ಪಶ್ಚಿಮ ಚಂಪಾರಣ್ (ಬಿಹಾರ) ‘ಸೀತಾರಾಮ್ ಶಾಲೆ’ಯಲ್ಲಿ ಮುಸ್ಲಿಂ ಯುವಕರಿಂದ ಇಸ್ಲಾಂನ ಧ್ವಜಾರೋಹಣ !

ಪಾಟಲಿಪುತ್ರ (ಬಿಹಾರ) – ರಾಜ್ಯದ ಪಶ್ಚಿಮ ಚಂಪಾರಣ ಜಿಲ್ಲೆಯ ಮಜೌಲಿಯಾ ಪ್ರದೇಶದ ‘ಸೀತಾರಾಮ ಶಾಲೆಯಲ್ಲಿ’ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ಕೆಲವು ಮುಸ್ಲಿಂ ಯುವಕರು ಇಸ್ಲಾಂ ಧ್ವಜವನ್ನು ಕೂಡ ಹಾರಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಆಗಸ್ಟ 15 ರಂದು ಬೆಳಗ್ಗೆ ಶಾಲೆಯಲ್ಲಿ ಧ್ವಜಾರೋಹಣ ನಡೆಯುತ್ತಿದ್ದಾಗ ಕೆಲವು ಮುಸ್ಲಿಂ ಯುವಕರು ಶಾಲಾ ಆವರಣಕ್ಕೆ ನುಗ್ಗಿ ಇಸ್ಲಾಮಿಕ್ ಧ್ವಜವನ್ನು ಹಾರಿಸಿದರು. ಅಲ್ಲದೇ ಮುಸ್ಲಿಂ ಯುವಕರು ಕೆಲವು ಆಕ್ಷೇಪಾರ್ಹ ಘೋಷಣೆಗಳು ಕೂಗಿದರು. ಈ ವೇಳೆ ಶಿಕ್ಷಕರು ಹಾಗೂ ಸ್ಥಳೀಯರು ವಿರೋಧಿಸಿದರು. ಪೊಲೀಸರಿಗೆ ಮಾಹಿತಿ ಸಿಗುತ್ತಲೇ ಅವರು ಸ್ಥಳಕ್ಕೆ ತಲುಪಿದರು; ಆದರೆ ಅದಕ್ಕೂ ಮುನ್ನ ಮುಸ್ಲಿಂ ಯುವಕರು ಅಲ್ಲಿಂದ ಓಡಿ ಹೋಗಿದ್ದರು. (ಅಂತಹ ಸಂದರ್ಭದಲ್ಲಿ ಶಿಕ್ಷಕರು, ಸ್ಥಳೀಯರು ಮತ್ತು ವಿದ್ಯಾರ್ಥಿಗಳು ವೀಕ್ಷಕರ ಪಾತ್ರವನ್ನು ವಹಿಸಿದ್ದರೇ? ಹಿಂದೂಗಳ ಇಂತಹ ಹತಾಶ ಮನಃಸ್ಥಿತಿಯಿಂದಲೇ ಇಂದು ಮತಾಂಧರು ಉದ್ಧಟತನದಿಂದ ನಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ತಿಳಿಯಿರಿ ! – ಸಂಪಾದಕರು) ಈ ಸಮಯದಲ್ಲಿ, ಆ ಯುವಕರಲ್ಲಿ ಹನ್ನೊಂದನೇ ತರಗತಿಯಲ್ಲಿ ಓದುತ್ತಿರುವ ಶಾಹಿದ್ ಹಸನ್ ಎಂಬ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಶಾಲೆಯ ಪ್ರಾಂಶುಪಾಲ ಅಶೋಕ ಕುಮಾರ ಅವರು ಮುಸ್ಲಿಂ ಯುವಕರ ಈ ಕೃತ್ಯವನ್ನು ನಿರ್ಲಕ್ಷಿಸಿ ವಿದ್ಯಾರ್ಥಿಗಳಿಗೆ ತಿನಿಸು ನೀಡುವುದರಲ್ಲಿ ಮಗ್ನರಾಗಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ.

ಕೇರಳದಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಮಸೀದಿಯ ಧರ್ಮಗುರುಗಳ ನಡುವೆ ವಾಗ್ವಾದ !

ಇನ್ನೊಂದು ಪ್ರಕರಣದಲ್ಲಿ, ಕೇರಳದ ಕಾಸರಗೋಡು ಜಿಲ್ಲೆಯ ‘ಜಮಾತ್ ಮಸೀದಿ ಸಮಿತಿ’ ಪ್ರದೇಶದಲ್ಲಿ ಧ್ವಜಾರೋಹಣ ಮಾಡುವಾಗ ಅಲ್ಲಿದ್ದ ಮುಸ್ಲಿಂ ಮುಖಂಡರ ನಡುವೆ ವಾಗ್ವಾದ ನಡೆದಿದೆ. ಆದ್ದರಿಂದ ರಾಷ್ಟ್ರಧ್ವಜದ ಅವಮಾನವಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಈ ಸಂಬಂಧದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ.

 

ಸಂಪಾದಕೀಯ ನಿಲುವು

  • ಸೀತಾರಾಮ ಹೆಸರಿನ ಶಾಲೆಯಲ್ಲಿ ಇಂತಹ ಕೃತ್ಯ ನಡೆಯಲು ಅವಕಾಶ ನೀಡುವುದು ಇದು ಧರ್ಮಾಭಿಮಾನ ಶೂನ್ಯ ಹಿಂದೂಗಳಿಗೆ ಲಜ್ಜಾಸ್ಪದ !
  • ಮತಾಂಧ ಮುಸಲ್ಮಾನರಿಗೆ ‘ರಾಷ್ಟ್ರದ ಬಗ್ಗೆ ಬೆಲೆಯೇ ಇಲ್ಲ, ಅವರಿಗೆ ಇಸ್ಲಾಂ ಧರ್ಮವೇ ಸರ್ವಸ್ವ’ ಆಗಿರುತ್ತದೆ’, ಎನ್ನುವುದು ಈ ಘಟನೆಯಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಸರಕಾರ ಇಂತಹವರಿಗೆ ಸರಿದಾರಿಗೆ ತರಲು ಏನು ಕ್ರಮ ಕೈಕೊಳ್ಳಲಿದೆ ?