ಭಕ್ತಿಯೋಗದ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು ಮತ್ತು ಇತರ ಯೋಗಮಾರ್ಗಗಳ ತುಲನೆಯಲ್ಲಿ ಭಕ್ತಿಮಾರ್ಗದಿಂದ ಸಾಧನೆಯನ್ನು ಮಾಡಿ ಸಂತಪದವಿ ಪ್ರಾಪ್ತವಾದವರ ಸಂಖ್ಯೆ ಹೆಚ್ಚು ಇರುವುದರ ಹಿಂದಿನ ಕಾರಣಗಳು !

ಅಧ್ಯಾತ್ಮದಲ್ಲಿ ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ, ಹಠಯೋಗ, ಶಕ್ತಿಪಾತಯೋಗ, ನಾಮಸಂಕೀರ್ತನಯೋಗ ಮತ್ತು ಭಕ್ತಿಯೋಗ ಹೀಗೆ ವಿವಿಧ ಯೋಗಮಾರ್ಗಗಳಿವೆ. ವಿವಿಧ ಯೋಗ ಮಾರ್ಗಗಳಿಗನುಸಾರ ಸಾಧನೆಯನ್ನು ಮಾಡಲು ಆವಶ್ಯಕವಾಗಿರುವ ಗುಣಗಳು ಮತ್ತು ಅವುಗಳಿಂದ ವಿಕಸಿತವಾಗುವ ಗುಣಗಳು ಮುಂದಿನಂತಿವೆ. ೨೪/೪೮ ನೇ ಸಂಚಿಕೆಯಲ್ಲಿ ಯೋಗಮಾರ್ಗಗಳ ಬಗೆಗಿನ ಕೆಲವು ಭಾಗಗಳನ್ನು ನೋಡಿದೆವು. ಇಂದು ಮುಂದಿನ ಭಾಗವನ್ನು ನೋಡೋಣ. – ಭಾಗ ೩

ಭಕ್ತಿಯೋಗ ಮತ್ತು ಜ್ಞಾನಯೋಗ : ಭಕ್ತಿಯೋಗದಲ್ಲಿ ಮನಸ್ಸಿಗೆ ಆನಂದದ ಅರಿವಾಗುತ್ತದೆ, ಮತ್ತು ಜ್ಞಾನಯೋಗದಲ್ಲಿ ದೊರಕಿದ ಜ್ಞಾನದಿಂದ ಬುದ್ಧಿಗೆ ಆನಂದದ ಅರಿವಾಗುತ್ತದೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೭.೬.೨೦೨೩)
ಕು. ಮಧುರಾ ಭೋಸಲೆ

೫. ಭಕ್ತಿಯೋಗದ ಅಸಾಧಾರಣ ಮಹತ್ವ : ಮಹರ್ಷಿ ವ್ಯಾಸರು ಜ್ಞಾನದಿಂದ ಪರಿಪೂರ್ಣವಾಗಿರುವ ಗ್ರಂಥಗಳನ್ನು ರಚಿಸಿ ವೇದಗಳನ್ನು ನಾಲ್ಕು ಭಾಗಗಳಲ್ಲಿ ವಿಭಜಿಸಿದರು, ‘ಮಹಾಭಾರತ’ ಎಂಬ ಜಗತ್ತಿನ ಅತ್ಯಂತ ದೊಡ್ಡ ಕಾವ್ಯರೂಪಿ ಗ್ರಂಥವನ್ನು ಬರೆದರು.

ಶ್ಲೋಕ : ವ್ಯಾಸೋಚ್ಛಿಷ್ಠಮ್‌ ಜಗತ್‌ ಸರ್ವಮ್‌ |

ಅರ್ಥ : ಇದರ ಅರ್ಥ ‘ಮಹರ್ಷಿ ವ್ಯಾಸರು ಇಡೀ ಜಗತ್ತನ್ನು ಎಂಜಲು ಮಾಡಿದ್ದಾರೆ.’ ಅಂದರೆ ಅವರು ಎಷ್ಟು ವಿವಿಧ ವಿಷಯಗಳ ಬರವಣಿಗೆ ಮಾಡಿದ್ದಾರೆ ಎಂದರೆ ಅದಕ್ಕಿಂತಲೂ ಹೆಚ್ಚು ಯಾರೂ ಏನೂ ಬರೆಯಲು ಸಾಧ್ಯವೇ ಇಲ್ಲ. ಮಹರ್ಷಿ ವ್ಯಾಸರಿಗೆ ಇಷ್ಟು ಮಹತ್ವವಿರುವುದರಿಂದ ಅವರು ಇಡೀ ವಿಶ್ವದ ಗುರುಗಳಾಗಿದ್ದಾರೆ.

