ಉದಯಪುರ (ರಾಜಸ್ತಾನ) ದಲ್ಲಿ ಶ್ರೀ ರಾಜಪೂತ ಕರಣಿ ಸೇನೆಯ ಪ್ರದೇಶಾಧ್ಯಕ್ಷ ಭವರಸಿಂಹ ಇವರ ಮೇಲೆ ಗುಂಡಿನ ದಾಳಿ!

ಉದಯಪುರ (ರಾಜಸ್ಥಾನ) – ಇಲ್ಲಿ ಆಗಸ್ಟ್ 13 ರಂದು ಶ್ರೀ ರಜಪೂತ ಕರಣಿ ಸೇನೆ ಈ ಹಿಂದುತ್ವನಿಷ್ಠ ಸಂಘಟನೆಯ ಪ್ರದೇಶಾಧ್ಯಕ್ಷ ಭವರ ಸಿಂಹ ಇವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಸಂಘಟನೆಯ ಸಭೆ ನಡೆಯುತ್ತಿದ್ದಾಗ ಒಬ್ಬ ಯುವಕನು ಗುಂಡಿನ ದಾಳಿಮಾಡಿದ್ದಾನೆ. ಈ ದಾಳಿಯಲ್ಲಿ ಗುಂಡು ಸಿಂಹರವರ ಬೆನ್ನುಮೂಳೆಗೆ ತಾಗಿದೆ ಎಂದು ಹೇಳಲಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಕರಣಿ ಸೇನೆಯ ಕಾರ್ಯಕರ್ತರು ಸಂಬಂಧಿಸಿದ ಯುವಕನನ್ನು ಹಿಡಿದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ದಾಳಿಯ ಹಿಂದಿನ ಕಾರಣ ಇದುವರೆಗೂ ತಿಳಿಯಲಿಲ್ಲ.