‘ಸನಾತನ ಧರ್ಮ ಡೇಂಗ್ಯೂ ಜ್ವರ ಇದ್ದಂತೆ ಅದನ್ನು ನಾಶ ಮಾಡಬೇಕಂತೆ ! – ನಟ ಪ್ರಕಾಶ ರಾಜ

ಉದಯನಿಧಿ, ಎ. ರಾಜ ಇವರ ನಂತರ ಈಗ ನಟ ಪ್ರಕಾಶ ರಾಜ ಇವರ ಹೇಳಿಕೆ !

ಬೆಂಗಳೂರು (ಕರ್ನಾಟಕ) – ಸನಾತನ ಧರ್ಮ ಡೆಂಗ್ಯೂ ಜ್ವರ ಇಂದ್ದಂತೆ ಅದನ್ನು ನಾಶ ಮಾಡಬೇಕು, ಎಂದು ನಟ ಪ್ರಕಾಶ ರಾಜ ಇವರು ಹೇಳಿಕೆ ನೀಡಿದ್ದಾರೆ. ಅವರು ಕಲಬುರ್ಗಿಯಲ್ಲಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಹಿಂದೆ ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ ಇವರು ಕೂಡ ಇದೇ ರೀತಿ ಹೇಳಿಕೆ ನೀಡಿದ್ದರು.

ಪ್ರಕಾಶ ರಾಜ ಮಾತು ಮುಂದುವರೆಸುತ್ತಾ,

೧. ಡಾ. ಅಂಬೇಡ್ಕರರಿಂದ ಅಸ್ಪೃಶ್ಯತೆ ಕೊನೆಗಾಣಿತು, ಆದರೂ ದೇಶದಲ್ಲಿ ಇಂದೂ ಅಸ್ಪೃಶ್ಯತೆಯ ಮಾನಸಿಕತೆ ಉಳಿದಿದೆ. (ಪ್ರಕಾಶ ರಾಜ ಇವರು ಸನಾತನ ದ್ವೇಷದ ಮಾನಸಿಕತೆ ರಕ್ಷಿಸಿಕೊಳ್ಳುತ್ತಿದ್ದಾರೆ, ಅವರು ಅದನ್ನು ಯಾವಾಗ ನಾಶ ಮಾಡುವವರು, ಇದನ್ನು ಮೊದಲು ಹೇಳಬೇಕು ! – ಸಂಪಾದಕರು)

೨. ಕರ್ನಾಟಕದಲ್ಲಿನ ಓರ್ವ ಮಹಿಳೆ ಮುಸಲ್ಮಾನ ಬಸ್ ಕಂಡೆಕ್ಟರ್ ಗೆ ಟೋಪಿ ತೆಗೆಯಲು ಹೇಳಿದಳು. ನಾಳೆ ಅವನು ಕೊರಳಲ್ಲಿ ಮಾಲೆ ಧರಿಸಿದರೆ, ಆಗ ನೀವು ಅವನಿಗೆ ಬಸ್ ಕಂಡೆಕ್ಟರ್ ರೂಪದಲ್ಲಿ ನೋಡುವರೇ ಅಥವಾ ಭಕ್ತಿಯ ರೂಪದಲ್ಲಿ ? ನಾಳೆ ಇಂತಹ ಬಸ್ ಚಾಲಕ ಹನುಮಾನ ಟೋಪಿ ಹಾಕಿದರೆ ಮತ್ತು ‘ಬಸ್ ಸುರಕ್ಷಿತವಾಗಿ ಇರಲಿ’ ಎಂದು ಪ್ರಾರ್ಥನೆ ಕೂಡ ಮಾಡುವರು, ಎಂದು ವ್ಯಂಗ್ಯವಾಗಿ ಟೀಕಿಸಿದರು.

೩. ಎಲ್ಲರು ಅವರ ಧರ್ಮದ ಪಾಲನೆ ಮಾಡಬೇಕು. ದೇಶ ಉಳಿಯ ಬೇಕು ಅಲ್ಲವೇ ? ಸಮಾಜದಲ್ಲಿ ಎಲ್ಲರು ಇರಬೇಕು. (ಒಂದು ಕಡೆ ಹೀಗೆ ಹೇಳುವುದು ಮತ್ತು ಇನ್ನೊಂದು ಕಡೆಗೆ ಸನಾತನ ಧರ್ಮ ನಾಶ ಮಾಡುವುದರ ಬಗ್ಗೆ ಹೇಳಿಕೆ ನೀಡುವುದು ಇದು ದ್ವಿಮುಖ ಹೇಳಿಕೆ ಆಗಿದೆ ! – ಸಂಪಾದಕರು)

