ಹಿಂದೂಗಳ ವಿರೋಧದ ನಂತರ ಭಗವಾನ ಶ್ರೀಕೃಷ್ಣನನ್ನು ಅವಮಾನಿಸುವ ಜಾಹಿರಾತನ್ನು ಹಿಂಪಡೆದ “ಫೀನೋಲೆಕ್ಸ್” ಕಂಪನಿ !

ಹಿಂದೂ ಜನಜಾಗೃತಿ ಸಮಿತಿಯು ‘ಎಕ್ಸ್'(ಹಿಂದಿನ ಟ್ವೀಟರ್)ನಿಂದ ವಿರೋಧಿಸಿತ್ತು !

ಮುಂಬಯಿ – ಪಿವಿಸಿ ಪೈಪ್ ಅನ್ನು ಉತ್ಪಾದಿಸುವ “ಫಿನೋಲೆಕ್ಸ್” ಕಂಪನಿಯು ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಒಂದು ಜಾಹಿರಾತನ್ನು ಅದರ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿತು. ಅದರಲ್ಲಿ ಭಗವಾನ್ ಶ್ರೀಕೃಷ್ಣನ ಕೈಯಲ್ಲಿ ಕೊಳಲಿನ ಬದಲು ಪಿವಿಸಿ ಪೈಪ್ ತೋರಿಸಲಾಗಿತ್ತು. ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ.

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗೆ ನೋವನ್ನು ಉಂಟುಮಾಡುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ !

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಇದರ ವಿರುದ್ಧ ಟ್ವೀಟ್ ಮಾಡಿ ಈ ಜಾಹಿರಾತನ್ನು ಹಿಂಪಡೆಯುವಂತೆ ಆಗ್ರಹಿಸಿತ್ತು. ಆನಂತರ ಇದನ್ನು ಸಾವಿರಾರು ಧರ್ಮಾಭಿಮಾನಿಗಳು ವಿರೋಧಿಸಿದ ನಂತರ ಕೆಲವೇ ಗಂಟೆಗಳಲ್ಲಿ ಫೀನೋಲೆಕ್ಸ್ ಕಂಪನಿ ಅದರ ಫೇಸ್ ಬುಕ್ ಖಾತೆಯಿಂದ ಜಾಹಿರಾತನ್ನು ತೆಗೆದುಹಾಕಿದೆ. ಆದರೆ ಈ ಕಂಪನಿಯಿದ ಯಾವುದೇ ಅಧೀಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.