ಸೋನಭದ್ರ (ಉತ್ತರ ಪ್ರದೇಶ) ಹನುಮಾನ್‌ ದೇವಸ್ಥಾನದ ಬಳಿ ಗೋಮಾಂಸ ಎಸೆತ !

ಸೋನಭದ್ರ (ಉತ್ತರ ಪ್ರದೇಶ) – ಇಲ್ಲಿನ ರಾಬರ್ಟ್‌ ಗಂಜ್‌ ಪ್ರದೇಶದ ತರಕಾರಿ ಮಾರುಕಟ್ಟೆ ಬಳಿಯ ಹನುಮಾನ ದೇವಸ್ಥಾನದ ಅಕ್ಕಪಕ್ಕದಲ್ಲಿ ಗೋಮಾಂಸ ಪತ್ತೆಯಾದನಂತರ ಉದ್ವಿಗ್ನತೆ ಉಂಟಾಗಿದೆ. ಪೋಲೀಸರು ಸ್ಥಳಕ್ಕಾಗಮಿಸಿ ಗೋಮಾಂಸದ ತುಂಡುಗಳನ್ನು ತೆಗೆದು ಸ್ವಚ್ಚಗೊಳೀಸಿ ಪರೀಸ್ಥಿತಿಯನ್ನು ಹತೋಟಿಗೆ ತಂದರು. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತಿದ್ದಾರೆ. ಇದಕ್ಕಾಗಿ ಸಿಸಿಟೀವಿ ದೃಶ್ಯಾವಳಿಗಳ ನೆರವು ಪಡೆಯಲಾಗುತ್ತಿದೆ.

ಯಾವುದೇ ಪ್ರಾಣಿಯ ಮಾಂಸವನ್ನು ಇತರ ಪಂಗಡಗಳ ಪ್ರಾರ್ಥನಾ ಸ್ಥಳಗಳಲ್ಲಿ ಎಂದಿಗೂ ಎಸೆಯಲಾಗುವುದಿಲ್ಲ; ಆದರೆ ಹಿಂದೂ ದೇವಾಲಯಗಳ ಸ್ಥಳಗಳಲ್ಲಿ ಗೋಮಾಂಸ ಎಸೆಯುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ, ಈ ಬಗ್ಗೆ ಜಾತ್ಯತೀತರು ಎಂದಿಗೂ ಬಾಯಿ ತೆರೆಯುವುದಿಲ್ಲ !