
ಜಕಾರ್ತ (ಇಂಡೋನೇಷಿಯಾ) – ಭಾರತದ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ ಇವರು ತಮ್ಮ ಇಂಡೋನೇಷಿಯಾದ ಪ್ರವಾಸದಲ್ಲಿ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಇವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಜೈ ಶಂಕರ ಇವರು ಕೆನಡಾದಲ್ಲಿನ ಭಾರತೀಯ ರಾಯಭಾರಿಗಳ ಸಂರಕ್ಷಣೆಯ ಕುರಿತಾದ ಅಂಶದ ಕಡೆಗೆ ಜೋಲಿ ಇವರ ಗಮನ ಸೆಳೆದರು. ಹಾಗೂ ಹಿಂಸಾತ್ಮಕ ಚಟುವಟಿಕೆ ನಡೆಸುವವರಿಗೆ ಪ್ರಚೋದನೆ ನೀಡುವ ಶಕ್ತಿಗಳನ್ನು ಎದುರಿಸುವ ಅಂಶಗಳ ಬಗ್ಗೆ ಒತ್ತಿ ಹೇಳಿದರು. ಜೈಶಂಕರ ಇವರು ಈ ಭೇಟಿಯ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದರು. ಕಳೆದ ಕೆಲವು ಸಮಯದಿಂದ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಂದ ಭಾರತ ವಿರೋಧಿ ಚಟುವಟಿಕೆಗಳು ಹೆಚ್ಚಾಗಿವೆ. ಇದರ ಹಿನ್ನೆಲೆಯಲ್ಲಿ ಜೈಶಂಕರ ಇವರು ಮೇಲಿನ ಹೇಳಿಕೆ ನೀಡಿದರು.
Canada, UK: safety of Indian diplomats, Khalistani actions
Thailand: Bimstec
EU: Ukraine, Myanmar pic.twitter.com/VxbzPu0Pqf— Sidhant Sibal (@sidhant) July 15, 2023

ಜಕಾರ್ತದ ಪ್ರವಾಸದಲ್ಲಿರುವ ಜೈಶಂಕರ ಇವರು ಚೀನಿ ಕಮಿನಿಸ್ಟ್ ಪಾರ್ಟಿಯ ಕೇಂದ್ರ ವಿದೇಶ ಆಯೋಗ ಕಾರ್ಯಾಲಯದ ನಿರ್ದೇಶಕ ವಾಂಗ ಯಿ ಇವರನ್ನು ಕೂಡ ಭೇಟಿ ಮಾಡಿದರು. ಆ ಸಮಯದಲ್ಲಿ ಇಬ್ಬರೂ ನಾಯಕರಲ್ಲಿ ಭಾರತ-ಚೀನಾ ಗಡಿಯ ಕ್ಷೇತ್ರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸುವ ಬಾಕಿ ಉಳಿದಿರುವ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.
EAM Jaishankar’s key meetings in Jakarta on the sidelines of Asean meetings:
Russia: Trade deficit, Ukraine conflict
US: PM Modi’s US visit, Ukraine, Myanmar
China: Border issues, aggressive actions by Beijing
Singapore: Fintech pic.twitter.com/s41WgObrkm— Sidhant Sibal (@sidhant) July 15, 2023
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation