಲಾಗಿದೆ, ಎಂದು ತಮಿಳುನಾಡಿನಲ್ಲಿನ ದ್ರಮುಕ ಈ ಪಕ್ಷದ ಸರಕಾರದಲ್ಲಿನ ಶಿಕ್ಷಣ ಸಚಿವ ಕೆ. ಪೊನ್ಮುಡಿ ಇವರು ಈ ಹೇಳಿಕೆ ನೀಡಿದರು. ಅವರು ಇಲ್ಲಿಯ ಸನಾತನ ನಿರ್ಮೂಲನೆ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು. (ಜಿಹಾದಿ ಭಯೋತ್ಪಾದನೆಯಿಂದ ‘ಇಸ್ಲಾಂ ನಿರ್ಮೂಲನೆ’, ಕ್ರೈಸ್ತ ಮಷೀನರಿಗಳಿಂದ ಮತಾಂತರ ಕಾರ್ಯ ಚಟುವಟಿಕೆಯಿಂದ ‘ಕ್ರೈಸ್ತ ನಿರ್ಮೂಲನೆ’ ಮುಂತಾದ ಹೆಸರಿನ ಸಮ್ಮೇಳನಗಳನ್ನು ನಡೆಸುವ ಧೈರ್ಯ ಭಾರತದಲ್ಲಿ ಎಂದು ಯಾರೂ ಮಾಡಲ್ಲ; ಕಾರಣ ಅದರ ಪರಿಣಾಮ ಅವರಿಗೆ ಚೆನ್ನಾಗಿ ತಿಳಿದಿದೆ ! – ಸಂಪಾದಕರು) ಈ ಹೇಳಿಕೆಯ ಬಗ್ಗೆ ಭಾಜಪದ ನಾಯಕ ರವಿಶಂಕರ ಪ್ರಸಾದ ಇವರು, ‘ಯಾವುದು ಮನಸ್ಸಿನಲ್ಲಿ ಇರುತ್ತದೆ ಅದೇ ಬಾಯಿಗೆ ಬರುತ್ತದೆ’, ಎಂದು ಟೀಕಿಸಿದರು.

ಕೆ. ಪೊನ್ಮುಡಿ ಮಾತು ಮುಂದುವರಿಸಿ, ‘ಇಂಡಿಯಾ’ ಮೈತ್ರಿಕೂಟದ ಉದ್ದೇಶ ಸನಾತನ ಧರ್ಮದ ಸಿದ್ಧಾಂತದ ವಿರುದ್ಧ ಹೋರಾಡುವುದಾಗಿದೆ. ಈ ಮೈತ್ರಿಕೂಟದಲ್ಲಿನ ಪಕ್ಷಗಳ ಮತ ಭೇದ ಆಗಬಹುದು, ಆದರೆ ಇದರಲ್ಲಿನ ೨೬ ಪಕ್ಷಗಳು ಸನಾತನ ಧರ್ಮದ ವಿರುದ್ಧ ಹೋರಾಡಲು ಸಂಘಟಿತರಾಗಿದ್ದಾರೆ. ಯಾವಾಗ ಸನಾತನ ಧರ್ಮದ ನಾಶದ ಕುರಿತಾದ ವಿಷಯ ಇರುತ್ತದೆ ಆಗ ನಾವೆಲ್ಲರೂ ಒಂದೇ ಅಂಶದ ಕುರಿತು ಸಹಮತವಾಗುತ್ತೇವೆ. ನಾವೆಲ್ಲ ಒಂದೇ ವಿಷಯದ ಅಪೇಕ್ಷೆ ಇಟ್ಟು ಕೊಂಡಿದ್ದೇವೆ ಅದು ಎಂದರೆ, ಸಮಾನತೆ, ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರ ರಕ್ಷಣೆ, ಲೈಂಗಿಕ ಸಮಾನತೆ. ನಮ್ಮ ದ್ರವೀಡ ನೀತಿಯಿಂದ ರಾಜ್ಯದಲ್ಲಿ ಮಹಿಳೆಯರಿಗೆ ಮೀಸಲಾತಿ ದೊರೆತಿದೆ. ಈ ಹಿಂದೆ ಮಹಿಳೆಯರಿಗೆ ಮನೆಯಲ್ಲಿಯೇ ಕೂಡಿ ಹಾಕಲಾಗುತ್ತಿತ್ತು ಎಂದು ಹೇಳಿದರು.

ಸಂಪಾದಕೀಯ ನಿಲುವು

ದ್ರಮುಕ ಸನಾತನ ದ್ವೇಷಿಯಾಗಿದ್ದೂ ಅವರ ಜನ್ಮವೇ ಸನಾತನ ದ್ವೇಷದಿಂದ ಆಗಿದೆ, ಇದು ಬಹಿರಂಗವಾಗಿದೆ; ಆದರೆ ಈಗ ದ್ರಮುಕದ ನಾಯಕ ಕೆ. ಪೊನ್ಮುಡಿ ಇವರು ‘ಇಂಡಿಯಾ’ ಮೈತ್ರಿಕೂಟದ ನಿಜವಾದ ಮುಖವಾಡ ಬಹಿರಂಗಪಡಿಸಿರುವುದರಿಂದ ಸನಾತನ ಧರ್ಮದವರು ಅವರಿಗೆ ಧನ್ಯವಾದ ನೀಡುವರು ! ಈ ಹೇಳಿಕೆಯ ಬಗ್ಗೆ ಈಗ ‘ಇಂಡಿಯಾ’ ಮೈತ್ರಿಕೂಟದಲ್ಲಿನ ನಾಯಕರು ಸೋನಿಯಾ ಗಾಂಧಿ, ರಾಹುಲ ಗಾಂಧಿ, ಶರದ ಪವಾರ, ಲಾಲು ಪ್ರಸಾದ ಯಾದವ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್ ಮುಂತಾದವರು ಉತ್ತರ ನೀಡಬೇಕು !

