ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಬಿಸ್ಕತ್ತು, ಶೇವು, ಚೂಡಾ, ಚಿಪ್ಸ್, ಖಾರಾಶೇವು ಇವುಗಳಂತಹ ಖರೀದಿಸಿದ ಎಣ್ಣೆಯುಕ್ತ ತಿಂಡಿಗಳನ್ನು ಕೆಲವೊಮ್ಮೆ ಮನೋರಂಜನೆಗಾಗಿ ಅಥವಾ ಸ್ವಲ್ಪ ಬದಲಾವಣೆ ಎಂದು ತಿನ್ನಲು ಏನು ತೊಂದರೆಯಿಲ್ಲ; ಆದರೆ ಇಂತಹ ಪದಾರ್ಥಗಳನ್ನು ನಿಯಮಿತವಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕರವಾಗಿದೆ. ಅವುಗಳಲ್ಲಿ ಪಾಮಎಣ್ಣೆಯಂತಹ ಕೆಳಮಟ್ಟದ ಎಣ್ಣೆಯನ್ನು ಉಪಯೋಗಿಸಲಾಗುತ್ತದೆ. ಇದರಿಂದ ಶರೀರಕ್ಕೆ ಪೌಷ್ಟಿಕಾಂಶ ಸಿಗುವುದಿಲ್ಲ. ಇಂತಹ ಪದಾರ್ಥಗಳನ್ನು ನಿಯಮಿತವಾಗಿ ತಿಂದರೆ ಹಸಿವು ಕಡಿಮೆಯಾಗುವುದು, ಕೂದಲು ಉದುರುವಿಕೆ, ಕೂದಲು ಬಿಳಿಯಾಗುವಿಕೆ, ಮಲಬದ್ಧತೆ, ವಾತ ಇಂತಹ ತೊಂದರೆಗಳಾಗುವವು. ಈ ಪದಾರ್ಥಗಳ ಬದಲಾಗಿ ಹೆಸರುಕಾಳು, ಗೋದಿ ಹಿಟ್ಟು, ರವೆ, ಮೆಂತೆಕಾಳು ಇತ್ಯಾದಿಗಳಿಂದ ಮಾಡಿದ ಉಂಡೆಗಳು, ಶೇಂಗಾ ಚಿಕ್ಕಿ, ಎಳ್ಳುಬೆಲ್ಲ ಇಂತಹ ಪೌಷ್ಠಿಕ ಪದಾರ್ಥಗಳನ್ನು ತಿನ್ನಬೇಕು.’
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಹಸಿ ಎಣ್ಣೆ ತಿನ್ನುವುದು ತಪ್ಪು![]() ‘ಹಸಿ ಖಾದ್ಯ ಎಣ್ಣೆಯು ಅಗ್ನಿಯನ್ನು (ಜೀರ್ಣಕ್ರಿಯೆ) ಮಂದಗೊಳಿಸುತ್ತದೆ. ಇಂತಹ ಎಣ್ಣೆಯನ್ನು ನಿಯಮಿತವಾಗಿ ತಿಂದರೆ ಬಾಯಿ ಹುಣ್ಣಾಗುವುದು, ಪಿತ್ತದ ತೊಂದರೆಯಾಗುವುದು, ಮೈಮೇಲೆ ಗುಳ್ಳೆಗಳು ಬರುವುದು, ಇವುಗಳಂತಹ ತೊಂದರೆಗಳಾಗ ಬಹುದು. ಆದ್ದರಿಂದ ಚಟ್ನಿಯ ಮೇಲೆ ಅಥವಾ ಅನ್ನದಲ್ಲಿ ಹಸಿ ಎಣ್ಣೆ ಹಾಕಿ ತಿನ್ನಬಾರದು. ಎಣ್ಣೆಯ ಹಸಿತನವನ್ನು ತೆಗೆಯಲು ಒಂದು ಲೀಟರ್ ಖಾದ್ಯ ಎಣ್ಣೆಯಲ್ಲಿ ಕಾಲು ಚಮಚ ದಷ್ಟು ಶುಂಠಿ, ಅರಿಸಿಣ, ಅಜ್ವಾನ ಅಥವಾ ಜೀರಿಗೆ ಇವುಗಳಲ್ಲಿ ಯಾವುದಾದರೊಂದು ಮಸಾಲೆ ಪದಾರ್ಥವನ್ನು ಹಾಕಿ ಈ ಎಣ್ಣೆಯನ್ನು ಬಿಸಿ ಮಾಡಿ ತಣ್ಣಗಾದ ನಂತರ ಸೋಸಿಡಬೇಕು. ಒಗ್ಗರಣೆಯಲ್ಲಿ ಹಸಿ ಖಾದ್ಯ ಎಣ್ಣೆಯನ್ನು ಉಪಯೋಗಿಸಬಹುದು; ಏಕೆಂದರೆ ಒಗ್ಗರಣೆಯಲ್ಲಿನ ಮಸಾಲೆಯ ಪದಾರ್ಥಗಳಿಂದ ಎಣ್ಣೆಯ ಹಸಿತನವು ಹೊರಟು ಹೋಗುತ್ತದೆ. – ವೈದ್ಯ ಮೇಘರಾಜ ಪರಾಡಕರ |

ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !