
ಜಕಾರ್ತ (ಇಂಡೋನೇಷಿಯಾ) – ಭಾರತದ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ ಇವರು ತಮ್ಮ ಇಂಡೋನೇಷಿಯಾದ ಪ್ರವಾಸದಲ್ಲಿ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಇವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಜೈ ಶಂಕರ ಇವರು ಕೆನಡಾದಲ್ಲಿನ ಭಾರತೀಯ ರಾಯಭಾರಿಗಳ ಸಂರಕ್ಷಣೆಯ ಕುರಿತಾದ ಅಂಶದ ಕಡೆಗೆ ಜೋಲಿ ಇವರ ಗಮನ ಸೆಳೆದರು. ಹಾಗೂ ಹಿಂಸಾತ್ಮಕ ಚಟುವಟಿಕೆ ನಡೆಸುವವರಿಗೆ ಪ್ರಚೋದನೆ ನೀಡುವ ಶಕ್ತಿಗಳನ್ನು ಎದುರಿಸುವ ಅಂಶಗಳ ಬಗ್ಗೆ ಒತ್ತಿ ಹೇಳಿದರು. ಜೈಶಂಕರ ಇವರು ಈ ಭೇಟಿಯ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದರು. ಕಳೆದ ಕೆಲವು ಸಮಯದಿಂದ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಂದ ಭಾರತ ವಿರೋಧಿ ಚಟುವಟಿಕೆಗಳು ಹೆಚ್ಚಾಗಿವೆ. ಇದರ ಹಿನ್ನೆಲೆಯಲ್ಲಿ ಜೈಶಂಕರ ಇವರು ಮೇಲಿನ ಹೇಳಿಕೆ ನೀಡಿದರು.
Canada, UK: safety of Indian diplomats, Khalistani actions
Thailand: Bimstec
EU: Ukraine, Myanmar pic.twitter.com/VxbzPu0Pqf— Sidhant Sibal (@sidhant) July 15, 2023

ಜಕಾರ್ತದ ಪ್ರವಾಸದಲ್ಲಿರುವ ಜೈಶಂಕರ ಇವರು ಚೀನಿ ಕಮಿನಿಸ್ಟ್ ಪಾರ್ಟಿಯ ಕೇಂದ್ರ ವಿದೇಶ ಆಯೋಗ ಕಾರ್ಯಾಲಯದ ನಿರ್ದೇಶಕ ವಾಂಗ ಯಿ ಇವರನ್ನು ಕೂಡ ಭೇಟಿ ಮಾಡಿದರು. ಆ ಸಮಯದಲ್ಲಿ ಇಬ್ಬರೂ ನಾಯಕರಲ್ಲಿ ಭಾರತ-ಚೀನಾ ಗಡಿಯ ಕ್ಷೇತ್ರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸುವ ಬಾಕಿ ಉಳಿದಿರುವ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.
EAM Jaishankar’s key meetings in Jakarta on the sidelines of Asean meetings:
Russia: Trade deficit, Ukraine conflict
US: PM Modi’s US visit, Ukraine, Myanmar
China: Border issues, aggressive actions by Beijing
Singapore: Fintech pic.twitter.com/s41WgObrkm— Sidhant Sibal (@sidhant) July 15, 2023
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ
ಇರಾನ್ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಪ್ರಮಾಣದ ಹಾನಿ! – ಡೊನಾಲ್ಡ್ ಟ್ರಂಪ್
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