ಇಂತಹ ಮೈತ್ರಿಕೂಟವನ್ನೆ ಸನಾತನ ಧರ್ಮದವರು ಮುಂಬರುವ ಚುನಾವಣೆಯಲ್ಲಿ ರಾಜಕೀಯ ದೃಷ್ಟಿಯಿಂದ ನಾಶ ಮಾಡುವವರು ಇದರಲ್ಲಿ ಅನುಮಾನವಿಲ್ಲ ! ಸನಾತನವನ್ನು ಮುಗಿಸುವ ಬಗ್ಗೆ ಮಾಡುವವರು ಸ್ವತಃ ನಾಶವಾಗುತ್ತಾರೆ ಇದು ಮತ್ತೊಮ್ಮೆ ಸಾಬೀತುವಾಗುವುದು !

ಕೆ. ಪೊನ್ಮುಡಿ ಇವರಿಂದ ದಲಿತರ ಅವಮಾನ !

ಕೆ. ಪೊನ್ಮುಡಿ ಇವರು ಅವರ ಭಾಷಣದದಲ್ಲಿ, ‘ಈ ಗ್ರಾಮದಲ್ಲಿ ಸರಪಂಚರು ಯಾರು ? ಈ ಅಮ್ಮ ದಲಿತ ಸಮಾಜದವರಾಗಿದ್ದಾರೆ. ಅನುಸೂಚಿತ ಜಾತಿಯವರಾಗಿದ್ದಾರೆ.’ ಈ ಮಹಿಳೆಯ ಕಡೆಗೆ ಅವಮಾನದ ದೃಷ್ಟಿಯಿಂದ ನೋಡುತ್ತಾ, ನೀವು ದಲಿತರಲ್ಲವೇ ? ನೀವು ಪರಿಶಿಷ್ಟ ಜಾತಿಯವರಲ್ಲವೇ ? ಎಂದು ಕೇಳಿದರು. ಕೆ. ಪೊನ್ಮುಡಿ ಇವರ ಈ ಮಾತಿನಿಂದ ಅಲ್ಲಿ ಉಪಸ್ಥಿತ ಇರುವ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದರ ಬಗ್ಗೆ ದಲಿತ ಕಾರ್ಯಕರ್ತೆ ಶಾಲಿನಿ ಮಾರಿಯ ಲಾರೆನ್ಸ್ ಇವರು ಟ್ವೀಟ್ ಮಾಡಿ, ಕೆ. ಪೊನ್ಮುಡಿ ಇವರು ಈ ಅವಮಾನಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ. (ಇದರಿಂದ ದ್ರವಿಡ ನಾಯಕರ ದಲಿತರ ಬಗ್ಗೆ ಇರುವ ನಿಜವಾದ ಮಾನಸಿಕತೆ ಗಮನಕ್ಕೆ ಬರುತ್ತದೆ ! ದೇಶದಲ್ಲಿನ ದಲಿತ ನಾಯಕರು ಇದನ್ನು ವಿರೋಧಿಸುವರೆ ? – ಸಂಪಾದಕರು)

  • ಕೆ. ಪೊನ್ಮುಡಿ ಇವರ ಮೇಲೆ ಈಡಿ ಇಂದ ದಾಳಿ ನಡೆದಿತ್ತು !

  • ೪೧ ಕೋಟಿ ೯೦ ಲಕ್ಷ ರೂಪಾಯ ವಶಪಡಿಸಿಕೊಳ್ಳಲಾಗಿತ್ತು !

ಸನಾತನ ಧರ್ಮ ಮುಗಿಸುವ ಭಾಷೆ ಮಾತನಾಡುವ ತಮಿಳುನಾಡಿನ ಶಿಕ್ಷಣ ಸಚಿವ ಕೆ. ಪೊನ್ಮುಡಿ ಮತ್ತು ಅವರ ಪುತ್ರ ಶಾಸಕ ಗೌತಮ್ ಇವರ ಸ್ಥಳಗಳಲ್ಲಿ ಜುಲೈ ತಿಂಗಳಲ್ಲಿ ಈಡಿಯಿಂದ ದಾಳಿ ನಡೆಸಿ ಅವರಿಂದ ೪೧ ಕೋಟಿ ೯೦ ಲಕ್ಷ ರೂಪಾಯ ನಗದು ವಶಪಡಿಸಿಕೊಳ್ಳಲಾಗಿತ್ತು. ಆರ್ಥಿಕ ಹಗರಣದ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ಸಂಪಾದಕೀಯ ನಿಲುವು

ಇಂತಹ ಭ್ರಷ್ಟಾಚಾರಿ ದ್ರವೀಡ ನಾಯಕರು ಸನಾತನವನ್ನು ಮುಗಿಸುತ್ತಾರೆಂತೆ ! ಕೇಂದ್ರದಲ್ಲಿ ಭಾಜಪ ಸರಕಾರದಿಂದ ಇಂತಹ ಭ್ರಷ್ಟ ನಾಯಕರನ್ನು ಬಂಧಿಸಿ ಜೈಲಿಗೆ ಅಟ್ಟಬೇಕು !