ಹೀಗಿದ್ದರೂ ಮಹರ್ಷಿ ವ್ಯಾಸರಿಗೆ ಮನಃಶಾಂತಿ ಲಭಿಸಿರ ಲಿಲ್ಲ. ಆಗ ದೇವರ್ಷಿ ನಾರದರು ಅವರಿಗೆ ಜ್ಞಾನಯೋಗದ ತಾತ್ತ್ವಿಕ ಜ್ಞಾನದಿಂದ ಕೇವಲ ಬೌದ್ಧಿಕ ಸಮಾಧಾನ ಸಿಗುತ್ತದೆ; ಆದರೆ ಭಕ್ತಿಯನ್ನು ಮಾಡುವುದರಿಂದ ಮನಃಶಾಂತಿ ಸಿಗುತ್ತದೆ’, ಎಂಬ ಅಮೂಲ್ಯ ಉಪದೇಶ ನೀಡಿದರು. ಅದಕ್ಕನುಸಾರ ಮಹರ್ಷಿ ವ್ಯಾಸರು ಭಕ್ತಿಯ ರಸದಲ್ಲಿ ಮುಳುಗಿದ ಶ್ರೀವಿಷ್ಣುವಿನ ಲೀಲೆಗಳ ವರ್ಣನೆಯನ್ನು ಮಾಡುವ ‘ಶ್ರೀಮದ್ಭಾಗವತ’ ಎಂಬ ಅದ್ವಿತೀಯ ಗ್ರಂಥವನ್ನು ರಚಿಸಿದರು. ಹಾಗೆಯೇ ವಿವಿಧ ದೇವತೆಗಳ ಲೀಲೆಗಳನ್ನು ವರ್ಣಿಸುವ ೧೮ ಪುರಾಣಗಳನ್ನೂ ರಚಿಸಿದರು. ಭಕ್ತಿಮಯ ವಾಙ್ಮಯಗಳ ರಚನೆಯಿಂದ ಮಹರ್ಷಿ ವ್ಯಾಸರ ಮನಸ್ಸಿನ ಶುಷ್ಕತನವು ಕೊನೆಗೊಂಡು ಪರಮ ಪವಿತ್ರವಾಗಿರುವ ಭಕ್ತಿಯ ಕಾರಂಜಿಯ ಉಗಮವಾಯಿತು ಮತ್ತು ಅವರಿಗೆ ಮನಃಶಾಂತಿ ಲಭಿಸಿತು. ಈ ಉದಾಹರಣೆ ಯಿಂದ ಭಕ್ತಿಮಾರ್ಗದ ಶ್ರೇಷ್ಠತೆಯು ನಮ್ಮ ಗಮನಕ್ಕೆ ಬರುತ್ತದೆ.

೬. ಭಕ್ತಿಯೋಗಕ್ಕೆ ಶ್ರೀಗುರುಕೃಪೆಯ

ಜೊತೆ ದೊರಕಿದುದರಿಂದ ಭಕ್ತರಲ್ಲಿ ಉತ್ಪನ್ನವಾದ ಸೂಕ್ಷ್ಮ ಅಹಂಕಾರವು ಶ್ರೀಗುರುಕೃಪೆಯಿಂದ ಅಥವಾ ದೇವರೂಪಿ ಗುರುತತ್ತ್ವದಿಂದ ನಾಶವಾಗುವುದು !
ಭಕ್ತಿಮಾರ್ಗದಿಂದ ಸಾಧನೆಯನ್ನು ಮಾಡುವ ಜೀವಕ್ಕೆ ಭಕ್ತಿಯ ಅಹಂಕಾರವಾಗಬಹುದು, ಹಾಗೆಯೇ ಅದು ಗುರು ಅಥವಾ ದೇವರ ಸಗುಣ ರೂಪದಲ್ಲಿ ಸಿಲುಕುವ ಅಪಾಯವಿರುತ್ತದೆ. ಆದುದರಿಂದ ಭಕ್ತಿಮಾರ್ಗೀ ಜೀವದ ಮೇಲೆ ಶ್ರೀಗುರುಗಳ ಕೃಪೆಯಾದಾಗ ಅದರ ಸೂಕ್ಷ್ಮ ಅಹಂಕಾರ ನಾಶವಾಗುತ್ತದೆ.