೪. ಶ್ರೀರಾಮನವಮಿಯ ಮೆರವಣಿಗೆಯಲ್ಲಿ ೧೮ ವರ್ಷದ ಯುವಕರು ಕೈಯಲ್ಲಿ ಮಾರಕ ಅಸ್ತ್ರಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅದನ್ನು ನೋಡಿ ನನಗೆ ಬಹಳ ದುಃಖವಾಯಿತು. ಅವರು ಉದ್ಯೋಗ ಅಥವಾ ಅವರ ಕನಸುಗಳ ಬಗ್ಗೆ ಯೋಚಿಸಬೇಕು. ಅವರಿಗೆ ಬ್ರೈನ್ ವಾಷ್ ಯಾರು ಮಾಡಿದರು ? ನನಗೆ ಆಶ್ಚರ್ಯ ಅನಿಸುತ್ತದೆ. (ಹಿಂದುಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮಸೀದಿಯಿಂದ ದಾಳಿ ನಡೆಯುತ್ತದೆ, ಹಿಂದುಗಳ ಹತ್ಯೆ ಮಾಡಲಾಗುತ್ತದೆ, ಜಿಹಾದಿ ಭಯೋತ್ಪಾದನೆಯ ಮೂಲಕ ಹಿಂದುಗಳನ್ನು ಕೊಲ್ಲಲಾಗುತ್ತದೆ, ಇದರ ಬಗ್ಗೆ ಪ್ರಕಾಶ ರಾಜ ಇವರಿಗೆ ದುಃಖ ಹೇಗೆ ಆಗುವುದಿಲ್ಲ ? ಮದರಸಾಗಳಲ್ಲಿ ಮುಸಲ್ಮಾನರ ಬ್ರೈನ್ ವಾಷ್ ಮಾಡಿ ಅವರನ್ನು ಭಯೋತ್ಪಾದಕರನ್ನಾಗಿ ಮಾಡುತ್ತಾರೆ ಇದು ಬಹಿರಂಗವಾಗಿದ್ದರು ಕೂಡ ಪ್ರಕಾಶ ರಾಜ ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ ? – ಸಂಪಾದಕರು)

ಪ್ರಕಾಶ ರಾಜ ಇವರ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳಿಂದ ವಿರೋಧ !

ಈ ಕಾರ್ಯಕ್ರಮದ ಮೊದಲು ಸ್ಥಳೀಯ ಹಿಂದೂ ಸಂಘಟನೆಗಳಿಂದ ಪ್ರಕಾಶ ರಾಜ ಇವರ ಕಾರ್ಯಕ್ರಮಕ್ಕೆ ವಿರೋಧಿಸಲಾಗಿತ್ತು. ಸಂಘಟನೆಯ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಮತ್ತು ಕಪ್ಪು ಬಾವುಟ ಹಿಡಿದು ಪ್ರಕಾಶ ರಾಜ ಇವರನ್ನು ನಿಷೇಧಿಸುತ್ತಾ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಪೊಲೀಸರು ನಂತರ ಈ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಕಾರ್ಯಕರ್ತರು ಈ ಮೊದಲು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಪ್ರಕಾಶ ರಾಜ ಇವರಿಗೆ ‘ಕಲಬುರ್ಗಿಯಲ್ಲಿ ಪ್ರವೇಶ ನೀಡಬಾರದೆಂದು’ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಪ್ರಕಾಶ ರಾಜ ಇವರು ಮೊದಲು ಡೇಂಗ್ಯೂ ನಾಶ ಮಾಡಿ ತೋರಿಸಲಿ ! ನಾಲಿಗೆಗೆ ಎಲುಬಿಲ್ಲ ಎಂದು ಈ ರೀತಿ ಹೇಳಿಕೆ ನೀಡಲಾಗುತ್ತಿದೆ. ಸನಾತನ ಧರ್ಮದವರು ಸಹಿಷ್ಣುಗಳಾಗಿರುವುದರಿಂದ ಕಾನೂನು ಕೈಗೆತ್ತಿಕೊಂಡು ಇಂತಹವರಿಗೆ ಪಾಠ ಕಲಿಸಲ್ಲ !

ಇತರ ಧರ್ಮದವರು ಜಿಹಾದಾದ ಹೆಸರಿನಲ್ಲಿ ಏನೆಲ್ಲಾ ಮಾಡುತ್ತಾರೆ, ಅದರ ಬಗ್ಗೆ ಪ್ರಕಾಶ ರಾಜ ಅಂತಹ ಜನರು ಎಂದಾದರೂ ಬಾಯಿ ತೆರೆಯುವುದಿಲ್ಲ; ಕಾರಣ ಮೂರ್ತಿ ಪೂಜೆ ಮಾಡುವವರನ್ನು ಕೊಲ್ಲುವಂತೆ ಹೇಳುವ ಧರ್ಮ ಅವರಿಗೆ ಅಮೃತದಂತೆ ಅನಿಸುತ್ತದೆ !

ಹಿಂದುತ್ವನಿಷ್ಠರ ವಿರುದ್ಧ ಕಥಿತ ಪ್ರಚೋದನಕಾರಿ ಭಾಷಣ (ಹೆಟ್ ಸ್ಪೀಚ್) ಮಾಡಿದರೆಂದು ದೂರು ದಾಖಲಿಸುವ ಪೊಲೀಸರು ಸ್ಟಾಲಿನ್, ಪ್ರಕಾಶ ರಾಜ ಮುಂತಾದವರ ಪ್ರಚೋದನಕಾರಿ ಹೇಳಿಕೆಯ ಬಗ್ಗೆ ಒಂದು ಅಕ್ಷರ ಕೂಡ ಮಾತನಾಡುವುದಿಲ್ಲ ಅಥವಾ ಅವರ ವಿರುದ್ಧ ದೂರು ಕೂಡ ದಾಖಲಿಸುವುದಿಲ್ಲ ಇದನ್ನು ತಿಳಿದುಕೊಳ್ಳಿ !