ಮುಜಫ್ಫರನಗರದ ಮಸೀದಿಯ ಹೊರಗಿನ ರಸ್ತೆಯಲ್ಲಿ ೨೫ ಮುಸಲ್ಮಾನರಿಂದ ನಮಾಜ !

ದೂರು ದಾಖಲು, ಇಮಾಂನ ಬಂಧನ !

(ಇಮಾಂ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಮುಖ್ಯಸ್ಥ)

ಮುಜಫ್ಫರನಗರ (ಉತ್ತರಪ್ರದೇಶ) – ಇಲ್ಲಿಯರ ರಹಮಾನ ಮಸೀದಿಯ ಹೊರಗಿನ ರಸ್ತೆಯಲ್ಲಿ ೨೫ ಮುಸಲ್ಮಾನರು ಸಮಾಜ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಪೊಲೀಸರು ಈ ಪ್ರಕರಣದ ದೂರು ದಾಖಲಿಸಿದ್ದಾರೆ. ಮಸೀದಿಯ ಇಮಾಂ ಮೌಲಾನಾ (ಇಸ್ಲಾಮಿ ಅಭ್ಯಾಸಕ) ನಸೀಮ್ ಇವನನ್ನು ಬಂಧಿಸಿದ್ದಾರೆ. ಪೊಲೀಸ ಆಯುಕ್ತ ಆಯುಶ್ ವಿಕ್ರಂ ಸಿಂಹ ಇವರು, ಭಾರತೀಯ ದಂಡ ಸಂಹಿತೆಯ ಕಲಂ ೩೪೧ ರ ಅಡಿಯಲ್ಲಿ ದೂರು ದಾಖಲಿಸಿದ್ದು ಇತರ ಮುಸಲ್ಮಾನರನ್ನು ವಿಡಿಯೋದ ಮೂಲಕ ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ರಸ್ತೆಯಲ್ಲಿ ನಮಾಜ್ ಗೆ ವಿರೋಧ ಮಾಡಿದ ನಂತರ ಅನೇಕ ಹಿಂದುತ್ವನಿಷ್ಟ ಸಂಘಟನೆಗಳಿಂದ ರಸ್ತೆಯ ಮೇಲೆ ಹನುಮಾನ ಚಾಲಿಸಾ ಮತ್ತು ಸುಂದರಕಾಂಡದ ಪಠಣೆ ಮಾಡಲು ಆರಂಭಿಸಿದ್ದರು. ಇದರಿಂದ ಉತ್ತರ ಪ್ರದೇಶ ಸಹಿತ ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ರಸ್ತೆಯಲ್ಲಿ ನಮಾಜ ನಿಷೇಧಿಸಲಾಗಿತ್ತು.

ಸಂಪಾದಕೀಯ ನಿಲುವು

ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂಗಳನ್ನು ಹೀಯಾಳಿಸುವ ಪ್ರಗತಿ(ಅಧೋಗತಿ)ಪರರು ರಸ್ತೆಯಲ್ಲಿ ನಮಾಜನ ವಿರುದ್ಧ ಚಕಾರವೂ ಎತ್ತುವುದಿಲ್ಲ ಇದನ್ನು ತಿಳಿದುಕೊಳ್ಳಿ !