೬ ಅ. ಶ್ರೀ ವಿಷ್ಣುವು ನಾರದರನ್ನು ವಾನರಮುಖಿಯನ್ನಾಗಿಸಿ ಅವರ ಅಹಂಕಾರವನ್ನು ನಾಶ ಮಾಡುವುದು : ಒಂದು ಸಲ ನಾರದರಿಗೆ ತಮ್ಮ ಬ್ರಹ್ಮಚರ್ಯವ್ರತದ ಬಗ್ಗೆ ಅಹಂಕಾರ ವಾಗಿತ್ತು. ಅದನ್ನು ನಾಶ ಮಾಡಲು ಶ್ರೀವಿಷ್ಣುವು ಒಂದು ಲೀಲೆಯನ್ನು ರಚಿಸಿದರು. ಶ್ರೀವಿಷ್ಣುವಿನ ಕೃಪೆಯಿಂದ ದೇವರ್ಷಿನಾರದರ ಮನಸ್ಸಿನಲ್ಲಿ ‘ವಿಶ್ವಮೋಹಿನಿ’ ಎಂಬ ರಾಜಕುಮಾರಿಯ ಸ್ವಯಂವರವನ್ನು ಗೆದ್ದು ಅವಳೊಂದಿಗೆ ವಿವಾಹ ಮಾಡಿಕೊಳ್ಳಬೇಕೆಂಬ ವಿಚಾರ ಪ್ರಬಲವಾಯಿತು. ಅದಕ್ಕಾಗಿ ಅವರು ಇತರ ರಾಜಕುಮಾರರಿಗಿಂತ ಸುಂದರ ರೂಪವನ್ನು ಪಡೆಯಲು ಶ್ರೀವಿಷ್ಣುವಿನ ಬಳಿ ಪ್ರಾರ್ಥಿಸಿದರು. ಶ್ರೀವಿಷ್ಣ್ಣುವು ಅವರ ಮೇಲೆ ಕೃಪೆ ಮಾಡಿದರು ಮತ್ತು ಅವರ ಗರ್ವಹರಣವಾಗಬೇಕೆಂದು ಅವರಿಗೆ ವಾನರಮುಖವನ್ನು ಪ್ರದಾನಿಸಿದರು. ಆದುದರಿಂದ ಸ್ವಯಂವರದ ಸ್ಥಳದಲ್ಲಿ ಎಲ್ಲರೂ ನಾರದರನ್ನು ಕಡೆಗಣಿಸಿ ಅಪಹಾಸ್ಯ ಮಾಡಿದರು. ಅನಂತರ ನಾರದರು ರೋಷದಿಂದ ವೈಕುಂಠಕ್ಕೆ ಬಂದಾಗ ಶ್ರೀವಿಷ್ಣುವು ಅವರಿಗೆ ವಾನರಮುಖ ನೀಡಿದ ಕಾರಣವನ್ನು ಹೇಳಿದರು. ಆಗ ಅವರ ಸಿಟ್ಟು ಶಾಂತವಾಯಿತು ಮತ್ತು ಅವರು ನಿರಹಂಕಾರಿಯಾದರು.

೬ ಆ. ಶ್ರೀಕೃಷ್ಣನ ಕೃಪೆಯಿಂದ ಗೋಪಿಯರ ಸೂಕ್ಷ್ಮ ಅಹಂ ನಾಶವಾಗುವುದು : ರಾಸಲೀಲೆಯ ಸಮಯದಲ್ಲಿ ಶ್ರೀಕೃಷ್ಣನು ಪ್ರತಿಯೊಬ್ಬ ಗೋಪಿಯೊಂದಿಗೆ ಒಂದೊಂದು ರೂಪದಲ್ಲಿ ರಾಸ ಲೀಲೆಯನ್ನಾಡಿದನು. ಆದುದರಿಂದ ಪ್ರತಿಯೊಬ್ಬ ಗೋಪಿಗೆ, ಶ್ರೀಕೃಷ್ಣನು ತನ್ನೊಂದಿಗೇ ಮಾತ್ರ ಇದ್ದಾನೆಂದು ಅನಿಸಿತು. ಗೋಪಿಯರಿಗೆ ಅಹಂಕಾರ ಬಂದಿರುವುದು ಗಮನಕ್ಕೆ ಬರುತ್ತಲೇ, ಅವರೊಂದಿಗಿರುವ ಶ್ರೀಕೃಷ್ಣನ ರೂಪವು ಅದೃಶ್ಯವಾಯಿತು. ಗೋಪಿಯರು ಶ್ರೀಕೃಷ್ಣನನ್ನು ಸಂಪೂರ್ಣ ವೃಂದಾವನದಲ್ಲಿ ಹುಡುಕತೊಡಗಿದರು; ಆದರೆ ಅವರಿಗೆ ಶ್ರೀಕೃಷ್ಣನು ಎಲ್ಲಿಯೂ ಕಾಣಿಸಲಿಲ್ಲ. ಕೊನೆಗೆ ಅವರು ದಣಿದು ಯಮುನಾ ನದಿ ದಡದಲ್ಲಿ ಕುಳಿತು ದುಃಖಿಸತೊಡಗಿದರು ಮತ್ತು ಆರ್ತರಾಗಿ ಶ್ರೀಕೃಷ್ಣನಿಗೆ ಮೊರೆಯಿಡತೊಡಗಿದರು. ಅನಂತರ ಶ್ರೀಕೃಷ್ಣನು ಅವರ ಮೇಲೆ ಕೃಪೆ ತೋರಿದನು ಮತ್ತು ಅವನು ಪುನಃ ಪ್ರತಿಯೊಬ್ಬ ಗೋಪಿಯರೊಂದಿಗೆ ರೂಪವನ್ನು ಧರಿಸಿದನು ಹಾಗೂ ಉಳಿದ ರಾಸಲೀಲೆಯನ್ನು ಪೂರ್ಣಗೊಳಿಸಿದನು.

