ಅಲ್ಲಾಹು ಅಕ್ಬರ್ ನ ಘೋಷಣೆ !

ಚಿತೊಡಗಡ (ರಾಜಸ್ಥಾನ) – ಇಲ್ಲಿಯ ಮೇವಾಡ ಕಾಲೇಜು ಪರಿಸರದಲ್ಲಿ ಕಾಶ್ಮೀರಿ ಮುಸಲ್ಮಾನ ವಿದ್ಯಾರ್ಥಿಗಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಕಲ್ಲು ತೂರಾಟ ನಡೆಸಿದರು. ಅವರ ಬಳಿ ಶಸ್ತ್ರಾಸ್ತ್ರಗಳು ಕೂಡ ಇದ್ದವು. ಈ ವಿದ್ಯಾರ್ಥಿಗಳಿಗೆ ಇನ್ನೊಂದು ಗುಂಪಿನಿಂದ ವಿರೋಧವಾಯಿತು. ಈ ಹಿಂಸಾಚಾರದಲ್ಲಿ ೮ ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ೩೬ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ಈಗ ಅಲ್ಲಿ ಬಿಗುವಿನ ವಾತಾವರಣ ಇದೆ. ಈ ಘಟನೆ ಆಗಸ್ಟ್ ೨೫ ರ ರಾತ್ರಿ ಘಟಿಸಿದೆ. ಹಿಂಸಾಚಾರದ ಮತ್ತು ಮುಸಲ್ಮಾನ ವಿದ್ಯಾರ್ಥಿಗಳ ಘೋಷಣೆ ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ.
A violent clash broke out at #MewarUniversity in #Chittorgarh between two groups during dinner, leaving over 10 injured.https://t.co/pVpyqrmakZ
— IndiaToday (@IndiaToday) August 26, 2023
ದೊರೆತಿರುವ ಮಾಹಿತಿಯ ಪ್ರಕಾರ ಕಾಲೇಜಿನ ಪರಿಸರದಲ್ಲಿನ ಕ್ಯಾಂಟೀನ್ ನಲ್ಲಿಯ ಆಹಾರದ ಬಗ್ಗೆ ನಡೆದಿರುವ ವಿವಾದದಲ್ಲಿ ಕಾಶ್ಮೀರಿ ಮುಸಲ್ಮಾನ ಮತ್ತು ಇತರ ವಿದ್ಯಾರ್ಥಿಗಳಲ್ಲಿ ಹೊಡೆದಾಟ ನಡೆದಿದೆ. ಮುಸಲ್ಮಾನ ವಿದ್ಯಾರ್ಥಿಗಳು ಕ್ಯಾಂಟೀನ್ ನಲ್ಲಿ ವಿದ್ವಾಂಸಕ ಕೃತ್ಯ ನಡೆಸಿದ್ದಾರೆ, ಹಾಗೂ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಇದರ ನಂತರ ಅವರು ಸ್ಥಳೀಯ ನಾಗರೀಕರಿಗೂ ಹೊಡೆದಿದ್ದಾರೆ. ಇದರಲ್ಲಿ ಒಬ್ಬನು ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನನ್ನು ಉದಯಪುರದಲ್ಲಿನ ಆಸ್ಪತ್ರೆಯಲ್ಲಿ ತ್ವರಿತವಾಗಿ ಸೇರಿಸಲಾಗಿದೆ. ಹಿಂಸಾಚಾರದ ಮಾಹಿತಿ ದೊರೆತನಂತರ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಕಾಲೇಜಿನ ಹೊರಗೆ ಸೇರಿದರು. ಈಗ ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಂಪಾದಕೀಯ ನಿಲುವುರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಇಲ್ಲಿ ಪಾಕಿಸ್ತಾನಿ ಆಡಳಿತ ಇರುವ ಹಾಗೆ ಸ್ಥಿತಿಯಿದೆ. ಆದ್ದರಿಂದ ಕಾಶ್ಮೀರಿ ಮುಸಲ್ಮಾನರು ಹಿಂಸಾಚಾರ ನಡೆಸುವುದರಲ್ಲಿ ಆಶ್ಚರ್ಯ ಏನೂ ಇಲ್ಲ ? ಒಂದು ಕಡೆ ಭಾರತ ಸರಕಾರ ಬಹುಸಂಖ್ಯಾತ ಹಿಂದೂ ತೆರಿಗೆದಾರರ ಹಣದಿಂದ ಕಾಶ್ಮೀರ್ ಮತ್ತು ಅಲ್ಲಿಯ ಮುಸಲ್ಮಾನರ (ಯಾರು ಹಿಂದುಗಳನ್ನು ಕಾಶ್ಮೀರಕ್ಕೆ ಹಿಂತಿರುಗಲು ಪರೋಕ್ಷವಾಗಿ ವಿರೋಧಿಸುತ್ತಿದ್ದಾರೆ) ವಿಕಾಸ ಮಾಡುತ್ತಿದ್ದಾರೆ ಹಾಗೂ ಇನ್ನೊಂದು ಕಡೆ ಈ ಕಾಶ್ಮೀರಿ ಮುಸಲ್ಮಾನರು ಬೇರೆ ಕಡೆ ಹಿಂದುಗಳನ್ನು ಗುರಿ ಮಾಡುತ್ತಾರೆ, ಇದನ್ನು ಅರಿತುಕೊಳ್ಳಿರಿ ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed