
ಕೆಲವರಿಗೆ ಬೆಳಗ್ಗೆ ಏಳುತ್ತಲೇ ಚಹಾದ ಜೊತೆ ಜೊತೆ ಬಿಸ್ಕತ್ತು ತಿನ್ನುವ ಅಭ್ಯಾಸವಿರುತ್ತದೆ. ಒಂದು ವೇಳೆ ಬಿಸ್ಕತ್ ಇಲ್ಲದೇ ಹೋದರೂ ಕಡಿಮೆಪಕ್ಷ ಚಹಾ ಅಂತೂ ಬೇಕೆ ಬೇಕು ಹೀಗಿರುತ್ತದೆ. ಒಮ್ಮೆ ಒಂದು ನಿರ್ದಿಷ್ಟ ಸಮಯದಲ್ಲಿ ತಿನ್ನುವ ಅಭ್ಯಾಸ ಉಂಟಾದರೆ, ಪ್ರತಿದಿನ ಆ ಸಮಯದಲ್ಲಿ ಹಸಿವಾಗುತ್ತದೆ; ಆದರೆ ಈ ಹಸಿವು ‘ನಿಜವಾದ ಹಸಿವು’ ಆಗಿರುವುದಿಲ್ಲ.
ಬೆಳಗ್ಗೆ ಏನಾದರೂ ತಿನ್ನುವ ಮೊದಲು ಹೊಟ್ಟೆ ಸ್ವಚ್ಛವಾಗಿರಬೇಕು, ದೇಹ ಹಗುರವಾಗಿರಬೇಕು, ಹಸಿವಾಗಬೇಕು, ಈ ಮೂರೂ ಲಕ್ಷಣಗಳಿರಬೇಕಾಗುತ್ತದೆ. ಈ ಮೂರು ಲಕ್ಷಣಗಳು ಕಾಣಿಸಿಕೊಂಡರೆ, ತಿನ್ನಲು ಇದು ಸರಿಯಾದ ಸಮಯ ಎಂದು ತಿಳಿಯಬೇಕು. ಅಂತಹ ಲಕ್ಷಣಗಳು ಕಾಣಿಸಿಕೊಂಡಾಗ, ಚಹಾದೊಂದಿಗೆ ಬಿಸ್ಕತ್ತುಗಳನ್ನು ತಿನ್ನುವ ಬದಲು, ನೀವು ರವೆಯ ಉಪ್ಪಿಟ್ಟು, ಶಿರಾ, ಚಪಾತಿ – ಪಲ್ಯ, ರೊಟ್ಟಿ ಇಂತಹ ಶರೀರಕ್ಕೆ ಪೂರಕವಾದಂತಹ ಪದಾರ್ಥಗಳನ್ನು ತಿನ್ನಬೇಕು. ಚಹಾ, ಬಿಸ್ಕತ್ ಸೇವನೆಯಿಂದ ದೇಹಕ್ಕೆ ಏನೂ ಪ್ರಯೋಜನವಾಗದ ಕಾರಣ ಅದನ್ನು ತಿನ್ನದಿರುವುದು ಒಳಿತು. – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (23.7.2023)
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಮನುಷ್ಯ, ಮನಸ್ಸು ಹಾಗೂ ಆಹಾರ
ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?