೬ ಇ. ಗುರುದೇವ ವಿಸೋಬಾ ಖೆಚರ ಇವರ ಕೃಪೆಯಿಂದ ಸಂತ ನಾಮದೇವರ ಗರ್ವಹರಣವಾಗುವುದು : ಒಮ್ಮೆ ಎಲ್ಲ ವಿಠ್ಠಲ ಭಕ್ತ ಸಂತರು, ಸಂತ ಗೊರೊಬಾ (ಗೋರಾ ಕುಂಬಾರ) ಇವರ ಮನೆಯಲ್ಲಿ ಸೇರಿದರು. ಆಗ ‘ಪ್ರತಿಯೊಬ್ಬ ಸಂತರು ಸಾಧನೆಯಲ್ಲಿ ಎಷ್ಟರ ಮಟ್ಟಿಗೆ ಮುಳುಗಿದ್ದಾರೆ ?’, ಎಂದು ನೋಡಲು ಸಂತ ಗೋರಾ ಕುಂಬಾರರು, ಭಟ್ಟಿಯಲ್ಲಿ ಸುಟ್ಟು ಹೊರಗೆ ಬಂದ ಮಡಕೆಯು ಸರಿಯಾಗಿ ಸುಟ್ಟಿದೆಯಲ್ಲ ? ಎಂದು ನೋಡಲು ಅದರ ಮೇಲೆ ಬಡಿಗೆಯಿಂದ ಬಡಿದು ನೋಡುತ್ತಾರೆಯೋ, ಅದೇ ರೀತಿ ಅವರು ಪ್ರತಿಯೊಬ್ಬ ಸಂತರ ತಲೆಯ ಮೇಲೆ ಬಡಿಗೆಯಿಂದ ಬಡಿದು ನೋಡುತ್ತಿದ್ದರು. ಇತರ ಸಂತರ ವಿಷಯದಲ್ಲಿ ಸಂತ ಗೋರೊಬಾ(ಗೋರಾ ಕುಂಬಾರ) ಇವರು ‘ನಿಮ್ಮ ಮಡಕೆ ಗಟ್ಟಿಯಾಗಿವೆ’, ಎಂದು ಹೇಳಿದರು; ಆದರೆ ಸಂತ ನಾಮದೇವರಿಗೆ ತಾನು ನೇರ ವಿಠ್ಠಲನೊಂದಿಗೆ ಮಾತನಾಡುತ್ತೇನೆ, ಎಂಬ ಬಗ್ಗೆ ಸೂಕ್ಷ್ಮ ಅಹಂ ಇದ್ದುದರಿಂದ ಸಂತ ಗೊರೋಬಾರು, ‘ನಿಮ್ಮ ಮಡಕೆ ಅಪಕ್ವ ವಿದೆ’ (ಅರ್ಧ ಬೆಂದಿದೆ) ಎಂದು ಹೇಳಿದರು; ಆಗ ಸಂತ ನಾಮದೇವರಿಗೆ ಬಹಳ ಕೋಪ ಬಂದಿತು. ಅವರು ಕೂಡಲೇ ಅಲ್ಲಿಂದ ಹೊರಟು ನೇರ ಪಂಢರಾಪುರಕ್ಕೆ ವಿಠ್ಠಲನ ದೇವಸ್ಥಾನಕ್ಕೆ ಬಂದರು. ಆಗ ಶ್ರೀ ವಿಠ್ಠಲನು ಅವರಿಗೆ, ”ಸಂತ ಗೊರೊಬಾರ (ಗೋರಾ ಕುಂಬಾರ) ನಿರ್ಣಯ ಯೋಗ್ಯವಿದೆ. ನಿನಗೆ ಭಕ್ತಿಯ ಅಹಂಕಾರ ಬಂದಿದೆ. ಅದನ್ನು ದೂರ ಮಾಡಲು ನೀನು ಔಂಢಾನಾಗನಾಥನ ಶಿವದೇವಸ್ಥಾನಕ್ಕೆ ಹೋಗು”, ಎಂದನು. ಆಗ ಅಲ್ಲಿ ಸಂತ ನಾಮದೇವರ ಭೇಟಿ ಸಂತ ವಿಸೋಬಾ ಖೆಚರ ಇವರೊಂದಿಗೆ ಆಯಿತು ಮತ್ತು ಅವರು ಸಂತ ವಿಸೋಬಾರನ್ನು ತಮ್ಮ ಗುರು ಎಂದು ಒಪ್ಪಿಕೊಂಡರು. ಅನಂತರ ಗುರುದೇವ ವಿಸೋಬಾ ಖೇಚರ ಇವರ ಕೃಪೆಯಿಂದ ಸಂತ ನಾಮದೇವರ ಭಕ್ತಿಯ ಸೂಕ್ಷ್ಮ ಅಹಂಕಾರ ನಾಶವಾಯಿತು.

‘ಹಿಂದೂ ರಾಷ್ಟ್ರ’ವನ್ನು ಮುನ್ನಡೆಸಲು ಈಶ್ವರನು ‘ದೈವೀ ಬಾಲಕ’ರ ಆಯೋಜನೆಯನ್ನು ಮಾಡಿದ್ದಾನೆ. ಈ ದೈವೀ ಜೀವಗಳು ಉಚ್ಚ ಸ್ವರ್ಗಲೋಕದಿಂದ ಮಹರ್ಲೋಕಗಳಂತಹ ಉಚ್ಚ ಲೋಕಗಳಿಂದ ಪೃಥ್ವಿಯಲ್ಲಿ ಜನಿಸಿವೆ ಮತ್ತು ಕೆಲವು ಜೀವಗಳು ಜನಲೋಕದಿಂದ ಈ ಭೂತಲದ ಮೇಲೆ ಜನಿಸಿವೆ. ಸನಾತನವು ಇದುವರೆಗೆ ೧೨೦೦ ಕ್ಕಿಂತಲೂ ಹೆಚ್ಚು ದೈವೀ ಜೀವಗಳನ್ನು ಗುರುತಿಸಿದೆ. ಈ ಬಾಲಸಾಧಕರ ಆಧ್ಯಾತ್ಮಿಕ ಮಟ್ಟವು

ಶೇ. ೫೦ ಕ್ಕಿಂತಲೂ ಹೆಚ್ಚಿರುತ್ತದೆ. (ದೈವೀ ಬಾಲಕರ ವಯಸ್ಸಿಗನುಸಾರ ಅವರ ‘ಬಾಲಕರ ಗುಂಪು – ಜನಿಸಿದಾಗಿನಿಂದ ೫ ವರ್ಷಗಳು’, ‘ಕುಮಾರ ವಯಸ್ಸಿನ ಗುಂಪು – ೬ ರಿಂದ ೧೨ ವರ್ಷಗಳು ಮತ್ತು ‘ಕಿಶೋರ ವಯಸ್ಸಿನ ಗುಂಪು – ೧೩ ರಿಂದ ೧೮ ವರ್ಷಗಳು’, ಹೀಗೆ ಗುಂಪು ಮಾಡಲಾಗಿದೆ.)

‘ಇಂತಹ ದೈವೀ ಜೀವಗಳ ಬಗ್ಗೆ ಮುಂದಿನ ಆಧ್ಯಾತ್ಮಿಕ ಪ್ರವಾಸದ ಬಗ್ಗೆ ಸಂಶೋಧನೆ ಮಾಡಲು ಅವರಲ್ಲಾಗುವ ಆಧ್ಯಾತ್ಮಿಕ ಮತ್ತು ಮಾನಸಿಕ ಬದಲಾವಣೆಗಳ ನೋಂದಣಿ ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿ ದೈವೀ ಬಾಲಕರ ಪಾಲಕರು ಪ್ರತಿವರ್ಷ ತಮ್ಮ ಮಗನ ಹುಟ್ಟುಹಬ್ಬಕ್ಕೆ ಒಂದು ತಿಂಗಳ ಮೊದಲು ‘ತಮ್ಮ ಮಗನಲ್ಲಿ ವರ್ಷವಿಡಿ ಯಾವ ಬದಲಾವಣೆಗಳಾಗಿವೆ ?’, ಹಾಗೆಯೇ ‘ಅವನಲ್ಲಿ ಬೇರೆ ಏನಾದರೂ ಗುಣವೈಶಿಷ್ಟ್ಯಗಳು ಅರಿವಾಗುತ್ತಿವೆಯೇ ?’, ಎಂಬುದರ ಬಗ್ಗೆ ಜಿಲ್ಲೆಯಲ್ಲಿನ ‘ಜಿಲ್ಲಾ ಸಮನ್ವಯಕರಿಗೆ’ ಬರೆದು ಕಳುಹಿಸಬೇಕು. ಈ ಲೇಖನಗಳನ್ನು ಪಾಲಕರು ರಾಮನಾಥಿ, ಗೋವಾದಲ್ಲಿನ ಸಂಕಲನ ವಿಭಾಗಕ್ಕೆ ನೇರವಾಗಿ ಕಳುಹಿಸಬಾರದು.

೧. ಪಾಲಕರು ದೈವೀ ಬಾಲಕರಲ್ಲಿನ ಬದಲಾವಣೆ ಮತ್ತು ಗುಣವೈಶಿಷ್ಟ್ಯಗಳನ್ನು ಮುಂದಿನ ಅಂಶಗಳ ಆಧಾರದಲ್ಲಿ ಬರೆದು ಕಳುಹಿಸಬೇಕು.

ಅ. ವರ್ಷವಿಡಿ ಬಾಲಕನಲ್ಲಿ ಹೆಚ್ಚಾದ ಗುಣಗಳು ಅಥವಾ ಕಡಿಮೆಯಾದ ಗುಣಗಳು ಮತ್ತು ಸ್ವಭಾವದೋಷಗಳನ್ನು ತೋರಿಸುವ ಪ್ರಸಂಗಗಳು

ಆ. ಮಕ್ಕಳಿಗಾಗುತ್ತಿದ್ದ ಆಧ್ಯಾತ್ಮಿಕ ತೊಂದರೆಗಳಲ್ಲಾದ ಬದಲಾವಣೆ (ಈ ಮೊದಲು ತೊಂದರೆ ಇತ್ತು. ಈಗ ಅದು ಕಡಿಮೆ ಆಗಿದೆ ಅಥವಾ ಹೆಚ್ಚಾಗಿದೆ. ತೊಂದರೆ ಕಡಿಮೆಯಾಗಿದ್ದರೆ ಅಧ್ಯಾತ್ಮಿಕ ಸ್ತರದಲ್ಲಿ ಯಾವ ಉಪಾಯಗಳನ್ನು ಮಾಡಲಾಯಿತು ?)

