
ಜಕಾರ್ತ (ಇಂಡೋನೇಷಿಯಾ) – ಭಾರತದ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ ಇವರು ತಮ್ಮ ಇಂಡೋನೇಷಿಯಾದ ಪ್ರವಾಸದಲ್ಲಿ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಇವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಜೈ ಶಂಕರ ಇವರು ಕೆನಡಾದಲ್ಲಿನ ಭಾರತೀಯ ರಾಯಭಾರಿಗಳ ಸಂರಕ್ಷಣೆಯ ಕುರಿತಾದ ಅಂಶದ ಕಡೆಗೆ ಜೋಲಿ ಇವರ ಗಮನ ಸೆಳೆದರು. ಹಾಗೂ ಹಿಂಸಾತ್ಮಕ ಚಟುವಟಿಕೆ ನಡೆಸುವವರಿಗೆ ಪ್ರಚೋದನೆ ನೀಡುವ ಶಕ್ತಿಗಳನ್ನು ಎದುರಿಸುವ ಅಂಶಗಳ ಬಗ್ಗೆ ಒತ್ತಿ ಹೇಳಿದರು. ಜೈಶಂಕರ ಇವರು ಈ ಭೇಟಿಯ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದರು. ಕಳೆದ ಕೆಲವು ಸಮಯದಿಂದ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಂದ ಭಾರತ ವಿರೋಧಿ ಚಟುವಟಿಕೆಗಳು ಹೆಚ್ಚಾಗಿವೆ. ಇದರ ಹಿನ್ನೆಲೆಯಲ್ಲಿ ಜೈಶಂಕರ ಇವರು ಮೇಲಿನ ಹೇಳಿಕೆ ನೀಡಿದರು.
Canada, UK: safety of Indian diplomats, Khalistani actions
Thailand: Bimstec
EU: Ukraine, Myanmar pic.twitter.com/VxbzPu0Pqf— Sidhant Sibal (@sidhant) July 15, 2023

ಜಕಾರ್ತದ ಪ್ರವಾಸದಲ್ಲಿರುವ ಜೈಶಂಕರ ಇವರು ಚೀನಿ ಕಮಿನಿಸ್ಟ್ ಪಾರ್ಟಿಯ ಕೇಂದ್ರ ವಿದೇಶ ಆಯೋಗ ಕಾರ್ಯಾಲಯದ ನಿರ್ದೇಶಕ ವಾಂಗ ಯಿ ಇವರನ್ನು ಕೂಡ ಭೇಟಿ ಮಾಡಿದರು. ಆ ಸಮಯದಲ್ಲಿ ಇಬ್ಬರೂ ನಾಯಕರಲ್ಲಿ ಭಾರತ-ಚೀನಾ ಗಡಿಯ ಕ್ಷೇತ್ರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸುವ ಬಾಕಿ ಉಳಿದಿರುವ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.
EAM Jaishankar’s key meetings in Jakarta on the sidelines of Asean meetings:
Russia: Trade deficit, Ukraine conflict
US: PM Modi’s US visit, Ukraine, Myanmar
China: Border issues, aggressive actions by Beijing
Singapore: Fintech pic.twitter.com/s41WgObrkm— Sidhant Sibal (@sidhant) July 15, 2023
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಗತ್ಯ!
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’
ನ್ಯೂಯಾರ್ಕ್ (ಅಮೇರಿಕ): ಏಷ್ಯನ್ ಮೂಲದ ವ್ಯಕ್ತಿಗಳ ಮೇಲೆ ಚಾಕು ದಾಳಿ!
ಸಿಲಿಗುರಿ ಕಾರಿಡಾರ್ ಈಗ ‘ಚಿಕನ್ ನೆಕ್’ ಆಗಿ ಉಳಿದಿಲ್ಲ, ಬದಲಿಗೆ ‘ಎಲಿಫೆಂಟ್ಸ್ ಟ್ರಂಕ್’ ಆಗಿದೆ!
ಅಮೆರಿಕದಿಂದ ಭಾರತದ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಆಮದು ಸುಂಕ : Import Duty on India
ನಾಗರಿಕ ಅಣು ಒಪ್ಪಂದಕ್ಕಾಗಿ ಸೌದಿ ಅರೇಬಿಯಾ ಇಸ್ರೇಲ್ ಅನ್ನು ಒಪ್ಪಿಗೆ ನೀಡಬೇಕು ! : Recognize Israel