ಬರೇಲಿ (ಉತ್ತರ ಪ್ರದೇಶ)ಯಲ್ಲಿ ಭಗವಾನ್ ಶ್ರೀರಾಮನ ಬಗ್ಗೆ ಅಶ್ಲೀಲ ಟಿಪ್ಪಣಿ ಮಾಡಿದ ಮತಾಂಧನ ಬಂಧನ !

ರೆಹಾನ್ ಅನ್ಸಾರಿ

ಬರೇಲಿ (ಉತ್ತರ ಪ್ರದೇಶ) – ಭಗವಾನ್ ಶ್ರೀರಾಮನ ಬಗ್ಗೆ ಅಶ್ಲೀಲ ಟಿಪ್ಪಣೆಗಳನ್ನು ಮಾಡಿದ ರೆಹಾನ್ ಅನ್ಸಾರಿ ಎಂಬ ಮತಾಂಧ ಮುಸಲ್ಮಾನನ್ನು ಬಂಧಿಸಲಾಗಿದೆ. ಅನ್ಸಾರಿಯು ಸಾಮಾಜಿಕ ಜಾಲತಾಣಗಳಲ್ಲಿ ಶ್ರೀರಾಮನನ್ನು ಅವಮಾನಿಸುವ ವಿಡಿಯೋವನ್ನು ಪ್ರಸಾರ ಮಾಡಿದ್ದನು. ಈ ವಿಡಿಯೋ ವೀಕ್ಷಿಸಿದ ಹಿಂದೂಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮತ್ತು ಅನ್ಸಾರಿ ವಿರುದ್ಧ ಹಿಂದೂ ಜಾಗರಣ ಮಂಚ್ ನ ವತಿಯಿಂದ ಪೊಲೀಸರಲ್ಲಿ ದೂರನ್ನು ದಾಖಲಿಸಲಾಗಿತ್ತು. ಈ ವೀಡಿಯೊದಲ್ಲಿ ನಿಖರವಾಗಿ ಏನನ್ನು ವಿಡಂಬನೆ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ.

ಕೆಲವು ದಿನಗಳ ಹಿಂದೆ, ಬರೇಲಿಯ ಶಿಶಗಢ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹುದೇ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಅಲ್ಲಿ ಕೆಲವು ಮತಾಂಧ ವಿದ್ಯಾರ್ಥಿಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಆಡಿಯೋ ಪ್ರಸಾರವಾಗಿತ್ತು. ಇದರಿಂದಾಗಿ ಆ ಪರಿಸರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಬರೇಲಿ ಪೊಲೀಸರು ಹಲವಾರು ಜನರ ವಿರುದ್ಧ ದೂರು ದಾಖಲಿಸಿದ್ದರು.

(ಸೌಜನ್ಯ: Capital TV Uttar Pradesh)

ಸಂಪಾದಕರ ನಿಲುವು

* ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ, ಹಿಂದೂ ದೇವತೆಗಳ ವಿಡಂಬನೆ ಮಾಡುವ ದುಸ್ಸಾಹಸವನ್ನು ಮತಾಂಧರು ಮಾಡಿರುವುದನ್ನು ನೋಡಿದರೆ, ಅವರಿಗೆ ಯಾರ ಹೆದರಿಕೆಯೂ ಇಲ್ಲದಿರುವುದು ಸ್ಪಷ್ಟವಾಗುತ್ತದೆ !