ಇ. ಮಕ್ಕಳಲ್ಲಿ ಸಾಧನೆಯ ಸೆಳೆತ ಹೆಚ್ಚಾದುದನ್ನು ಅಥವಾ ಕಡಿಮೆಯಾದುದನ್ನು ತೋರಿಸುವ ಪ್ರಸಂಗಗಳು

ಈ. ಪ್ರತಿದಿನ ಮಕ್ಕಳಿಂದಾಗುವ ಸಾಧನೆಯ ಪ್ರಯತ್ನಗಳು, ಉದಾ. ನಾಮಜಪ, ಪ್ರಾರ್ಥನೆ, ಕೃತಜ್ಞತೆ, ಭಾವವೃದ್ಧಿಗಾಗಿ ಮಾಡಲಾಗುವ ಪ್ರಯತ್ನಗಳು, ತಪ್ಪುಗಳ ನಿರೀಕ್ಷಣೆ ಮತ್ತು ತಖ್ತೆ ಬರೆಯುವುದು, ಕ್ಷಮಾಯಾಚನೆ ಇತ್ಯಾದಿ.

ಉ. ಇತರರ ತಪ್ಪುಗಳ ನಿರೀಕ್ಷಣೆ, ಹಾಗೆಯೇ ಅಯೋಗ್ಯ ಕೃತಿಗಳನ್ನು ತಡೆಯಲು ಮಕ್ಕಳಿಂದಾದ ಪ್ರಯತ್ನಗಳು

ಊ. ಮನೆಕೆಲಸಗಳಲ್ಲಿ ಕುಟುಂಬದವರಿಗೆ ಅಥವಾ ಸೇವೆಯಲ್ಲಿ ಸಹಾಯ ಮಾಡುವ ವೃತ್ತಿ. ಜಿಲ್ಲೆ ಅಥವಾ ಕೇಂದ್ರದಲ್ಲಿ ಸಮಷ್ಟಿ ಸೇವೆಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ

ಎ. ಮಕ್ಕಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬಗೆಗಿರುವ ಭಾವ ಅಥವಾ ಶ್ರದ್ಧೆಯನ್ನು ವ್ಯಕ್ತಗೊಳಿಸುವ ಕೆಲವು ಪ್ರಸಂಗಗಳು

ಐ. ಮಕ್ಕಳಿಂದಾಗುವ ಧರ್ಮಾಚರಣೆಯ ಕೃತಿಗಳು, ಹಾಗೆಯೇ ಧರ್ಮಾಭಿಮಾನವನ್ನು ತೋರಿಸುವ ಪ್ರಸಂಗಗಳು

ಓ. ಮಕ್ಕಳಿಗೆ ಬಂದ ವೈಶಿಷ್ಟ್ಯಪೂರ್ಣ ಅನುಭೂತಿಗಳು

೨. ಪಾಲಕರು ‘ತಮ್ಮ ಮಕ್ಕಳ ಆಧ್ಯಾತ್ಮಿಕ ಪ್ರಗತಿಗಾಗಿ ತಾವು ಸ್ವತಃ ಯಾವ ಪ್ರಯತ್ನಗಳನ್ನು ಮಾಡಿದ್ದೀರಿ ?’ ‘ಪ್ರಯತ್ನಗಳಲ್ಲಿ ಎಲ್ಲಿ ಕಡಿಮೆ ಬಿದ್ದೆವು’, ಈ ವಿಷಯದ ಬಗ್ಗೆಯೂ ‘ಜಿಲ್ಲಾ ಸಮನ್ವಯಕರ’ ಬಳಿ ಬರೆದು ಕೊಡಬೇಕು.

೩. ದೈವೀ ಬಾಲಕರು ೧೮ ವರ್ಷದವರಾಗುವ ವರೆಗೆ ಈ ರೀತಿಯ ಬರವಣಿಗೆಯನ್ನು ಪ್ರತಿವರ್ಷ ಬರೆದು ಕಳುಹಿಸಬೇಕು.

೪. ಛಾಯಾಚಿತ್ರಗಳನ್ನು ಕಳುಹಿಸುವುದು : ಪಾಲಕರು ಈ ಅಂಶಗಳೊಂದಿಗೆ ಬಾಲಕನ ಪ್ರಸ್ತುತ (ಕಳೆದ ೨ ತಿಂಗಳಳೊಳಗಿನ) ಛಾಯಾಚಿತ್ರಗಳನ್ನು ಕಳುಹಿಸಬೇಕು. ಸಾತ್ತ್ವಿಕ ಉಡುಪುಗಳನ್ನು ಧರಿಸಿದ ಮತ್ತು ನಗುಮುಖದಿಂದಿರುವ ಛಾಯಾಚಿತ್ರಗಳಿರಬೇಕು. ಸಂಕ್ಷಿಪ್ತದಲ್ಲಿ, ಈ ಬರವಣಿಗೆ ಎಂದರೆ ಆ ದೈವೀ ಜೀವಗಳ ಸಾಧನೆಯ ಸೂಚ್ಯಂಕ(ಗ್ರಾಫ್‌)ವಾಗಿರಲಿದೆ ! ಅದರಿಂದ ‘ಅವನ ಆಧ್ಯಾತ್ಮಿಕ ಪ್ರಗತಿಯಲ್ಲಾಗುವ ಏರಿಳಿತ ಮತ್ತು ಅದಕ್ಕೆ ಕಾರಣ
ವಾದ ಅಂಶಗಳನ್ನು’ ಅಧ್ಯಯನ ಮಾಡಲು ಸಾಧ್ಯವಾಗುವುದು.

ಟಿಪ್ಪಣಿ : ಈ ಬರವಣಿಗೆಯ ಸಂಗ್ರಹವನ್ನು ಕೇವಲ ಸಂಶೋಧನೆಗಾಗಿ (ಅಧ್ಯಯನಕ್ಕಾಗಿ) ಮಾಡುತ್ತಿರುವುದರಿಂದ ಈ ಎಲ್ಲ ಬರವಣಿಗೆಗಳನ್ನು ಪ್ರತಿವರ್ಷ ಆ ಬಾಲಕನ ಹುಟ್ಟುಹಬ್ಬದ ದಿನದಂದು ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಲಾಗುವುದಿಲ್ಲ. ಅದರಲ್ಲಿನ ಕೆಲವು ಅಂಶಗಳು ವೈಶಿಷ್ಟ್ಯಪೂರ್ಣವಾಗಿದ್ದರೆ ಅವುಗಳನ್ನು ಅವಶ್ಯವಾಗಿ ಪ್ರಕಟಿಸಲಾಗುವುದು !’ – ಸಂಕಲನ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೭.೨೦೨೩)

ಬಾಲಸಾಧಕರ ಪಾಲಕರಿಗೆ, ಜಿಲ್ಲಾ ಸಮನ್ವಯಕರು ಮತ್ತು ಜಿಲ್ಲಾಸೇವಕರಿಗೆ ಸೂಚನೆ

ಪಾಲಕರು ದೈವೀ ಬಾಲಕರಲ್ಲಿನ ಬದಲಾವಣೆಗಳನ್ನು ಆಯಾ ಸಮಯದಲ್ಲಿ ಅಧ್ಯಯನ ಮಾಡಲು ಹಾಗೆಯೇ ಜಿಲ್ಲಾ ಸಮನ್ವಯಕರು ಮತ್ತು ಜಿಲ್ಲಾಸೇವಕರು ‘ಮೇಲಿನ ಅಂಶಗಳಿಗನುಸಾರ ಬಾಲಸಾಧಕರ ಬಗ್ಗೆ ಲೇಖನಗಳು ಬರುತ್ತವೆಯಲ್ಲ ?’, ಎಂಬುದನ್ನು ನೋಡಲು ಇಲ್ಲಿ ನೀಡಿದ ಎಲ್ಲ ಅಂಶಗಳನ್ನು ತಮ್ಮ ಸಂಗ್ರಹದಲ್ಲಿಡಬೇಕು.